Sunday 1 August 2021

ವಿನಯಾದಿಂದಲಿ ನಮಿಸುವೆನಾ ವೃಂದಾ ವನದಿ ರಾಜಿಪ ರಾಘವೇಂದ್ರ ಗುರವಿನ ankita varadesha vittala

 ..

kruti by ವರದೇಶ ವಿಠಲರು varadesha vittala dasaru

ರಾಘವೇಂದ್ರರ ಸ್ತೋತ್ರ


ವಿನಯಾದಿಂದಲಿ ನಮಿಸುವೆನಾ ವೃಂದಾ

ವನದಿ ರಾಜಿಪ ರಾಘವೇಂದ್ರ ಗುರವಿನ ಪ


ದುರಿತವಾರಣ ಪಂಚಾನನನ ನರ -

ಹರಿರೂಪಸ್ತಂಭದಿ ಪ್ರಕಟಗೈಸಿದನ

ಹರಿಭಕ್ತಾಗ್ರಣಿಯೆಂದೆನಿಪನ ನಾರ -

ದರ ಉಪದೇಶಗರ್ಭದಿ ಕೈಕೊಂಡಿಹನ 1


ಸಿರಿವ್ಯಾಸತೀರ್ಥರೆನಿಪನ ಪುರಂ -

ದರ ದಾಸಾರ್ಯರಿಗು ಪದೇಶ ಗೈದವÀನ

ವರಚಂದ್ರಿಕಾ ರಚಿಸಿದನ ದುಷ್ಟ

ಪರಮಾದ್ರಿಗಳಿಗೆ ಕುಲಿಶನೆನಿಪನ 2


ಶ್ರೀ ಸುಧೀಂದ್ರ ಕರಾಬ್ಜಜನ ದಿವ್ಯ

ಭಾಸುರ ಪರಿಮಳ ಗ್ರಂಥ ಕರ್ತರನ -

ಮೀಸಲ ಮನದಿ ಭಜಿಪರನ ದೋಷ -

ನಾಶನ ಗೈಸಿ ಪೋಷಿಸುವ ಶಕ್ತರನ3


ವರಮಂತ್ರ ಸದ್ಮನಿಲಯನ ಶ್ರೀ -

ಗುರು ಮಧ್ವಮತ ದುರಂಧರದೆನಿಸುವನ

ಹರಿಪ್ರೀತಿ ಪೂರ್ಣಪಾತ್ರರನ

ಈ ಧರಿಯೊಳು ಬಹುಪರಿ ಮೆರೆವ ಮುನಿಪನ 4


ತುಂಗಭದ್ರಾತೀರವಾಸನ ಶುಭ

ಮಂಗಲಚರಿತ ಕಮಂಡಲಧರನ

ರಂಗವರದೇಶ ವಿಠಲನ ಪದ

ಭೃಂಗ ಯತಿಕುಲ ಕಂಜಾರ್ಕ ಸನ್ನಿಭನ 5

***


No comments:

Post a Comment