Monday 2 August 2021

ಓಂ ನಮೋ ನಾರಾಯಣಾಯ ತೇ ನಮೋ ankita uragadrivasa vittala

ಓಂ ನಮೋ ನಾರಾಯಣಾಯ

ತೇ ನಮೋ ನಮೋ ನಮೋ ಪ


ಓಂ ನಮೋ ಓಂಕಾರಾದಿ ನೀ ಘನ್ನ

ಮಹಿಮ ಅಷ್ಟಾಕ್ಷರಾತ್ಮಕನೆ ಅ.ಪ


ಪ್ರಣವ ಪ್ರತಿಪಾದ್ಯ ನೀ ಅಷ್ಟಾಕ್ಷರದೊಳು ವಿಶ್ವತÉೈಜಸ

ಪ್ರಾಜ್ಞ ತುರ್ಯಾತ್ಮ ಅಂತರಾತ್ಮ ಪರಮಾತ್ಮ e್ಞÁನಾತ್ಮ

ವರ್ಣಾತ್ಮಕ ನೀ ಓಂಕಾರದೊಳು ಅಉ

ಮನಾದಬಿಂದು ಘೋಷ ಶಾಂತ

ಅತಿಶಾಂತದೊಳು ಪ್ರತಿಪಾದ್ಯಮೂರುತಿ ಹರೆ1

ಪ್ರಣವದೊಳು ಆದಿವರ್ಣದಿಂದಭಿವ್ಮಕ್ತಿ

ಷೋಡಶ ಸುಸ್ವರಗಳ್ ಅನಂತ ವೇದಗಳ

ಕಾಲಗಳ್‍ವ್ಯಕ್ತವೊ

ಪ್ರಾಣ ಲಕುಮಿಯಭಿಮಾನಿಗಳನಂತ ವೇದಗಳಿಂ

ದನವರತ ನಿನ್ನಾಗುಣಗಳ ನುತಿಪರೋ

ವಿಶ್ವಮೂರುತೀ ಹರೆ2

ವರ್ಣದ್ವಿತೀಯದೊಳು ನೀ ಪ್ರತಿಪಾದ್ಯ ಅಭಿವ್ಯಕ್ತವಾದ

ವಯ್ಯ ಕವರ್ಗ ವರ್ಗವೈದು ಪಂಚಭೂತಗಳಂ

ವರ್ಣದೊಳಭಿಮಾನಿಗಳ್ ಭೂತಕ ಗಣಪ ಪ್ರಹವವಾಯು

ವಹ್ನಿ ಶನಿಯು ವರುಣಾರು ಗುಣಗಳ ನುತಿಪರೊ

ತೈಜಸ ಮೂರುತೇ3

ಪ್ರತಿಪಾದ್ಯನೆ ಮಕಾರ ವಾಚ್ಯ ಶ್ರೀ ಪ್ರಾಜ್ಞ ನಿನ್ನಿಂದಭಿ-

ವ್ಯಕ್ತಿ ಚವರ್ಗ ಪಂಚಕ e್ಞÁನೇಂದ್ರಿಯ ವೈದು

ತತ್ತದಭಿಮಾನಿ ಆಶ್ವಿನಿ ವರುಣ ಸೂರ್ಯ ಪ್ರಾಣ ದಿಗ್ದೇ-

ವತೆಗಳಿಹರು ಪ್ರತಿಗಾಣಿನೊ ಶ್ರೀ ಪ್ರಾಜ್ಞಮೂರುತಿ ಹರೆ4

ನಾದವಾಚ್ಯಪ್ರತಿಪಾದ್ಯ ತುರ್ಯನೆ ಅಭಿವ್ಯಕ್ತ

ಪಂಚವರ್ಣ ಟವರ್ಗ ಕರ್ಮೇಂದ್ರಿಯಗಳ್

ತದಭಿಮಾನಿಗಳು ಆದರು ಸ್ವಯಂಭುವ ಮನು ಜಯಂತ

ದಕ್ಷ ವಹ್ನಿ ದೇವತೆಗಳು ಅದುಭುತ ಮಹಿಮ

ಶ್ರೀ ತುರ್ಯ ಮೂರುತೆ 5

ಬಿಂದುವಾಚ್ಯ ಪ್ರತಿಪಾದ್ಯ ನೀನಾತ್ಮ ಬಿಂದುವಿಂದ ತವರ್ಗ

ಪೊಂದಿಕೊಂಡಿಹುದು ತನ್ಮಾತ್ರಪಂಚಕ

ಗಂಧ ರಸ ರೂಪಸ್ಪರ್ಶ ಶಬ್ದಗಳಿಗೆ

ಪಂಚವಾಯುಗಳಿಹರಯ್ಯ

ಬಂಧ ಮೋಚಕ ನೀ ಕಾರಣ ಹರೆ 6

ಘೋಷದಿಂದಲಭಿವ್ಯಕ್ತಿ ಪಂಚಮನೋ

ವೃತ್ತಿಗಳದರಭಿಮಾನಿ

ಓಷಧೀಧರ ಖಗಪ ಶೇಷೇಂದ್ರ ಕಾಮರು

ಘೋಷವಾಚ್ಯ ನೀನಂತರಾತ್ಮ ಪ್ರತಿಪಾದ್ಯನಹುದೋ

ಪಕಾರ ಪಂಚವರ್ಣ

ದೋಷರಹಿತ ಮನೋಧಾಮದಿ ನೀ ದೊರೆ 7

ಪರಮಾತ್ಮನೆ ನೀ ಶಾಂತವಾಚ್ಯ

ಪ್ರತಿಪಾದ್ಯನಹುದೋ ಅಭಿವ್ಯಕ್ತಿಯ

ಕಾರಾದಿ ಸಪ್ತವರ್ಣ ಸಪ್ತಧಾತುಗಳಲ್ಲಿ

ನಿರುತದಿ ಯಜ್ಞರಾಮ ಲಕುಮಿ ಪತಿಯು

ವರಹ ಶೇಷ ಷಡ್ಗುಣಸಾರ

ಇರುವರಿವರ ಪರಿ ಅರಿಯೆನೊ ಹರಿಯೆ 8

ಅತಿ ಶಾಂತದೊಳು ಪ್ರತಿಪಾದ್ಯನಾಗಿಹೆ e್ಞÁನಾತ್ಮ

ಹಕಾರಾದಿ ತ್ರೈವರ್ಣ ಅದರಿಂದ ಗುಣಕ್ರಿಯವೊ

ತತುಕ್ರಿಯ ಜಾಗೃತ ಸ್ವಪ್ನ ಸುಷುಪ್ತಿ ವಿಶ್ವಾದಿರೂಪದಿಂದ

ತೋರುವ ಶ್ರೀವೇಂಕಟೇಶ

ಉರಗಾದ್ರಿವಾಸವಿಠಲ ಮೂರುತೇ 9

****


No comments:

Post a Comment