Monday 2 August 2021

ವರದೇಂದ್ರ ತೀರ್ಥರ ಪದಧ್ಯಾನ ankita karpara narahari varadendra teertha stutih

ವರದೇಂದ್ರ ತೀರ್ಥರ ಪದಧ್ಯಾನ,

ಮುಕ್ತಿಮಾರ್ಗಕೆ ಸೋಪಾನ ಪ


ಗುರುವಸುಧೇಂದ್ರರ ಕರ ಕಮಲಜ ತವ ಚರಣಯುಗಲ

ಪರಿಶೇವನಾ 1


ಪರಮತ ತಿಮಿರ ಭಾಸ್ಕರನೆಂಬುವ ತವ

ಬಿರುದಾವಳಿ ಸಂಕೀರ್ತನಾ 2


ಕ್ಷೋಣಿಸುರರಿಗೆ ದ್ರವ್ಯ ದಾನದಿಂದಲಿ ಜಿತ

ಭಾನುಜರೆಂಬುವ ಭಾಷಣ 3


ಹರುಷತೀರ್ಥರ ಮತ ಶರಧಿಗೆ ಪೂರ್ಣ

ಚಂದಿರನೆಂಬುವ ಶುಭಗಾಯನ 4


ಶರಣರ ಪೊರಿವ 'ಕಾರ್ಪರನರಸಿಂಹ'ನ

ಕರುಣ ಪಾತ್ರ ತವಶೇವನಾ 5

****


No comments:

Post a Comment