Wednesday 1 September 2021

ಇನ್ನೇನು ಭಯವಿಲ್ಲನಿನಗೆ ಘನ್ನಗುರುವರ ಪಾದ ಭಜಿಸೊ ಮನದೊಳಗೆ ankita gurujagannatha vittala

..

ಇನ್ನೇನು ಭಯವಿಲ್ಲನಿನಗೆ

ಘನ್ನಗುರುವರ ಪಾದ ಭಜಿಸೊ ಮನದೊಳಗೆ ಪ


ಬನ್ನಗೊಳಿಸುವಾ ವ್ಯಾಧಿ

ಮುನ್ನೆ ಬಾರದೋ ಮಗುವೇ ಅ.ಪ

ಆವ ಜನ್ಮದ ಕರ್ಮ ಶೇಷದಲಿಂದ

ಈ ವಿಧದ ವ್ಯಾಧಿ ಸಂಭವಿಸಿತಲ್ಲಾ

ಕೋವಿದೋತ್ತಮರ ಪಾದ ಸೇವೆ ಸತ್ಕಾರದಿಂದಲೇ

ತಾವಕÀನು ನೀನೆಂದು ಗುರುರಾಯ ಪೊರೆವಾ 1


ಏನು ಕರುಣವೊ ಗುರುವರಗೆ ನಿನ್ನಲಿ

ನೀನೇನು ಧನ್ಯನೋ ಈ ಲೋಕದಲ್ಲೀ

ದೀನಭಾವವನೋಡಿ ದೀನವತ್ಸಲಬಂದು

ತಾನೆ ಕರುಣದಿ ಪೊರೆದಮೇಲೇ2


ಅರಿಯದಿಹ ನರರಿಗಾಶ್ಚರ್ಯ ತೋರಲೋಸುಗದಿ

ಮರೆಯದಂತೆ ಮನಕೆ ಕುರುಹು ಮಾಡಿ

ಧರೆಯೊಳಗೀ ಗುರುವರಗೆ ಸರಿಯಿಲ್ಲ

ಗುರುಜಗನ್ನಾಥ ವಿಠಲ ತಾನೇ ಬಲ್ಲಾ 3

***

 

No comments:

Post a Comment