Wednesday 1 September 2021

ನೀರಜ ಯುಗ ಮನೋ ವಾರಿಜದಲಿ ನಾ ಭಜಿಸುವೆನು ankita gurujagannatha vittala

 ..

ನೀರಜ ಯುಗ ಮನೋ -

ವಾರಿಜದಲಿ ನಾ ಭಜಿಸುವೆನು ಪ


ಸಾರಿದ ಜನರ‌ಘದೂರದಿ ಓಡಿಸಿ

ಧಾರುಣಿಯೊಳು ಸುರಸೌರಭಿ ಎನಿಸಿಹ ಅ.ಪ


ಅವರ ಪದಜಲ ಈ ಭುವನತ್ರಯ

ಪಾವನ ತರವೆಂದೆನಿಸುವದೋ

ಅವರ ಪದಯುಗ ಕೋವಿದಜನರು

ಭಾವದಿ ದಿನದಿನ ಸೇವಿಪರೋ

ಅವರ ಹೃದಯದಿ ನಾರಾಯಣ ಚ -

ಕ್ರಾವತಾರವ ಧರಿಸಿಹನೊ

ಶ್ರೀವರ ಹರಿ ಕರುಣಾವಲೋಕನದಿ

ದೇವಸ್ವಭಾವವ ನೈದಿಹರೋ 1


ಆವ ಮಾನವನಿವರಚರಣ ಸೇವಕತೆರನೆಂದೆನಿಸುವನ್ನೋ

ಕೋವಿದ ಜನರೆಲ್ಲರು ಆವನ

ದೇವೋತ್ತುಮನೆಂದೆನಿಸುವನು

ಪಾವನಿ ಮುಖ ದೇವೋತ್ತುಮರೆಲ್ಲರು

ಈ ವಿಧ ಮಹಿಮೆಯ ತೀವ್ರದಿ ತೋರುವ 2


ಅವರು ಅವನೀ ದೇವತೆಗಳಿಗೆ

ಜೀವನವಿತ್ತು ಪೊರೆದಿಹರೋ

ಪಾವಕಘಾಕಿದ ಹಾರವ ಮತ್ತೆ

ಭೂವರನಿಗೆ ತಂದಿತ್ತಿಹರೋ

ಮಾವಿನ ರಸದಲಿ ಬಿದ್ದಿಹ ಶಿಶುವಿಗೆ

ಜೀವನವಿತ್ತು ಕಾಯ್ದಿಹರೋ

ಶೈವನ ನಿಜಶೈವವ ಬಿಡಿಸೀ ತಮ್ಮ

ಸೇವೆಯನಿತ್ತು ಕಾಯ್ದಿಹರೋ 3


ಸಲಿಲವ ತಂದಿರುತಿಹ ನರನಿಗೆ

ಸುಲಲಿತ ಮುಕ್ತಿಯನಿತ್ತಿಹರೋ

ಚಲುವ ತನಯನಾ ಪುಲಿನದಿ ಪಡೆದಿಹ

ಲಲನೆಯ ಚೈಲದಿ ಕಾದಿಹರೋ

ಸಲಿಲವು ಇಲ್ಲದೆ ಬಳಲಿದ ಜನಕೆ

ಸಲಿಲವನಿತ್ತು ಸಲಹಿದರೋ

ಇಳೆಯೊಳು ಯತಿಕುಲತಿಲಕರೆಂದೆನಿಸಿ

ಸಲಿದಂಥದು ತಾವು ಸಲಿಸಿಹರೋ 4


ಅನುದಿನದಲಿ ತಮ್ಮ ಪದಕಮಲವನು

ಮನದಲಿ ಬಿಡದೆ ಭಜಿಸುವರಾ

ಜನರಿಗೆ ನಿಜಘನಸುಖವನು ಕೊಟ್ಟವ -

ರನುಸರಿಸೀ ಇರುತಿಹರಾ

ಮನೋ ವಾಕ್ಕಾಯದಿ ನಂಬಿದ ಜನಕೆ

ಜನುಮವನ್ನುನೀಡರು ಇವರ

ಘನಗುಣ ನಿಧಿ ಗುರುಜಗನ್ನಾಥ ವಿಠಲ -

ನಣುಗಾಗ್ರೇಸರೆರೆನಿಸಿಹರಾ 5

***


No comments:

Post a Comment