Saturday 1 May 2021

ಹರಿಯ ದರುಶನಕಾಗಿ ತೆರಳಿ ಪೋದರು ನಮ್ಮ ಉರಗಾದ್ರಿವಾಸ ankita tandevenkatesha vittala uragadrivasa vittala dasa stutih

ಉರಗಾದ್ರಿವಾಸ ವಿಠ್ಥಲರು...ದಿನಾಂಕ : 30.11.1964, ಅಂದರೆ....ಶ್ರೀ ಕ್ರೋಧಿ ನಾಮ ಸಂವತ್ಸರ ಕಾರ್ತೀಕ ಬಹುಳ ದ್ವಾದಶೀ ದಿನದಂದು ಅಪಾರ ಶಿಷ್ಯ ವರ್ಗವನ್ನು ತೊರೆದು ಹರಿಪಾದ ಸೇರಿದರು.

" ಶ್ರೀ ತಂದೆ ವೆಂಕಟೇಶ ವಿಠ್ಠಲರ ಮಾತಲ್ಲಿ... " 

ಹರಿಯ ದರುಶನಕಾಗಿ 

ತೆರಳಿ ಪೋದರು ನಮ್ಮ ।

ಉರಗಾದ್ರಿವಾಸನ ಪ್ರಿಯ 

ದಾಸೋತ್ತಮರು ।। ಪಲ್ಲವಿ ।। 


ಹರಿದಾಸ ಪೇಳಿಗೆಯೊಳು 

ಪ್ರತಿಭಾನ್ವಿತ ।

ಸರಸ ಕಲಾಚಾರ್ಯ 

ಯೋಗಿವರ್ಯ ।

ಧರೆಯೊಳು ತ್ರಿವನತಿ 

ಪರಮಾಯುಶ್ಯಾವನೆಲ್ಲ ।

ಹರಿ ಸೇವೆಗೆಂದಿರಿಸಿ 

ಛಾತ್ರರ ಕಣ್ದೆರಿಸಿ ।। ಚರಣ ।।

**** 

No comments:

Post a Comment