Tuesday 1 June 2021

ಶರಣು ಹೊಕ್ಕೆನು ನಿನ್ನ ಚರಣ ಕಮಲಕ್ಕೆ ನಾ ankita hanumesha vittala

ಶರಣು ಹೊಕ್ಕೆನು ನಿನ್ನ ಚರಣ ಕಮಲಕ್ಕೆ ನಾ ಗುರುಸತ್ಯಬೋಧರಾಯಾ

ಕರುಣಿಗಳರಸನೆ ತರಳನ ಮೊರೆ ಕೇಳಿ ಪೊರೆವುದು ಎನ್ನ ಜೀಯಾ ಪ


ಬೇಡಿಕೊಳ್ಳಲು ಬಾಯಿಬಾರದೋ ನಾ ಹಿಂದೆ ಮಾಡಿದಪರಾಧವ

ನೋಡದೆ ಎನ್ನವಗುಣ ಕೈಯಪಿಡಿದು ಕಾಪಾಡಲು

ನಿನಗೀಡೆ ದಯಮಾಡೆ 1


ಪುಟ್ಟದ ಪುಟಕ್ಕಿಕ್ಕಿದ ಚಿನ್ನದಂತಿಹ ಶ್ರೇಷ್ಠ ವೈಷ್ಣವ ಕುಲದಿ

ಭ್ರಷ್ಟ ಮಾಡಿದೆ ಬಾಳು ಪೇಳಲೇನು ದಯದೃಷ್ಟಿ

ಇಡುವುದೆನ್ನೊಳು ದಯಾಳು 2


ಮರುತ ಮತವ ನಂಬಿ ನಡೆವರ ಪದಧೂಳಿ ಧರಿಸುವ ಭಾಗ್ಯವನೇ

ಗುರುವರ್ಯ ಕರುಣಿಸು ಹನುಮನಯ್ಯನ ಪಾದಸರಸಿಜಭೃಂಗ

ನೀನು ಸುರಧೇನು 3

****


No comments:

Post a Comment