Saturday 1 May 2021

ಮುನಿ ಕುಲೋತ್ತಮ ಗುರುರಾಯರ ಸದ್ವಂಶೋದ್ಭವ ankita venkatanatha muneendra teertha srirangam stutih

by ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆ


ಮುನಿ ಕುಲೋತ್ತಮ ಗುರು-

ರಾಯರ ಸದ್ವಂಶೋದ್ಭವ ।

ಮುನೀಂದ್ರತೀರ್ಥ ಯತಿ -

ಚಂದ್ರಮನ ನೋಡೋಣ ಬಾ ಸಖೀ  ।। ಪಲ್ಲವಿ ।।


ಸುಂದರ ವೃಂದಾವನದಿ ರಾಜಿಸುವ ।

ವಂದ್ಯ ಜನರ ಪೊರೆವ ಯತಿವರ ।। ಚರಣ ।।


ಶೇಷ ಸನ್ನಿಧಾನದಿ ಶೋಭಿಪ । ಅ ।

ಶೇಷ ಸುಜನರ ಕಲ್ಪದ್ರುಮನ ।। ಚರಣ ।।


ವಿಬುಧೇಂದ್ರ ವಿಜಯ ವಿರಚಿಸಿದ ಧೀರ ।

ವಿಬುಧೇಶರೊಡೆಯ ವೇಂಕಟನಾಥನ -

ಪ್ರಿಯ ಗುರುಗಳ ।। ಚರಣ ।।

***

No comments:

Post a Comment