Saturday 1 May 2021

ಇಂದು ಆರುತಿ ತಂದು ಬೆಳಗಿರೆ ಸಿಂಧುರಾಜನ ಕುವರಿಗೆ ankita karpara narahari

 ಕಾರ್ಪರ ನರಹರಿದಾಸರು ರಚಿಸಿದ ಪ್ರಸಿದ್ಧ ಕೃತಿಗಳು


ಇಂದು ಆರುತಿ ತಂದು ಬೆಳಗಿರೆ

 ಸಿಂಧುರಾಜನ ಕುವರಿಗೆ

ಸಿಂಧು ರಾಜನ ಕುವರಿಗೆ 

ಅರವಿಂದ ನಾಭನ ಮಡದಿಗೆ || ಪ ||


ಅಂದು ಸುರಕೃತ ಸಿಂಧು ಮಥನದಿ ಬಂದು

ನೋಡುತ ಕೃಷ್ಣಗೆ

ವಂದಿಸುತ ಪೂಮಾಲೆ ಹಾಕಿದ

ನಂದಗೋಪಕುಮಾರಗೆ || 1 ||


ಎಲ್ಲದೇಶ ದೊಳೆಲ್ಲ ಕಾಲದೊಳೆಲ್ಲ 

ಸುರರೊಳು ಕೃಷ್ಣಗೆ

ಇಲ್ಲ ಸಮರೆಂತೆಂಬುದನು ಜಗಕೆಲ್ಲ 

ತೋರಿದ ದೇವಿಗೆ || 2 ||


ವಾರವಾರದಿ ಚಾರುಪದಯುಗ 

ಸಾರಿಭಜಿಸುವ ಜನರಿಗೆ 

ಆ-ಪಾರ ಸೌಖ್ಯಗಳೀವ 

ಕಾರ್ಪರ ನಾರಸಿಂಹನ ರಾಣಿಗೆ || 3 ||

****


No comments:

Post a Comment