Friday 20 December 2019

ತೋರೆ ಬೇಗನೇ ತೋಯ ಜನಯನೆ ಮದವಾರಣ ankita shree krishna TORE BEGANE TOYE JANAYANE MADAVAARANA

tvgc+suvarna

csr+ at krishna vrundavana Dallas Tx USA



ರಾಗ ಮೋಹನ
Audio by Vidwan Sumukh Moudgalya


ಶ್ರೀ ವ್ಯಾಸರಾಯರ ಕೃತಿ 
 

ತೋರೆ ಬೇಗನೆ ತೋಯಜನಯನೆ । ಮದವಾರಣ ಗಮನೆ ॥ಪ॥
ಮಾರನ ತಾಪಕೆ ಸೈರಿಸಲಾರೆನೆ
ನೀರೆ ನಿನಗೆ ಮುತ್ತಿನ್ಹಾರವ ಕೊಡುವೆ ॥ಅ.ಪ॥

ನೀರೊಳು ಮುಳುಮುಳುಗಾಡುತ ಬಂದು।ಮಥಿಸಿದನವ ಸಿಂಧು ।
ಧಾರುಣಿ ಚಿಮ್ಮುತ ಮೇಲಕೆ ತಂದು। ದನುಜನ್ನ ಕೊಂದು।
ಮೂರು ಪಾದವ ಬೇಡುತ ನಿಂದು । ಮುನಿಕುಲದಲಿ ಬಂದು॥
ನಾರಿಬಿಟ್ಟು ಪರನಾರಿಯರಾಳಿದ
ತೋರೆ ರಮಣಿ ಹಯವೇರಿ ಮೆರೆದನ ॥1॥

ಕತ್ತಲೆದೈತ್ಯನೊಡನೆ ಕಾದಿದ ಧೀರ । ಕಡೆದನು ಕೂಪಾರ ।
ಕುತ್ತಿ ಮಣ್ಣಗಿದು ಮೆದ್ದನು ಬೇರ । ದಾನವ ಸಂಹಾರ ।
ಒತ್ತಿ ಬಲಿಯನ್ನು ಕಾಯ್ದನು ಶೂರ । ಕುಜನಕುಠಾರ ॥
ಹತ್ತುಶಿರನ ಕತ್ತರಿಸಿ ಗೋಕುಲದೊಳು
ಬತ್ತಲೆ ರಾಹುತನಾಗಿ ಮೆರೆದನ ॥2॥

ನಿಗಮ ಕದ್ದವನ ನೀಗಿದ ಧಿಟ್ಟ । ನೆಗಹಿದ ಬೆಟ್ಟ ।
ಅಗಿದು ಮಣ್ಣನೆ ಜಠರದಲಿಟ್ಟ । ಘುಡಿಘುಡಿಸುವಸಿಟ್ಟ ।
ಜಗಕೆಲ್ಲ ನೋಡೆ ಎರಡಡಿಯಿಟ್ಟ । ಕೊಡಲಿಯ ಪೆಟ್ಟ ॥
ಮೃಗವ ಕೆಡಹಿ ಕುಂತಿ ಮಗಗೆ ಸಾರಥಿಯಾಗಿ
ಜಗವ ಮೋಹಿಸಿ ಹಯವೇರ್ದ ಶ್ರೀಕೃಷ್ಣನ ॥3॥
*********

by vyasaraja
ವ್ಯಾಸರಾಯರು
ತೋರೆ ಬೇಗನೆ ತೋಯಜನಯನೆ
ಮದವಾರಣ ಗಮನೆ ಪ

ಮಾರನ ತಾಪವ ಸೈರಿಸಲಾರೆನೆನೀರೆ 
ನಿನಗೆ ಮುತ್ತಿನ್ಹಾರವ ಕೊಡುವೆನೆ ಅ.ಪ

ನೀರೊಳು ಮುಳು ಮುಳುಗಾಡುತ 
ಬಂದುಮಥಿಸಿದ ಪಯ ಸಿಂಧುಧಾರುಣಿ 
ಚಿಮ್ಮುತ ಮೇಲಕೆ ತಂದುದನುಜನ್ನ 
ಕೊಂದುಮೂರುಪಾದವ ಬೇಡುತ 
ನಿಂದುಮುನಿಕುಲದಲಿ ಬಂದುನಾರಿಬಿಟ್ಟು 
ಪರನಾರಿಯರಾಳಿದತೋರೆರಮಣಿ ಹಯವೇರಿ ಮೆರೆದನ 1

ಕತ್ತಲೆ(ತಾಮಸ ದೈತ್ಯ)ನೊಡನೆ ಕಾದಿದನು 
ಧೀರಕಡೆದನು ಕೂಪಾರಕುತ್ತಿ ಮಣ್ಣಗಿದು 
ಮೆದ್ದನು ಬೇರದಾನವ ಸಂಹಾರ ಒತ್ತಿ ಬಲಿಯನು 
ಕಾಯ್ದನು ಶೂರಕುಜನ ಕುಠಾರ 
ಹತ್ತು ಶಿರನ ಕತ್ತರಿಸಿ ಗೋಕುಲದೊಳು
ಬತ್ತಲೆ ರಾಹುತನಾಗಿ ಮೆರೆದನ 2

ನಿಗಮ ಕದ್ದವನ ನೀಗಿದ ಧಿಟ್ಟನೆಗಹಿದ 
ಬೆಟ್ಟಅಗಿದು ಮಣ್ಣನೆ ಜಠರದಲ್ಲಿಟ್ಟಘುಡಿ 
ಘುಡಿಸುವಸಿಟ್ಟಜಗಕೆಲ್ಲ ನೋಡೆ ಎರಡಡಿಯಿಟ್ಟ
ಕೊಡಲಿಯ ಪೆಟ್ಟಮೃಗವ ಕೆಡಹಿ ಕುಂತಿಮಗಗೆ 
ಸಾರಥಿಯಾಗಿಜಗವ ಮೋಹಿಸಿ 
ಹಯವೇರ್ದ ಶ್ರೀಕೃಷ್ಣನ 3
***


No comments:

Post a Comment