Tuesday 3 December 2019

ಒಂದೇ ಮನದಲಿ ಭಜಿಸು ವಾಗ್ದೇವಿಯ purandara vittala ONDE MANADALI BHAJISU VAAGDEVIYA


2nd Audio by Mrs. Nandini Sripad

ಶ್ರೀ ಪುರಂದರದಾಸರ ಕೃತಿ 

 ರಾಗ ತೋಡಿ           ಮಿಶ್ರಛಾಪುತಾಳ 

ಒಂದೇ ಮನದಲಿ ಭಜಿಸು ವಾಗ್ದೇವಿಯಾ ॥ ಪ ॥
ಇಂದುಮತಿ ಕೊಡುವಳು ಶ್ರೀಹರಿಯ ಧ್ಯಾನದೊಳು ॥ ಅ ಪ ॥

ಹಿಂದೆ ಪ್ರಹ್ಲಾದನು ಕಮಲಜನ ಸತಿಗೆರಗಿ ।
ಬಂದು ಆರಂಭಿಸಲು ಹರಿ ವಿಶ್ವಮಯನೆಂದು ॥
ಬಂದ ವಿಘ್ನವ ಕಳೆದು ಭಾವಶುದ್ಧಿಯನಿತ್ತು ।
ಹೊಂದಿಸಿದಳಾ ಶ್ರೀಹರಿಯ ಚರಣವನು ॥ 1 ॥

ಅಂದು ದಶಮುಖನನುಜನು ವಂದಿಸದೆ ವಾಣಿಯನು ।
ಬಂದು ತಪವನುಗೈಯೆ ಬಹುಕಾಲಕೆ ॥
ಅಂದದಿಂ ಅಜ ಮೆಚ್ಚಿ ವರವಧಿಕ ಬೇಡೆನಲು ।
ಬಂದು ಜಿಹ್ವೆಯಲಿ ನಿದ್ರೆಯನು ಬೇಡಿಸಿದಳು ॥ 2 ॥

ಅರಿತು ಭಜಿಸಲು ಬಿಡದೆ ಅಜನರಸಿಯ ನಿತ್ಯ ।
ಉರುತರವಾದ ವಾಕ್ಬುದ್ಧಿಯನಿತ್ತು ॥
ನಿರುತ ಶ್ರೀಪುರಂದರವಿಠಲನ ಸೇವೆಯೊಳು ।
ಪರತತ್ವದ ಕಥಾಮೃತವನುಣಿಸುವಳು ॥ 3 ॥
***


Onde manadali bhajisu vagdeviya ||pa||

Indu mati koduvalu shrihariya dhyanadali ||a pa||

Hinde prahladanu kamalajana satigeragi nindu
Aradhisalu harivishvamayanendu |
Bandu vignava kaledu bhavashuddhiyannittu |
Hondisidalaga shrihariya charanadalli ||1||

Andu dashamukananuja vandisadhe vaniyanu |
Bandu tapavanu gaiye bahukalake |
Andadindagamecchi varavadhika bedenalu |
Nindu jihveyali nidreya bedisidalu ||2||

Aritu bhajisalu bidade ajanarasiya nitya
Urutara vak shuddhiyannittu |
Niruta shripurandaravithalana seveyolu |
Paratattvavada kathamrutavanunisuvalu ||3||
***


ರಾಗ ಯದುಕುಲಕಾಂಭೋಜ ಝಂಪೆತಾಳ

ಒಂದೇ ಮನದಿ ಭಜಿಸು ವಾಗ್ದೇವಿಯ ||ಪ ||
ಇಂದುಮತಿ ಕೊಡುವಳು ಹರಿಯ ಧ್ಯಾನದಲಿ ||ಅ ||

ಹಿಂದೆ ಪ್ರಹ್ಲಾದನು ಕಮಲಜನ ಸತಿಗೆರಗಿ
ನಿಂದು ಆರಾಧಿಸಲು ಹರಿ ವಿಶ್ವ(ಮಯ)ನೆಂದು
ಬಂದ ವಿಘ್ನವ ಕಳೆದು ಭಾವ ಶುದ್ಧಿಯನಿತ್ತು
ಪೊಂದಿಸಿದಳಾಗ ಶ್ರೀ ಹರಿಯ ಚರಣದಲಿ ||

ಅಂದು ದಶಮುಖನನುಜ ವಂದಿಸದೆ ವಾಣಿಯನು
ನಿಂದು ತಪವನು ಗೆಯ್ಯೆ ಬಹುಕಾಲವು
ಅಂದದಿಂದಜ ಮೆಚ್ಚಿ ವರವಧಿಕ ಬೇಡೆನಲು
ನಿಂದು ಜಿಹ್ವೆಯಲಿ ನಿದ್ರೆಯ ಬೇಡಿಸಿದಳು ||

ಅರಿತು ಭಜಿಸಲು ಬಿಡದೆ ಅಜನರಸಿಯ ನಿತ್ಯ
ಉರುತರವಾದ ವಾಕ್ಶುದ್ಧಿಯನಿತ್ತು
ತ್ವರಿತದಿ ಪುರಂದರವಿಠಲನ ಸೇವೆಯೊಳಿರಿಸಿ
ಪರತತ್ವವಾದ ಕಥಾಮೃತವ ನುಡಿಸುವಳು ||
***********

ಒಂದೇ ಮನದಲಿ ಭಜಿಸು ವಾಗ್ದೇವಿಯ |
ಇಂದುಮತಿಕೊಡುವಳು ಶ್ರೀಹರಿಯ ಧ್ಯಾನದೊಳು||

ಹಿಂದೆ ಪ್ರಹ್ಲಾದನು ಕಮಲಜನ ಸತಿಗೆರಗಿ |ಬಂದು ಆರಂಭಿಸಲುಹರಿವಿಶ್ವಮಯನೆಂದು ||
ಬಂದವಿಪ್ಲವಕಳೆದು ಭಾವಶುದ್ಧಿಯನಿತ್ತು |ಹೊಂದಿಸಿದಳು ಶ್ರೀ ಹರಿಯ ಚರಣವನು ||

ಅಂದು ದಶಮುಖನನುಜ ವಂದಿಸದೆ ವಾಣಿಯನು |ಬಂದು ತಪವನು ಗೈಯೆ ಬಹುಕಾಲಕೆ ||
ಅಂದದಿಂದ ಮೆಚ್ಚಿ ವರವಧಿಕ ಬೇಡೆನಲು |ಬಂದು ಜಿಹ್ವೆಯಲಿ ನಿದ್ರೆಯನು ಬೇಡಿಸಿದಳು ||

ಅರಿತು ಭಜಿಸಲು ಬಿಡದೆ ಅಜನರಸಿಯ ನಿತ್ಯ|ಉರುತರವಾದ ವಾಕ್ ಶುದ್ಧಿಯನಿತ್ತು ||
ನಿರುತ ಶ್ರೀಪುರಂದರವಿಠಲನ ಸೇವೆಯೊಳು |ಪರತತ್ತ್ವದ ಕಥಾಮೃತವನುಣಿಸಿದಳು ||
*******

No comments:

Post a Comment