Thursday 5 December 2019

ಗುರುರಾಘವೇಂದ್ರರ ಚರಣ ಕಮಲವನ್ನು gopala vittala GURU RAGHAVENDRARA CHARANA KAMALAVANNU


ರಾಗ ಮೋಹನ         ಖಂಡಛಾಪುತಾಳ 

1st Audio by Mrs. Nandini Sripad



RAGA ANANDABHAIRAVI


ಗುರುರಾಘವೇಂದ್ರರ ಚರಣ ಕಮಲವನ್ನು ।
ಸ್ಮರಿಸುವ ಸುಜನರಿಗೆ ॥ ಪ ॥
ಕರೆಕರೆಗೊಳಿಸುವ ದುರಿತ ರಾಶಿಗಳೆಲ್ಲ ।
ಕರಿಯು ಸಿಂಹನ ಕಂಡ ತೆರನೆಂತಾಹೋದಯ್ಯ ॥ ಅ ಪ ॥

ಗುರು ಮಧ್ವಮತವೆಂಬೊ ವರಕ್ಷೀರ ಶರಧಿಲಿ ।
ಪರಮ ಶೋಭಿತ ಶಶಿಯಂತುದಿಶಿ ॥
ಪರಮತ ತಿಮಿರಕ್ಕೆ ತರಣಿ ಕಿರಣನಾಗಿ ।
ಧುರದಿ ಮೆರೆವ ಸಿರಿರಾಮನರ್ಚಕರಾದ ॥ 1 ॥

ಹರಿಯೆ ಸರ್ವೋತ್ತುಮ ಸಿರಿಯೆ ಆತನ ರಾಣಿ ।
ಪರಮೇಷ್ಠಿ ಮರುತರೆ ಗುರುಗಳೆಂದು ॥
ಗರುಡ ಶೇಷ ರುದ್ರ ಸಮರೆಂದು ಸ್ಥಾಪಿಸಿ ।
ಸ್ಥಿರ ತಾರತಮ್ಯ ಪಂಚಭೇದ ಸತ್ಯವೆಂಬ ॥ 2 ॥

ರಾ ಯೆನ್ನೆ ರಾಶಿ ದೋಷಗಳ ದಹಿಸುವದು ।
ಘ ಯೆನ್ನೆ ಘನ ಜ್ಞಾನ ಭಕುತಿಯನಿತ್ತು ॥
ವೇಂ ಯೆನ್ನೆ ವೇಗಾದಿ ಜನನ ಮರಣ ಗೆದ್ದು ।
ದ್ರಾ ಯೆನ್ನೆ ದ್ರವಿಣೋದ ಶೃತಿಗೇವೆ ಘನಕಾಂಬ ॥ 3 ॥

ಅಂಧಕರಿಗೆ ಅಕ್ಷಿ ವಂದ್ಯರಿಗೆ ಸುತರು ।
ಬಂದ ಬಂದವರಭೀಷ್ಟಗಳನಿತ್ತು ॥
ಒಂದಾರುನೂರು ವತ್ಸರ ವೃಂದಾವನದಲ್ಲಿ । 
ನಿಂದು ಮೆರೆವ ಕೃಪಾಸಿಂಧು ದೇವಾಂಶರ ॥ 4 ॥

ವರತುಂಗಾತೀರ ಮಂತ್ರಾಲಯಪುರದಲ್ಲಿ ।
ಪರಿ ಪರಿ ಪೂಜಿ ಭೂಸುರರಿಂದ ಕೊಳುತ ॥
ಶಿರಿಯರಮಣ ನಮ್ಮ ಗೋಪಾಲವಿಠಲನ್ನ 
ಚರಣ ಸೇವಿಸುತಿಹ ಗುರು ಶಿಖಾಮಣಿಯಾದ ॥ 5 ॥
***




***


ಗುರು ರಾಘವೇಂದ್ರರ ಚರಣ ಕಮಲವನ್ನು 
ಸ್ಮರಿಸುವ ಮನುಜರಿಗೆ ।। ಪ ।।

ಕರೆ ಕರೆಗೊಳಿಸುವ ದುರಿತ ದುಷ್ಕೃತ್ಯ । 
ಕರಿಯು ಸಿಂಹನ ಕಂಡ ತೆರನಾಗುವುದು ।। ಅ.ಪ ।।

ಹರಿಯೆ ಸರ್ವೋತ್ತಮ ಸಿರಿಯು ಆತನ ರಾಣಿ ।
ಪರಮೇಷ್ಠಿ ಮರುತರೆ ಗುರುಗಳೆಂದು ।।
ಗರುಡ ಶೇಷ ರುದ್ರ ಸಮರೆಂದು ಸ್ಥಾಪಿಸಿ ।
ಸ್ಥಿರತರ ತಮ ಪಂಚ ಬೇಧ ಸತ್ಯವೆಂಬ ।। ೧ ।।

"ರಾ" ಎನ್ನೆ ರಾಶಿದೋಷಗಳನೆ ದಹಿಸುವ ।
"ಘ" ಎನ್ನೆ ಘನಜ್ಞಾನಭಕುತಿಯೀವ ।।
"ವೇಂ" ಎನ್ನೆ ವೇಗದಿ ಜನನ ಮರಣ ದೂರ ।
"ದ್ರ" ಎನ್ನೆ ದ್ರವಿಣಾರ್ಥ ಶ್ರುತಿಪ್ರತಿಪಾದ್ಯನ ಕಾಂಬ ।। ೨ ।।

ದೇವಾಂಶರಾಗಿ ತುಂಗಾತೀರದಿ ನಿಂತು ।
ಸೇವೆ ಭೂಸುರರಿಂದ ಬಹುಗೊಳ್ಳುತ ।।
ಭಾವಜನಯ್ಯ ಗೋಪಾಲವಿಠ್ಠಲನ್ನ ।
ಸೇವಿಸುತಿಹ ಯತಿಕುಲ ಶಿಖಾಮಣಿಯ ।। ೩ ।
****

ಗುರುರಾಘವೇಂದ್ರರ ಚರಣಕಮಲವನ್ನು
ಸ್ಮರಿಸುವ ಮನುಜರಿಗೆ            |                          | ಪ ||
ಕರೆಕರೆಗೊಳಿಸುವ ದುರಿತ ದುಷ್ಕೃತವೆಲ್ಲ
ಕರಿಯು ಸಿ೦ಹನ ಕ೦ಡ ತೆರನಾಗುವುದಯ್ಯ                 | ಅ ||

ಗುರುಮಧ್ವಮತವೆ೦ಬ ವರಕ್ಷೀರಾ೦ಬುಧಿಯಲ್ಲಿ
ಹರಧರಿಸಿದ ಶಶಿಯ೦ತುದಿಸಿ
ಪರಮತತಿಮಿರಕ್ಕೆ ತರಣಿ ಕಿರಣವೆನಿಸಿ
ಪಿರಿದು ಮೆರೆದ ಸೀತಾರಾಮಾರ್ಚಕರಾದ        || ೧ ||

ಹರಿಯೇ ಸರ್ವೊತ್ತಮ ಸಿರಿಯು ಆತನ ರಾಣಿ
ಪರಮೇಷ್ಟಿ ಮರುತರೆ ಗುರುಗಳೆ೦ದು
ಗರುಡ ಶೇಷ ರುದ್ರ ಸಮರೆ೦ದು ಸ್ಥಾಪಿಸಿ
ಸ್ಥಿರತರತಮ ಪ೦ಚಭೇದ ಸತ್ಯವೆ೦ಬ              || ೨ ||

ರಾಯೆನ್ನೆ ರಾಶಿದೋಷಗಳೆಲ್ಲ ದಹಿಸುವ
ಘಯೆನ್ನೆ ಘನಜ್ಞಾನ ಭಕ್ತಿಯೀವಾ
ವೇ೦ ಎನೆ ವೇಗದಿ ಜನನ ಮರಣ ದೂರ
ದ್ರಯೆನ್ನೆ ದ್ರವಿಣಾರ್ಥ ಶೃತಿಪಾದ್ಯನ ಕಾ೦ಬ        || ೩ ||

ಅ೦ಧಕರಿಗೆ ಚಕ್ಷು ವ೦ಧ್ಯೆಯರಿಗೆ ಸುತರು
ಬ೦ದಬ೦ದವರಿಗಭೀಷ್ಟವ ಕೊಡುತ
ಒ೦ದಾರುನೂರು ವತ್ಸರ ಬೃ೦ದಾವನದಲಿ
ಚ೦ದಾಗಿ ನಿ೦ದು ಮೆರೆವ ಕೃಪಾಸಿ೦ಧು               || ೪ ||

ದೇವಾ೦ಶರಾಗಿ ತು೦ಗಾತೀರದಿ ನಿ೦ದು
ಸೇವೆ ಭೂಸುರರಿ೦ದ ಬಹುಕೊಳ್ಳುತ
ಭಾವಜನಯ್ಯ ಗೋಪಾಲವಿಠ್ಠಲನ್ನ
ಸೇವಿಸುತಿಹ ಯತಿಕುಲಶಿಖಾಮಣಿಯಾದ   
****

ಗುರು ರಾಘವೇಂದ್ರರ ಚರಣ ಕಮಲವನ್ನು ಸ್ಮಸುವ ಮನುಜಗೆ | ಪ |

ಕರೆಕರೆಗೊಳಿಸುವ ದುರಿತ ದುಷ್ಕೃತವೆಲ್ಲ ಕರಿಯು ಕಂಡ ಸಿಂಹನ ತೆರನಾಗುವುದಯ್ಯ | ಅ ಪ |

ಗುರುಮಧ್ವಮತವೆಂಬ ವರ ಕ್ಷೀರಾಂಬುಧಿಯಲ್ಲಿ ಹರಿ ಧರಿಸಿದ ಶಶಿಯಂತುದಿಸಿ |
ಪರಮತ ತಿಮಿರಕ್ಕೆ ತರಣಿಕಿರಣನೆನೆಸಿ ಪಿರಿದುಮೆರೆವ ಸಿರಿರಾಮನರ್ಚಕರಾದ | ೧ |

ಹರಿಯೆ ಸರ್ವೋತ್ತಮ ಸಿರಿಯು ಆತನ ರಾಣಿ | ಪರಮೇಷ್ಟಿ ಮರುತರೆ ಗುರುಗಳೆಂದು |
ಗರುಡಶೇಷರುದ್ರ ಸಮರೆಂದು ಸ್ಥಾಪಿಸಿ | ಸ್ಥಿರ ತಾರತಮ್ಯ ಪಂಚಭೇದ ಸತ್ಯವೆಂಬ | ೨ |

ಅಂಧಕಗೆ ಚಕ್ಷು ವಂದ್ಯರಿಗೆ ಸುರತರು | ಬಂದಬಂದವರಭೀಷ್ಟಗಳನಿತ್ತು |
ಒಂದಾರುನೂರುವತ್ಸರ ವೃಂದಾವನದಲ್ಲಿ | ಚೆಂದಾಗಿ ನಿಂದು ಮೆರೆವ ಕೃಪಾಸಿಂಧು |೩ |

ರಾ ಎನ್ನೆ ದುರಿತರಾಶಿಗಳ ದಹಿಸುವ | ಘ ಎನ್ನೆ ಘನಜ್ಞಾನ ಭಕುತಿ ಈವ |
ವೇಂ ಎನ್ನೆ ವೇಗದಿ ಜನನಮರಣ ದೂರ | ದ್ರ ಎನ್ನೆ ದ್ರವಿಣಾರ್ಥ ಶ್ರುತಿ ಪ್ರತಿಪಾದ್ಯನ ಕಾಂಬ | ೪ |

ವರ ತುಂಗಾತೀರ ಮಂತ್ರಾಲಯ ಪುರದಲ್ಲಿ | ಪರಿಪರಿ ಸೇವೆ ಭೂಸುರರಿಂದ ಕೊಳುತ |
ಸಿರಿಯರಮಣ ನಮ್ಮ ಗೋಪಾಲವಿಟ್ಠಲನ | ಚರಣ ಸೇವಿಸುತಿಪ್ಪ ಗುರುಶಿಖಾಮಣಿಯಾದ | ೫
****

ರಾಗ - ಧನ್ಯಾಶ್ರೀ : ತಾಳ - ಏಕತಾಳ(raga tala may differ in audio)

No comments:

Post a Comment