Friday 27 December 2019

ಸತ್ಯನಾಥರಿಂದ ಆಶ್ರಮಕೊಂಡು madhwesha krishna satyabhinava teertha stutih

ಶ್ರೀ  ಸತ್ಯಾಭಿನವ ತೀರ್ಥರ ಸ್ಮರಣೆ

ಸತ್ಯನಾಥರಿಂದ ಆಶ್ರಮಕೊಂಡು ನಿತ್ಯ ತೃಪ್ತನ ಭಜಿಸುತ್ತ
ಚಿತ್ತ ಶುಧ್ಧಿಯಲಿಂದ ಆಶ್ರಮ ಕಾರ್ಯವ ಶ್ರಧ್ಧೆಯಿಂದಲಿ
ನಡೆಸುತ್ತ||ಪಲ್ಲ||

ಸ್ನಾನಕ್ಕೆ ಹೊರಟ ಶ್ರೀಪಾದರೊಂದು ದಿನ
ಸಂಕಲ್ಪಕ್ಕೆ ಬ್ರಾಹ್ಮಣರನ್ನ ಹುಡುಕಲು
ವೃಧ್ಧ ಬ್ರಾಹ್ಮಣ  ಬಂದು ಸಂಕಲ್ಪ ಮಾಡಿಸಿ
ಅದೃಶ್ಯರಾದರು ಆ ದಿನದಂದು||೧||

ಮಠದ ವ್ಯವಸ್ಥೆ ಸಕ್ರಮವಾಗಿ ನಡಸಿ
ವಿವಿಧ ಸೇವೆಯ ನಡೆಸಲು
ಸೇವಕರ ವ್ಯವಸ್ಥೆ ಮಾಡಿ
ದರ್ಬಾರಿನಂತೆ ಮುಂದುವರಿಸಿದರು||೨||

 ಸಂಚಾರ ಮಾಡುತ್ತ  ದ್ವೈತಮತ ಪ್ರಚುರಿಸಿ
ಕೊಲ್ಹಾಪುರ ಕೃಷ್ಣಾಚಾರ್ಯರಿಗೆ ಸನ್ಯಾಸವಿತ್ತು
 ಸತ್ಯಪೂರ್ಣತೀರ್ಥರೆಂದು ನಾಮಕರಣ ಮಾಡಿ
 ಜ್ಯೇಷ್ಟ ಶುಧ್ಧ ಚತುರ್ದಶಿ ಮಧ್ವೇಶಕೃಷ್ಣನ  ಪಾದಸೇರಿ||೩||
*******

No comments:

Post a Comment