Saturday 14 December 2019

ಶಂಕರ ದೇವನಾಲಂಕಾರ ankita jagannatha vittala

ಜಗನ್ನಾಥದಾಸರು
ಶಂಕರ ದೇವನಾಲಂಕಾರ ಶಯನ ಶಂಖ ನೃಪನ ಪಾಲಾ
ಶಂಖಾದಿ ಸೂದನ ಶಂಕೆಯಿಲ್ಲದೆ ತಾಯಿ
ಸಂಕಲೆ ಕಡಿದ ಶಶಾಂಕಕೋಟಿ ಪ್ರಭಾವ
ಸಂಕರುಷಣ ದೇವ ಶಂಖಾರಿಧರನೆ 1

ಕಂಬದಿ ಬಂದಚ್ಯುತನೆ
ಗೊಲ್ಲರ ಸಲಹಿದ ಗೋವರ್ಧನಧರ ಪುಲ್ಲ ಲೋಚನನೆ2

ಅಖಿಳ ಅಸುರರ ಶಕುತಿಯ
ಅಪಹರಿಸಿದ ಅದಿತಿ ರುಕ್ಮಿಣಿಯೊಡನೆ ವಿಹಾರ ಸಕಲ
ಸುರರೊಡೆಯ ಸಾಮಗಾಯನಲೋಲ ಶಕುಜನಕನೆ3

ಶಾಮಲ ಶರೀರ ವರ್ಣ ವಿನುತ
ರೋಮ ರೋಮ ಕೂಪದಿ ಆನಂದ ಭರಿತ
ದಾಮೋದರ ವಿಶ್ವದಾನಿಗಳರಸನೇ ಸಾಮಜವರದ 4

ಸನ್ನುತ ಚರಣ
ಅನಿರುದ್ಧ ದೇವನೆ ಅಸುರ ಸಂಹರಣಾ
ಕನಕಗರ್ಭಾದಿ ಸುರಕಟಕ ಪಾಲಕನೆ
ವನಜ ಜಾಂಡವ ಪೆತ್ತ ವೈಕುಂಠ ಪುರಾಧೀಶ 5

ಫಣಿ ಫಣ ಮರ್ದನ ಪ್ರಣವ ಪ್ರತಿಪಾದ್ಯ ಪ್ರ
ಸನ್ನವದನಾ ರಣರಂಗ ಭೀಮಾ ಭಕುತ
ಜನ ಮೋದನಾ ಅಣು ಸ್ಥೂಲದಲಿ
ಗಮನ 6

ಶ್ವೇತವಾಹನನ ಸಮರದಿ ಕಾಯಿದಾ
ಅಖಿಳ ಜೀವ ಭೇದಾ
ದರ ಪರಮ ಸುಮೋದಾ
ಭೀತಿರಹಿತ ಕಲ್ಪಭೂಜನೆನಿಪ ಜಗನ್ನಾಥವಿಠ್ಠಲನೆ 7
*******

No comments:

Post a Comment