Saturday 14 December 2019

ನಾರಾಯಣಾದ್ರಿ ಕೃತವಾಸ ಶರಣು ankita jagannatha vittala

ಜಗನ್ನಾಥದಾಸರು
ನಾರಾಯಣಾದ್ರಿ ಕೃತವಾಸಾ ಶರಣು l
ತೋರೈ ತವರೂಪ ರವಿಕೋಟಿಭಾಸಾ ll ಪ ll

ಆನತ ಜನಾಪ್ತ ನೀನೆಂಬೊ ನುಡಿಗೇಳಿ ಮಿಗೆ l
ಸಾನುರಾಗದಲಿ ನಡತಂದ ನಿನ್ನಯ ಬಳಿಗೆ l
ಮೀನಾಂಕಜನಕ ತವ ಪದಯುಗಾರ್ಚನೆ ಹೀಗೆ l
ಜ್ಞಾನ ಪೂರ್ವಕದಿಂದಲೆಸಗೆ l
ಪಾನೀಯಜಾಮ್ಬಕನೆ ಪೊರೆಯಂದೆ ನಿನಗೆ ll 1 ll

ವಾಸುಕಿ ತಪಕೆ ಸಲೆ ಮೆಚ್ಚಿ ಗಿರಿಯಲಿ ನಿಂದೆ l
ಆ ಸಲಿಲದೊಳು ನಿಂದು ಕರಿವರ ಕರಿಯೆ ಬಂದೆ l
ವಾಸವಾತ್ಮಜನು ಬಿನ್ನೈಸೆ ನಿನ್ನಯ ಮುಂದೆ l
ಆ ಸಮರದೊಳಗೊಲಿವೆನೆಂದೆ ನಿನಗೆ l
ಪಾಸಟಿನ್ನಾರು ನೀರಜಭವನ ತಂದೆ ll 2 ll

ಪೊಗಳಲರಿಯರು ಸುರರು ನಿನ್ನ ಮಹಿಮಾತಿಶಯ l
ಬಗೆಯನರಿಯಳು ಲಕುಮಿ ಬದರ ಸನ್ನಿಭಕಾಯ l
ಮುಗುಧ ಮಾನವ ತಿಳಿವದೇನೊ ತಿರುಮಲರಾಯ l
ಖಗರಾಜಗಮನ ಕಮನೀಯ ಪಾಹಿ l
ಜಗನ್ನಾಥವಿಠಲ ವಿಗತಾಘ ವಿಧುಗೇಯಾ ll 3 ll
******
ನಾರಾಯಣಾದ್ರಿ ಕೃತವಾಸ ಶರಣು
ತೋರಯ್ಯ ತವರೂಪ ರವಿಕೋಟಿಭಾಸ ಪ

ಆನತಜನಾಪ್ತ ನೀನೆಂಬೋ ನುಡಿಕೇಳಿ ಮಿಗೆ
ಸಾನುರಾಗದಲಿ ನಡೆತಂದೆ ನಿನ್ನ ಬಳಿಗೆ
ಮಿನಾಂಕಜನಕ ತವಪದಯುಗಾರ್ಚನೆ ಹೀಗೆ
e್ಞÁನ ಪೂರ್ವಕದಿಂದಲೆನಗೆ ದಯದಿ
ಪಾನೀಯಜಾಂಬಕನೆ ಪೊರೆಯೆಂದೆ ನಿನಗೆ 1

ವಾಸುಕೀ ತಪಕೆ ಸಲೆಮೆಚ್ಚಿ ಗಿರಿಯಲಿ ನಿಂದೆ
ಆ ಸಲಿಲದೊಳು ಮಿಂದು ಕರಿವರ ಕರೆಯೆ ಬಂದೆ ಸ್ವಾಮಿ
ವಾಸವಾತ್ಮಜನು ಬಿನ್ನೈಸೆ ನಿನ್ನಯ ಮುಂದೆ
ಆ ಸಮರದೊಳಗೊಲಿವನೆಂದೆ ನಿನಗೆ
ಪಾಸಟಿ ಯಾರು ನೀರಜಭವನ ತಂದೆ 2

ಸುರರು ನಿನ್ನ ಮಹಿಮಾತಿಶಯ
ಬಗೆಯನರಿಯಳು ಲಕುಮಿ ಬದರ ಸನ್ನಿಭಕಾಯ
ಮಾನವ ತಿಳಿವನೆನೋ ತಿರುಮಲರಾಯ
ಖಗÀರಾಜಗಮನ ಕಮನೀಯ ಪಾಹಿ
ಜಗನ್ನಾಥವಿಠಲ ವಿಗತಾಘ ಕವಿಗೇಯ 3
*********

No comments:

Post a Comment