by ಜಗನ್ನಾಥದಾಸರು
ರಾಗ- ಪಂತುವರಾಳಿ (ಮಾಲಕಂಸ್) ರೂಪಕತಾಳ (ಝಪ್ ತಾಲ್)
ನೀಚನಲ್ಲವೆ ಇವನು ನೀಚನಲ್ಲವೆ ||ಪ||
ಕೀಚಕಾರಿಪ್ರಿಯನ ಗುಣವ
ಯೋಚಿಸದಲಿಪ್ಪ ನರನು ||ಅ.ಪ||
ಜನನಿ ಜನಕರಂತೆ ಜನಾ-
ರ್ದನನು ಸಲಹುತಿರಲು ಬಿಟ್ಟು
ಧನಿಕರ ಮನೆ ಮನೆಗಳರಸಿ
ಶುನಕನಂತೆ ತಿರುಗುತಿಹನು ||೧||
ಜೀವ ತಾನಕರ್ತೃವೆಂದು
ದೇವನೊಬ್ಬ ಕರ್ತೃ ರಮಾ-
ದೇವಿ ಮೊದಲುಗೊಂಡು ಹರಿಯ
ಸೇವಕರೆಂದರಿಯದವನು ||೨||
ಲೋಕವಾರ್ತೆಗಳಲಿ ಏಡ
ಮೂಕನಂತೆ ವಿಷಯಗಳವ-
ಲೋಕಿಸದಲೆ ಶ್ರೀಶಗಿವು ಪ್ರ-
ತೀಕವೆಂದು ತಿಳಿಯದವನು ||೩||
ಬಹಳ ದ್ರವ್ಯದಿಂದ ಗರುಡ
ವಾಹನನಂಘ್ರಿ ಭಜಿಸಿ ಅನು-
ಗ್ರಹವ ಮಾಡುಯೆಂದು ಬರಿದೆ
ಐಹಿಕಸುಖವ ಬಯಸುವವನು ||೪||
ಶ್ರೀಕಳತ್ರನಂಘ್ರಿ ಕಮಲ-
ವೇಕಚಿತ್ತದಲ್ಲಿ ಮನೋ-
ವ್ಯಾಕುಲಗಳ ಬಿಟ್ಟು
ಸುಖೋದ್ರೇಕದಿಂದ ಭಜಿಸುವವನು ||೫||
ಹರಿಕಥಾಮೃತವ ಬಿಟ್ಟು
ನರಚರಿತ್ರೆಯಿಂದ ದ-
ರ್ದುರಗಳಂತೆ ಹಾಳುಗೋಷ್ಠಿ
ಹರಟೆ ದಿವಸ ಕಳೆಯುತಿಹನು ||೬||
ವಿಹಿತ ಧರ್ಮ ತೊರೆದು ಪರರ
ಗೃಹಗಳಲಿ ಸಂಚರಿಸುತ
ಕುಹಕಯುಕ್ತಿಯಿಂದ ಲೋಕ
ಮಹಿತರನ್ನು ನಿಂದಿಸುವನು ||೭||
ಕರಣಜನ್ಯ ಪುಣ್ಯಪಾಪ-
ವೆರಡು ಹರಿಯಧೀನವೆಂದು
ಸ್ಮರಿಸುತ ಅತಿ ಭಕುತಿಯಿಂದ
ಹರುಷ ಪಡದಲಿಪ್ಪ ನರನು ||೮||
ವಾತಜನಕನೆನಿಪ ಜಗ-
ನ್ನಾಥವಿಠಲ ಪಾದಪದ್ಮ
ಪೋತವಾಶ್ರಯಿಸಿ ಭವ ಕು-
ವೈತರಣಿಯ ದಾಟದವನು ||೯||
***
ರಾಗ- ಪಂತುವರಾಳಿ (ಮಾಲಕಂಸ್) ರೂಪಕತಾಳ (ಝಪ್ ತಾಲ್)
ನೀಚನಲ್ಲವೆ ಇವನು ನೀಚನಲ್ಲವೆ ||ಪ||
ಕೀಚಕಾರಿಪ್ರಿಯನ ಗುಣವ
ಯೋಚಿಸದಲಿಪ್ಪ ನರನು ||ಅ.ಪ||
ಜನನಿ ಜನಕರಂತೆ ಜನಾ-
ರ್ದನನು ಸಲಹುತಿರಲು ಬಿಟ್ಟು
ಧನಿಕರ ಮನೆ ಮನೆಗಳರಸಿ
ಶುನಕನಂತೆ ತಿರುಗುತಿಹನು ||೧||
ಜೀವ ತಾನಕರ್ತೃವೆಂದು
ದೇವನೊಬ್ಬ ಕರ್ತೃ ರಮಾ-
ದೇವಿ ಮೊದಲುಗೊಂಡು ಹರಿಯ
ಸೇವಕರೆಂದರಿಯದವನು ||೨||
ಲೋಕವಾರ್ತೆಗಳಲಿ ಏಡ
ಮೂಕನಂತೆ ವಿಷಯಗಳವ-
ಲೋಕಿಸದಲೆ ಶ್ರೀಶಗಿವು ಪ್ರ-
ತೀಕವೆಂದು ತಿಳಿಯದವನು ||೩||
ಬಹಳ ದ್ರವ್ಯದಿಂದ ಗರುಡ
ವಾಹನನಂಘ್ರಿ ಭಜಿಸಿ ಅನು-
ಗ್ರಹವ ಮಾಡುಯೆಂದು ಬರಿದೆ
ಐಹಿಕಸುಖವ ಬಯಸುವವನು ||೪||
ಶ್ರೀಕಳತ್ರನಂಘ್ರಿ ಕಮಲ-
ವೇಕಚಿತ್ತದಲ್ಲಿ ಮನೋ-
ವ್ಯಾಕುಲಗಳ ಬಿಟ್ಟು
ಸುಖೋದ್ರೇಕದಿಂದ ಭಜಿಸುವವನು ||೫||
ಹರಿಕಥಾಮೃತವ ಬಿಟ್ಟು
ನರಚರಿತ್ರೆಯಿಂದ ದ-
ರ್ದುರಗಳಂತೆ ಹಾಳುಗೋಷ್ಠಿ
ಹರಟೆ ದಿವಸ ಕಳೆಯುತಿಹನು ||೬||
ವಿಹಿತ ಧರ್ಮ ತೊರೆದು ಪರರ
ಗೃಹಗಳಲಿ ಸಂಚರಿಸುತ
ಕುಹಕಯುಕ್ತಿಯಿಂದ ಲೋಕ
ಮಹಿತರನ್ನು ನಿಂದಿಸುವನು ||೭||
ಕರಣಜನ್ಯ ಪುಣ್ಯಪಾಪ-
ವೆರಡು ಹರಿಯಧೀನವೆಂದು
ಸ್ಮರಿಸುತ ಅತಿ ಭಕುತಿಯಿಂದ
ಹರುಷ ಪಡದಲಿಪ್ಪ ನರನು ||೮||
ವಾತಜನಕನೆನಿಪ ಜಗ-
ನ್ನಾಥವಿಠಲ ಪಾದಪದ್ಮ
ಪೋತವಾಶ್ರಯಿಸಿ ಭವ ಕು-
ವೈತರಣಿಯ ದಾಟದವನು ||೯||
***
pallavi
nIcanallavE ivanu nIcanallavE
anupallavi
kIcakAri priyana guNava yOcisadalippa naranu
caraNam 1
janani janakarante janArdananu salahutiralu biTTu
dhanikara mane manegaLarasi shunakanante tirugutihanu
caraNam 2
jIva tAna kartravendu dEvanobba kartra ramAdEvi
modalugoNDu hariya sEvakendariyadavanu
caraNam 3
lOka vArtegaLalli eDamUkanante viSayagaLava
lOkisadale shrI shagivu pratIkavendu tiLiyadavanu
caraNam 4
bahaLa dravyadinda garuDa vAhanananghri bhajisi
anugrahava mADu endu baride aihika sukhava bayasuvavanu
caraNam 5
shrIkaLatrananghri kamala vEkacittadalli
manOvyAkulagaLa biTTu sukhOdrEkadinda bhajisuvavanu
caraNam 6
harikathAmrtava biTTu nara caritreyinda darduragaLante
hALu gOSTi haraTe divasa kaLeyutihanu
caraNam 7
vihita dharma toredu parara grahagaLalli sancarisuta
kuhakayuktiyinda lOka mahitarannu nindisuvanu
caraNam 8
karaNa janya puNya pApaveraDu hariyadhInavendu
smarisuta ati bhakutiyinda haruSa paDadalippa naranu
caraNam 9
vAta janakanenipa jagannAtha viThalana pAda padma
pOtavAshrayisi bhavakuvaitaraNiya dATadavanu
***
ನೀಚನಲ್ಲವೇ ಇವನು ನೀಚನಲ್ಲವೇ ಪ
ಕೀಚಕಾರಿಪ್ರಿಯನ ಗುಣವ ಯೋಚಿಸದಲೆ ಯಾಚಿಸುವÀನು ಅ.ಪ.
ಶ್ರೀಕಳತ್ರನಂಘ್ರಿ ಕಮಲವೇಕಚಿತ್ತದಲ್ಲಿ ಮನೋ
ವ್ಯಾಕುಲಗಳ ಬಿಟ್ಟು ಸುಖೋದ್ರೇಕದಿಂದ ಭಜಿಸದವನು 1
ಲೋಕವಾರ್ತೆಗಳಲಿ ಏಡ ಮೂಕರೆನಿಸಿ ವಿಷಯಗಳವ
ಲೋಕಿಸದಲೆ ಶ್ರೀಶಗಿವು ಪ್ರತೀಕವೆಂದು ತಿಳಿಯದವನು 2
ಜನನಿ ಜನಕರಂತೆ ಜನಾರ್ದನನು ಸಲಹುತಿರಲು ಬಿಟ್ಟು
ಧನಿಕರ ಮನೆಮನೆಗಳರಸಿ ಶುನಕನಂತೆ ತಿರುಗುವವನು 3
ಹರಿಕಥಾಮೃತವ ಬಿಟ್ಟು ನರ ಚರಿತ್ರೆಯಿಂದ ದ
ರ್ದುರಗಳಂತೆ ಹರಟೆ ದಿವಸ ಬರಿದೆ ಕಳೆಯುತಿಪ್ಪ ಮನುಜ4
ಕರ್ಮ ತೊರೆದು ಪರರ ಗೃಹಗಳಲ್ಲಿ ಸಂಚರಿಸುತ
ನಿಂದಿಸುವ ಮನುಜ5
ಬಹಳ ದ್ರವ್ಯದಿಂದ ಗರುಡ ವಾಹನನಂಘ್ರಿ ಭಜಿಸಿ ಅನು
ಗ್ರಹವ ಮಾಡು ಎಂದು ಬೇಡಿ ಐಹಿಕಸುಖವ ಬಯಸುವವನು 6
ಕರಣ ಜನ್ಯ ಪುಣ್ಯಪಾಪವೆರಡು ಹರಿಯಧೀನವೆಂದು
ಸ್ಮರಿಸುತಲತಿ ಭಕುತಿಯಿಂದ ಹರುಷಪಡದಲಿಪ್ಪ ಮನುಜ 7
ಜೀವನ ಕರ್ತೃತ್ವ ಬಿಟ್ಟು ದೇವನೊಬ್ಬ ಕರ್ತೃ ರಮಾ
ದೇವಿ ಮೊದಲುಗೊಂಡು ಹರಿಯ ಸೇವಕರೆಂದರಿಯದವನು 8
ವಾತಜನಕನೆನಿಪ ಜಗನ್ನಾಥವಿಠ್ಠಲನ ಪದಾಬ್ಜ
ಭವ ವೈತರಣಿಯ ದಾಟದವನು 9
********
ನೀಚನು ಯಾರು ?
ರಾಗ - ಪಂತುವರಾಳಿ
ತಾಳ - ರೂಪಕತಾಳ
ನೀಚನಲ್ಲವೆ ಇವನು ನೀಚನಲ್ಲವೆ ll ಪ ll
ಕೀಚಕಾರಿಪ್ರಿಯನ ಗುಣವ ಯೋಚಿಸದಲೆ ಇಪ್ಪ ನರನು ll ಅ ಪ ll
ಕಳತ್ರ ನಂಘ್ರಿ ಕಮಲ ಏಕಚಿತ್ತದಲ್ಲಿ ಮನೋ
ವ್ಯಾಕುಲಗಳ ಬಿಟ್ಟು ಸುಖೋದ್ರೇಕದಿಂದ ಸ್ಮರಿಸದವನು ll 1 ll
ಲೋಕವಾರ್ತೆಗಳಲ್ಲಿ ಏಡಮೂಕನೆನಿಸಿ ವಿಷಯಗಳವ
ಲೋಕಿಸುತ್ತ ಶ್ರೀಶಗಿವು ಪ್ರತೀಕವೆಂದು ತಿಳಿಯದವನು ll 2 ll
ಹರಿಕಥಾಮೃತವನು ಬಿಟ್ಟು ನರಚರಿತೆಯನ್ನು ಪೊಗಳಿ ದ-
ರ್ದುರಗಳಂತೆ ಹರಟಿ ದಿವಸ ಬರಿದೆ ಕಳೆವುತಿಪ್ಪ ಮನುಜ ll 3 ll
ಜನನಿಜನಕರಂತೆ ಜನಾರ್ದನನು ಸಲಹುತಿರಲು ಬಿಟ್ಟು
ಧನಿಕರ ಮನೆಗಳಲ್ಲಿ ಶುನಕನಂತೆ ತಿರುಗುವವನು ll 4 ll
ವಿಹಿತ ಕರ್ಮ ತೊರೆದು ಪರರ ಗೃಹಗಳಲ್ಲಿ ಸಂಚರಿಸುತ
ಕುಹಕಯುಕ್ತಿಯಿಂದ ಲೋಕಮಹಿತರನ್ನು ನಿಂದಿಸುವವನು ll 5 ll
ಬಹಳ ದ್ರವ್ಯದಿಂದ ಗರುಡವಾಹನಂಘ್ರಿ ಭಜಿಸಿ ಅನು-
ಗ್ರಹವ ಮಾಡು ಎಂದು ಬರಿದೆ ಅಹಿಕಸುಖವ ಬಯಸುವವನು ll 6 ll
ಕರುಣಜನ್ಯ ಪುಣ್ಯಪಾಪವೆರಡು ಹರಿಯಾಧೀನವೆಂದು
ಸ್ಮರಿಸುತಿರಲತಿ ಭಕುತಿಯಿಂದ ಹರುಷಬಡುತಲಿಪ್ಪ ಮನುಜ ll 7 ll
ಜೀವಕರ್ತೃತ್ವ ಮರೆತು ದೇವನೊಬ್ಬ ಕರ್ತೃ ರಮಾ-
ದೇವಿ ಮೊದಲುಗೊಂಡು ಹರಿಯ ಸೇವಕರೆಂದರಿಯದವನು ll 8 ll
ವಾತಜನಕನೆನಿಪ ಜಗನ್ನಾಥವಿಟ್ಠಲನ ಪಾದಾಬ್ಜ
ಪೋತವಾಶ್ರಯಿಸಿ ಭವ ಕುವೈತರಣೀಯ ದಾಟದವನು ll 9 ll
***
ನೀಚನು ಯಾರು ?
ಶ್ರೀಜಗನ್ನಾಥದಾಸರು ಈ ಕೀರ್ತನೆಯಲ್ಲಿ ಕೊಟ್ಟ ಪಟ್ಟಿಯಲ್ಲಿ ಬಾರದವನಿರುವುದು ಅಪರೂಪ. ಸಾರ್ಥಕ ಜೀವನಕ್ಕೆ ಇಲ್ಲಿಯ ವಿಷಯಗಳನ್ನು ವಿಚಾರ ಪೂರ್ವಕದಿ ತಿಳಿದು ಅನುಸರಿಸಿದಲ್ಲಿ ಜೀವನ ಪಾವನವೆಂಬಲ್ಲಿ ಸಂಶಯವಿಲ್ಲ.
ಇಲ್ಲಿ ದಾಸರು ನೀಚನ ನೀಚಗುಣಗಳನ್ನು ಪಟ್ಟಿಮಾಡಿ, ಸಜ್ಜನರಾದವರು ಇದರಿಂದ ದೂರವಿದ್ದು ಶಾಸ್ತ್ರೋಕ್ತ ಮಾರ್ಗದಲ್ಲಿ ನಡೆದು ಪುನೀತರಾಗಿರೆಂದು ಕಳಕಳಿಯಿಂದ ಬೋಧಿಸಿರುವರು.
***
ಕೀಚಕಾರಿಪ್ರಿಯನ ಗುಣವ ಯೋಚಿಸದಲೆ ಯಾಚಿಸುವÀನು ಅ.ಪ.
ಶ್ರೀಕಳತ್ರನಂಘ್ರಿ ಕಮಲವೇಕಚಿತ್ತದಲ್ಲಿ ಮನೋ
ವ್ಯಾಕುಲಗಳ ಬಿಟ್ಟು ಸುಖೋದ್ರೇಕದಿಂದ ಭಜಿಸದವನು 1
ಲೋಕವಾರ್ತೆಗಳಲಿ ಏಡ ಮೂಕರೆನಿಸಿ ವಿಷಯಗಳವ
ಲೋಕಿಸದಲೆ ಶ್ರೀಶಗಿವು ಪ್ರತೀಕವೆಂದು ತಿಳಿಯದವನು 2
ಜನನಿ ಜನಕರಂತೆ ಜನಾರ್ದನನು ಸಲಹುತಿರಲು ಬಿಟ್ಟು
ಧನಿಕರ ಮನೆಮನೆಗಳರಸಿ ಶುನಕನಂತೆ ತಿರುಗುವವನು 3
ಹರಿಕಥಾಮೃತವ ಬಿಟ್ಟು ನರ ಚರಿತ್ರೆಯಿಂದ ದ
ರ್ದುರಗಳಂತೆ ಹರಟೆ ದಿವಸ ಬರಿದೆ ಕಳೆಯುತಿಪ್ಪ ಮನುಜ4
ಕರ್ಮ ತೊರೆದು ಪರರ ಗೃಹಗಳಲ್ಲಿ ಸಂಚರಿಸುತ
ನಿಂದಿಸುವ ಮನುಜ5
ಬಹಳ ದ್ರವ್ಯದಿಂದ ಗರುಡ ವಾಹನನಂಘ್ರಿ ಭಜಿಸಿ ಅನು
ಗ್ರಹವ ಮಾಡು ಎಂದು ಬೇಡಿ ಐಹಿಕಸುಖವ ಬಯಸುವವನು 6
ಕರಣ ಜನ್ಯ ಪುಣ್ಯಪಾಪವೆರಡು ಹರಿಯಧೀನವೆಂದು
ಸ್ಮರಿಸುತಲತಿ ಭಕುತಿಯಿಂದ ಹರುಷಪಡದಲಿಪ್ಪ ಮನುಜ 7
ಜೀವನ ಕರ್ತೃತ್ವ ಬಿಟ್ಟು ದೇವನೊಬ್ಬ ಕರ್ತೃ ರಮಾ
ದೇವಿ ಮೊದಲುಗೊಂಡು ಹರಿಯ ಸೇವಕರೆಂದರಿಯದವನು 8
ವಾತಜನಕನೆನಿಪ ಜಗನ್ನಾಥವಿಠ್ಠಲನ ಪದಾಬ್ಜ
ಭವ ವೈತರಣಿಯ ದಾಟದವನು 9
********
No comments:
Post a Comment