Friday 27 December 2019

ವ್ಯಾಸರಾಯಾ ಅಸ್ಮದ್ಗುರೋ ankita gurujagannatha vittala vyasaraja stutih

ವ್ಯಾಸರಾಯಾ ಅಸ್ಮದ್ಗುರೋ ವ್ಯಾಸರಾಯಾ ||pa||

ವ್ಯಾಸರಾಯಾ ತವೋಪಾಸನ ಮಾಳ್ಪ
ವಿಶೇಷ ಸುಜ್ಞಾನ ಭಕ್ತಿ ಲೇಸಾಗಿ ಸಲಿಸಯ್ಯಾ ||a.pa||

ದಾಸನಾಮಕ ದ್ವಿಜ ದೇಶಮುಖನ ಮನಿ –
ಕೂಸಾಗಿ ಜನಿಸಿದೆ ಭೂಸ್ಪರ್ಶವಿಲ್ಲದೆ ||1||

ಶ್ರೀಪಾದರಾಯರು ಈ ಪರಿ ನಿನ್ನನು
ಕಾಪಾಡಿ ನವವರ್ಷ ಭೂಪತಿ ಮಾಡಿದರೋ ||2||
ದಶಮವತ್ಸರದಲ್ಲಿ ಅಸಮ ಜ್ಞಾನಿ ಎನಿಸಿ
ವಸುದೇವ ಸುತನನ್ನು ಸುಸಮಾಧಿಯಲಿ ಪಡೆದೆ ||3||

ಅಲವಭೋಧರ ಮತ ಜಲಧಿನಿಶಾಕರ
ಕಲೆಯಂತೆ ದಿನದಿನದಲಿ ವೃದ್ಧನಾದೆ ನೀ ||4||

ಚಂಪಕ ತರು ಮುಖ್ಯ ಕಂಪಿತ ನದಿಯುತ
ಪಂಪಾಕ್ಷೇತ್ರದಿ ಮಹಾ ಸಂಪತ್ತಿನಿಂದಿದ್ದೆ ||5||

ಚಕ್ರತೀರ್ಥದಲಿ ಮರ್ಕಟ ಬರಲಂದು
ತರ್ಕಿಸಿ ಯಂತ್ರಸ್ಥ ಚಕ್ರದಿ ಬಂಧಿಸಿದೆ ||6||

ಪದ್ಮತೀರ್ಥದಲಿ ಇದ್ದ ನಿಜಗುರು
ಮಧ್ವರಾಯರ ತಂದು ಸಿದ್ಧಮಾಡಿ ಇಟ್ಟೆ ||7||

ಮಂದಜನಕೆÀ ಸುಧಾ ಛಂದಾಗಿ ಇದರರ್ಥ
ಪೊಂದದೆಂದು ನೀನು ಚಂದ್ರಿಕೆ ರಚಿಸಿದೆ ||8||

ಇನಿತೆ ಮಹಾಮಹಿಮೆ ಘನವಾಗಿ ಜನರಿU
ಅನುಭವ ಮಾಡಿಸಿದೆ ಅನುಪಮ ಚರಿತನೆ ||9||

ಇಭಗುಹವರತುಂಗ ಉಭಯ ಪ್ರವಾಹಮಧ್ಯ
ಶುಭಮಯ ಸ್ಥಳದಲ್ಲಿ ಅಭಯನಾಗಿ ನಿಂತೆ ನೀ ||10||

ಬಂದ ಜನರಘÀ ನಿಂದ್ರಾದೆ ಕಳೆಯುತ
ಛಂದದ ನವಶುಭವೃಂದಾವನದೊಳಿದ್ದೆ ||11||

ಇಂದು ನಿಮ್ಮಯ ಪಾದ ಪೊಂದಿ ಎನ್ನಯ ವೃಜಿನ –
ವೃಂದ ಪೋದವು ಅರ್ಕನಿಂದ ತಿಮಿರದಂತೆ||12||

ಮಂದಜನರಿಗೆ ಅಮಂದ ಭಾಗ್ಯನಿಧೆ
ವಂದಿಸಿ ಬೇಡುವೆ ನಂದದಿ ಸಲಹಯ್ಯ ||13||

ತಂದೆ ತಾಯಿಗಳು ಅಂದೆ ಬಿಟ್ಟರೆÀನ್ನ
ಇಂದು ರಕ್ಷಕರಿಲ್ಲವೆಂದು ನಿನ್ನನು ಸಾರ್ದೆ ||14||

ಪೊಂದಿ ಕೊಂಡಿರುವವನೆಂದು ಎನ್ನನು ಕೃಪೆ
ಯಿಂದ ಕರೆದು ಕಾಯೋ ನಂದಾದಾಯಕ ನೀನೆ||15||

ಇಷ್ಟದಾಯಕ ನಿನ್ನ ಮುಟ್ಟಿಭಜಿಪ ದಿವ್ಯ
ದೃಷ್ಟಿ ಪಾಲಿಸೊ ಸರ್ವೋತ್ಕøಷ್ಟ ಮಹಿಮ ನೀನೆ ||16||

ಮಾತು ಲಾಲಿಸೊ ನಿಜತಾತ ನೀನೆ ಸೀತಾ –
ನಾಥ ಗುರುಜಗನ್ನಾಥವಿಠಲನಾಣೆ ||17||
********

No comments:

Post a Comment