Monday 13 December 2021

ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಕದ purandara vittala ALLIDE NAMMANE ILLI BANDE SUMMANE KADA






ಅಲ್ಲಿದೆ ನಮ್ಮ ಮನೆ ಇಲ್ಲಿರುವುದು ಸುಮ್ಮನೆ! ||ಪಲ್ಲವಿ||

ಕದಬಾಗಿಲಿರಿಸಿದ ಕಳ್ಳ ಮನೆಇದು
ಮುದದಿಂದಲೋಡ್ಯಾಡೋ ಸುಳ್ಳು ಮನೆ |
ಇದಿರಾಗಿ ವೈಕುಂಠವಾಸಮಾಡುವಂತ
ಪದುಮನಾಭನ ದಿವ್ಯ ಬದುಕುಮನೆ ||೧||

ಮಾಳಿಗೆಮನೆಯೆಂದು ನೆಚ್ಚಿಕೆಡಲುಬೇಡ
ಕೇಳಯ್ಯ ಹರಿಕಥೆಶ್ರವಣಂಗಳ |
ನಾಳೆ ಯಮದೂತರು ಬಂದೆಳೆದೊಯ್ವಾಗ
ಮಾಳಿಗೆ ಮನೆ ಸಂಗಡ ಬಾರದಯ್ಯ ||೨||

ಮಡದಿಮಕ್ಕಳು ಎಂಬ ಹಂಬಲ ನಿನಗೇಕೋ
ಕಡುಗೊಬ್ಬುತನದಿ ನಡೆಯದಿರು |
ಒಡೆಯ ಶ್ರೀ ಪುರಂದರ ವಿಠಲನ ಚರಣ
ದೃಢಭಕ್ತಿಯಲಿ ನೀ ನೆನೆಸಿಕೊ ಮನುಜ ||೩||
****

ರಾಗ : ದುರ್ಗಾ  ತಾಳ : ಆದಿ (raga, taala may differ in audio)

Allide nammane, illi bande summane,
Allide namma mane ||pa||

Kadabagilirisiha kalla mane idu
Mudadimda olyado sullu mane
Vaikunthavembude namma svanta mane
Iddu illade hogo kanasina mane idu ||1||

Maligemaneyendu necci kedalu beda
Kelayya harikathe sravanangala
Nale yamadutaru bamdeledoyyuvaga
Malige mane samgada baradayya ||2||

Madadimakkalu embo hambala ninagyako
Kadugobbutanadali kobbinadeyadiro
Odeya sripurandaravithalarayana
Dhrudabaktiyindali bajisiko manuja ||3||
***

pallavi

allde summane illi hOde summane

caraNam 1

katha bAgilirisiha kaLLa mane idu mudadinda lOlADO suLLu mane
idarAgi vaikuNTha vAsa mADuvantha padumanAbhana divya baduku mane

caraNam 2

mAlige maneyendu necci keDalu bEDa kELayya harikathe shravaNangaLa
nALema dUtaru bandeLedoivAga mALige mane sankaTa bAradayya

caraNam 3

maDadi makkaLembo hambala ninagyAtakO kaDugobbu tanadali naDeyadiru
oDeya shrI purandara viTTalana caraNava drDha bhaktiyali nI bhajiselo manuja
***

ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ,
ಅಲ್ಲಿದೆ ನಮ್ಮ ಮನೆ       ||ಪ||

ಕದಬಾಗಿಲಿರಿಸಿಹ ಕಳ್ಳ ಮನೆ ಇದು
ಮುದದಿಂದ ಓಲ್ಯಾಡೊ ಸುಳ್ಳು ಮನೆ
ವೈಕುಂಠವೆಂಬುದೆ ನಮ್ಮ ಸ್ವಂತ ಮನೆ
ಇದ್ದು ಇಲ್ಲದೆ ಹೋಗೋ ಕನಸಿನ ಮನೆ ಇದು  ||೧||

ಮಾಳಿಗೆಮನೆಯೆಂದು ನೆಚ್ಚಿ ಕೆಡಲು ಬೇಡ
ಕೇಳಯ್ಯ ಹರಿಕಥೆ ಶ್ರವಣಂಗಳ
ನಾಳೆ ಯಮದೂತರು ಬಂದೆಳೆದೊಯ್ಯುವಾಗ
ಮಾಳಿಗೆ ಮನೆ ಸಂಗಡ ಬಾರದಯ್ಯ    ||೨||

ಮಡದಿಮಕ್ಕಳು ಎಂಬೋ ಹಂಬಲ ನಿನಗ್ಯಾಕೋ
ಕಡುಗೊಬ್ಬುತನದಲಿ ಕೊಬ್ಬಿನಡೆಯದಿರೋ
ಒಡೆಯ ಶ್ರೀಪುರಂದರವಿಠಲರಾಯನ
ಧೃಡಭಕ್ತಿಯಿಂದಲಿ ಭಜಿಸಿಕೋ ಮನುಜ   ||೩||
****

ಅಲ್ಲಿದೆ ನಮ್ಮ ಮನೆ ಇಲ್ಲಿರುವುದು ಸುಮ್ಮನೆ

ಪುರಂದರ ದಾಸರದು ಅಳಿವಿರದ ಸೊದೆರಸ ತುಂಬಿದ ಸಾರ್ವಕಾಲಿಕ ಸಾಹಿತ್ಯ. ಅದು ಕುಳಿತು ಬರೆದಿದ್ದಲ್ಲ ಒಪ್ಪಿಸಿ ತಿದ್ದಿಸಿಕೊಂಡಿದ್ದಲ್ಲ. ತಿರುಗಿ ಹಾಡಿದ್ದು. ನಾರದತ್ವದ ದುಂಬಿ ಲೋಕಸತ್ವದ ಜೋಡಿ ಪರಾಗಸ್ಪರ್ಶ ಮಾಡಿದಾಗ ಉಂಟಾದ ಮಧು.

ನಾರ ಅಂದ್ರೆ ಜ್ಞಾನ ನಾರದ ಜ್ಞಾನ ಉಳ್ಳವನು. ನಾರಾಯಣ ಜ್ಞಾನಾನಂದ ಸ್ವರೂಪ. ನಾರದ ಅಂಥ ನಾರಾಯಣನ ದಾಸ.

ಮಾನವ ಜನ್ಮ ದೊಡ್ಡದು ಅದ ಹಾನಿ ಮಾಡಿ ಕೊಳ್ಳಬೇಡಿ ಎಂದು ತಿಳಿ ಹೇಳುವ ದಾಸರು ಶರೀರವನ್ನು 'ಕದ ಬಾಗಿಲಿರಿಸಿದ ಮನೆಗೆ' ಹೋಲಿಸುತ್ತಾರೆ.

ಶರೀರವೆಂಬುವುದು ಸಾಧನ ಮಾತ್ರ ಅದೇ ಎಲ್ಲ ಅಲ್ಲ. ಶರೀರ ಮಾಡುವ ಸಾಧನದಿಂದ ಆತ್ಮದ ಉದ್ಧಾರ ಆತ್ಮದ ಉದ್ಧಾರದಿಂದ ಜಗದೋದ್ಧಾರ. ಪರಮಾತ್ಮನ ಪದತಲದ ಭಾಗ್ಯದ ಗುರಿ ತೋರಿಸುತ್ತಾರೆ.

ಹಾಗಾದರೆ ದೇಹ ನಶ್ವರವಾ? ಈ ಶರೀರಕ್ಕೇನೂ ಬೆಲೆ ಇಲ್ಲವಾ? ಇದನ್ನು ಯಾರೂ ಒಪ್ಪುವುದಿಲ್ಲ.  ಸತ್ಯವಿದ್ದದ್ದು ಪ್ರಮಾಣ ಬದ್ಧವಿದ್ದದ್ದನ್ನು ಒಪ್ಪಲೇ ಬೇಕಾಗುತ್ತದೆ.

ಶರೀರವೆಂಬುದು ಸಾಧನ ಮಾತ್ರ ಅದುವೇ ಎಲ್ಲ ಅಲ್ಲ. ಅದು ಆಟಕ್ಕೆ ಪಡೆದ ಬಾಡಿಗೆ ಮನೆ ಅಷ್ಟೇ ಚೆನ್ನಾಗಿ ಮರಳಿಸಬೇಕು.

ಸಂಧ್ಯಾವಂದನೆ ಯಿಂದ ಸ್ವಚ್ಛವಾಗಿರಿಸಬೇಕು. ಸದಾಚಾರ ಗಳ ಪೇಂಟ ಮಾಡಿಸಿ ಕೊಡಬೇಕು. ಇಲ್ಲಾ ಪುಣ್ಯವೆಂಬ ಇಡುಗಂಟು ನಷ್ಟವಾಗುತ್ತದೆ. 

ಸ್ವಂತ ಮನೆ ಮಾಡಿಕೊಳ್ಳಲು ಜೀವ ಎಲ್ಲಿಯ ಸಿಟಿಜನ್ನೂ ಅಲ್ಲ. ಅದರ ಸ್ವಾತಂತ್ರ್ಯ ಪರಿಮಿತ.

ಮಾಳಿಗೆ ಮನೆಯಿದೆ ಎಂದು ಮೆಚ್ಚಿ ಕೂಡದೇ ಹರಿಕಥೆಯ ಕೇಳಿ ಸದಾಚಾರಿಗಳಾಗಿ.

ನಲ್ಗುಣಗಳ ನೆಲೆಮನೆಯಾದ ನಾರಾಯಣನ ಮನೆ, ಜೀವನ ನಿಜಮನೆ. ಅಲ್ಲಿಗೆ ಹೋಗವ ವೀಸಾ ಪಡೆಯುವ ಹಾದಿ ಹಿಡಿಯಿರಿ ಎಂದು ಸೂಚ್ಯವಾಗಿ ಹೇಳಿದ್ದಾರೆ.
*******

No comments:

Post a Comment