Friday 27 December 2019

ಯತಿವರ ನಿಮ್ಮನು ಸ್ತುತಿಪ ಜನರು ದಿವ್ಯ ankita prasanna


" ಶ್ರೀ ವಿದ್ಯಾ ಪ್ರಸನ್ನ ತೀರ್ಥರ ಕಣ್ಣಲ್ಲಿ ಶ್ರೀ ರಾಘವೇಂದ್ರತೀರ್ಥರು "

ಯತಿವರ ನಿಮ್ಮನು
 ಸ್ತುತಿಪ ಜನರು ದಿವ್ಯ ।
ಗರಿಯನು ಪೊಂದು-
ವರು ರಾಘವೇಂದ್ರ  ।। ಪಲ್ಲವಿ ।। 

ಕ್ಷಿತಿಯೊಳಗೆ ದಶ ಪ್ರ-
ಮತಿಗಳ ಸುಖಕರ ।
ಮತದ ಪರಮ ಸಂ-
ಗತಿಗಳ ಹರಡಿದ  ।। ಅ. ಪ ।।

ಜಯತೀರ್ಥ ಮುನಿಗಳವರ 
ಗ್ರಂಥಗಳಿಗೆ । ಸುಖ ।
ಮಯ ಟಿಪ್ಪಣಿಗಳ 
ರಚಿಸಿ । ಚಿ ।
ನ್ಮಯ ರಾಮರ ಸೇವೆಯ 
ಸಂತಸದಲಿ ।
ಗಯಿದು ಸುಮಂತ್ರಾ-
ಲಯದಲಿ ನೆಲೆಸಿದೆ ।। ಚರಣ ।।

ಮಂಗಳಕರವಾದ 
ತುಂಗಾ ನದಿಯ । ತ ।
ರಂಗಗಳಲಿ ಮಿಂದು 
ನಿಮ್ಮನು ।
ಕಂಗಳಿಂ ನೋಡಿ 
ಗುಣಗಳ ಪಾಡಿ । ನಿ ।
ಸ್ಸಂಗರಾದ ಸಾಧು ಸಂಗವ 
ಪೊರೆಯುವ  ।। ಚರಣ ।।

ಪರಿ ಪರಿಯಲಿ ನಿಮ್ಮ 
ನಮಿಪ ಸೇವಕರಿಗೆ ।
ಸುರಧೇನುವಿನಂತೆ ಸಂತತ ।
ಹರುಷದಿಂದಲಿ ನಿಮ್ಮ 
ಭಜಿಪ ಸುಜನರಿಗೆ ।
ಸುರತರುವಂತೆ ಪ್ರಸನ್ನ-
ರಾಗುವಂಥ ।। ಚರಣ ।।
*****

ಯತಿವರ ನಿಮ್ಮನು ಸ್ತುತಿಪ ಜನರು ದಿವ್ಯ
ಗತಿಯನು ಪೊಂದುವರು ರಾಘವೇಂದ್ರ ||

ಕ್ಷಿತಿಯೊಳಗೆ ದಶಪ್ರಮತಿಗಳ ಸುಖಕರ
ಮತದ ಪರಮ ಸಂಗತಿಗಳ ಹರಡಿದ ||

ಜಯ ಮುನಿಗಳವರ ಗ್ರಂಥಗಳಿಗೆ
ಸುಖಮಯ ಟಿಪ್ಪಣಿಗಳನು ರಚಿಸಿ ಚಿನ್
ಮಯ ರಾಮರ ಸೇವೆಯ ಸಂತಸದಲಿ
ಗೈದು ಸುಮಂತ್ರಾಲಯದಲಿ ನೆಲೆಸಿದ ||

ಮಂಗಳಕರವಾದ ತುಂಗಾನದಿಯ
ತರಂಗಗಳಲಿ ಮಿಂದು ನಿಮ್ಮನು
ನಿಸ್ಸಂಗರಾದ ಸಾಧು ಸಂಘವ ಪೊರೆಯುವ ||

ಪರಿಪರಿಯಲಿ ನಿಮ್ಮ ನಮಿಪ ಸೇವಕರಿಗೆ
ಸುರಧೇನುವಿನಂತೆ ಸಂತತ
ಹರುಷದಿಂದಲಿ ನಿಮ್ಮ ಭಜಿಪ ಸುಜನರಿಗೆ
ಸುರತರುವಂತೆ ಪ್ರಸನ್ನರಾಗುವಂಥ ||
********

No comments:

Post a Comment