Wednesday 16 October 2019

ಮಾಧವನ ಚರಣಾರವಿಂದೆ ಪಾದೆ ಎದ್ದೋಡಿ ankita vijaya vittala

ವಿಜಯದಾಸ
ಮಾಧವನ ಚರಣಾರವಿಂದೆ ಪಾದೆ ಪ

ಎದ್ದೋಡಿ ತಿರುಗಿ ನೋಡದೆ ಹೋಹವು
ಸದ್ಬಕ್ತಿಯಿಂದ ನಿನ್ನನು ನೋಡಬೇಕೆನುತ
ಉದ್ಯುಕ್ತವಾಗೆ ಬ್ರಹ್ಮಹತ್ಯ ಪರಿಹಾರವೊ 1

ಬಂದು ಹರುಷದಲಿ ಕಣ್ಣಲಿ ಕಂಡು ಶಿರವಾಗಿ
ವಂದನೆಯ ಮಾಡಿ ಸಾಷ್ಟಾಂಗೆರಗಲೂ
ದುರಿತ ರಾಸಿಗಳೆಲ್ಲ
ಒಂದು ಉಳಿಯದಂತೆ ಬೆಂದು ಹೋಹವು 2

ಅತಿವೇಗದಿಂದ ಬಂದು ಸ್ನಾನವನು ಮಾಡಲು
ಮತಿವಂತರನ ಮಾಡಿ ದುರ್ಮಾರ್ಗ ಬಿಡಿಸಿ
ಸಿರಿ ವಿಜಯವಿಠ್ಠಲನ್ನ
ಸ್ತುತಿಸಿ ಗತಿ ಪಡೆವಂತೆ ಧನ್ಯರನು ಮಾಡುವ ತಾಯಿ3
**********

No comments:

Post a Comment