Wednesday 16 October 2019

ಮಾನವ ಸಿಂಗನಾದನು ರಂಗಮಾನವ ಸಿಂಗನಾಗಲು ankita vijaya vittala

ವಿಜಯದಾಸ
ಮಾನವ ಸಿಂಗನಾದನು ಪ

ರಂಗಮಾನವ ಸಿಂಗನಾಗಲು
ಭಂಗಾರ ಗಿರಿಯ ಶೃಂಗಗಳಲ್ಲಾಡೆ
ಹಿಂಗದೆ ಎಂಟು ಮಾತಂಗ ಸಪುತ ದ್ವೀ-
ಪಂಗಳು ಕಂಪಿಸೆ ವಿಗಡದಿ ಅ.ಪ.
ವನಜ ಭವನಂದನರಾನಂದದಿ
ವನಧಿಯೊಳಿದ್ದ ವನಜನಾಭನ
ವನಜಾಂಘ್ರಿ ದರುಶನಕ್ಕೋಸುಗದಿ
ಘನ ವೈಕುಂಠ ಪಟ್ಟಣ ಸಾರೆ
ವಿನಯರಲ್ಲದ ಜಯನು ವಿಜಯನವ-
ರನು ತಡೆಯಲು ಮುನಿದೀರ್ವರಿಗೆ
ದನುಜಾಂಗದಿಂದ ಜನಿಸಿರೋ ಎಂದು
ಮುನಿಗಳು ಶಾಪವನ್ನು ಈಯೆ 1

ದಿಕ್ಕು ಎಂಟರೊಳು ಕಕ್ಕಸರೆನಿಸಿ
ದಿಕ್ಕು ಪಾಲಕರ ಲೆಕ್ಕಿಸದಲೇವೆ
ಸೊಕ್ಕಿ ತಿರುಗುವ ರಕ್ಕಸರಾಗಲು
ಮುಕ್ಕಣ್ಣ ಬಲದಿಂದಕ್ಕೆ ಜದಿ
ನಕ್ಕು ಪರಿಹಾಸ್ಯಕಿಕ್ಕಿ ಸರ್ವರನು
ಮುಕ್ಕಿ ಮುಣಿಗಿ ಧರ್ಮಕೆ ವಿರೋಧಿಸಿ
ಸಿಕ್ಕದಂತಲ್ಲಲ್ಲಿ ತುಕ್ಕುತಿರೆ 2

ಇತ್ತ ಶಾಪದಿಂದಲಿತ್ತಲೀರ್ವರಿಗಾ
ಪೊತ್ತ ಸುರಾಂಗದಲಿತ್ತಲೋರ್ವವನಿಯು
ಕಿತ್ತು ಒಯ್ಯಲು ಬೆಂಬುತ್ತಿ ಹರಿಯು ಕೊಲ್ಲೆ
ಇತ್ತ ಹಿರಣ್ಯನುನ್ಮತ್ತದಿಂದ
ಸುತ್ತುತಿರುವಾಗ ಪುತ್ರನು ಭಾಗವ
ತ್ತೋತ್ತಮನಾಗಿ ಸರ್ವೋತ್ತಮ ಬ್ರಹ್ಮನ
ಕರವ ಲೋ-
ಕತ್ರಯವರಿವಂತೆ ಬಿತ್ತಿದನು3

ಸೊಲ್ಲು ಕೇಳುತಲಿ ಎಲ್ಲೆಲೊ ನಿನ್ನ ದೈ-
ವೆಲ್ಲೊ ಮತ್ತಾವಲ್ಲೆಲ್ಲಿಹನೆನುತಲಿ
ನಿಲ್ಲದರ್ಭಕನ್ನ ಕಲ್ಲು ಕೊಳ್ಳಿ ಮುಳ್ಳು
ಕರವಾಳ ಬಿಲ್ಲು ನಾನಾ
ಎಲ್ಲ ಬಾಧೆಯನ್ನು ನಿಲ್ಲದೆ ಬಡಿಸೆ
ಎಳ್ಳನಿತಂಜದೆ ಎಲ್ಲೆಲ್ಲಿಪ್ಪನೆಂದು
ಸೊಲ್ಲನು ಬೇಗದಿ ಸಲ್ಲಿಸೆನೆ 4

ಏನು ಕರುಣಾಳೊ ಏನು ದಯಾಬ್ಧಿಯೊ
ಏನು ಭಕ್ತರಾಧೀನನೊ ಏನೇನು
ನಾನಾ ಮಹಿಮನೊ ಏನೇನೊ ಏನೊ-ಈ-
ತನ ಲೀಲೆ ಕಡೆಗಾಣರಾರೊ
ದಾನವಾಭಾಸನ ಮಾನಹಾನಿ ಗೈಯೆ
ಸ್ಥಾಣು ಮೊದಲಾದ ಸ್ಥಾನದಲ್ಲಿ ಸರ್ವ
ದೀನರಿಗೆ ದತ್ತ ಪ್ರಾಣನಾಗ 5

ತುಟಿಯು ನಡುಗೆ ಕಟ ಕಟ ಪಲ್ಲು
ಕಟನೆ ಕಡಿದು ನೇಟನೆ ಚಾಚುತ
ಪುಟಪುಟ ನಾಸಪುಟದ ರಭಸ
ಕಠಿನ ಹೂಂಕಾರ ಘಟುಕಾರ
ನಿಟಿಲನಯನ ಸ್ಫುಟಿತ ಕಿಗ್ಗಿಡಿ
ಮಿಟಿಯೆ ಹುಬ್ಬಿನ ನಿಟಿಲ ರೋಷದಿ
ಮಿಟಿಯೆ ಚಂಚು ಪುಟದಂತೆ ರೋಮ
ಚಟುಲ ವಿಕ್ರಮುದ್ಧಟ ದೈವ 6

ನಡುಕಂಭದಿಂದ ಒಡೆದು ಮೂಡಿದ
ಕಡು ದೈವವು ಸಂಗಡಲೆ ಚೀರಲು
ಬಡ ಜೀವಿಗಳು ನಡುಗಿ ಭಯವ
ಪಡುತಲಿ ಬಾಯ ಬಿಡುತಿರೆ
ಕಡೆಯೆಲ್ಲೊ ಹೆಸರಿಡಬಲ್ಲವರಾರೊ
ತುಡುಗಿ ದುಷ್ಟನ ಪಡೆದ ವರವ
ಪಿಡಿದು ಅವನ ಕೆಡಿಸಿ ಹೊಸ್ತಿಲೊ-
ಳಡಗೆಡಹಿದನು ಪವಾಡದಲಿ 7

ವೈರಿಯ ಪಿಡಿದು ಊರುಗಳಲ್ಲಿಟ್ಟು
ಘೋರ ನಖದಿಂದ ಕೊರೆದು ಉದರವ
ದಾರುಣ ಕರುಳಹಾರ ಕೊರಳಲ್ಲಿ
ಚಾರುವಾಗಿರಲು ಮಾರಮಣ
ಸಾರಿಗೆ ಭಕ್ತಗೆ ಕಾರುಣ್ಯಮಾಡಿ ಶ್ರೀ
ನಾರೀಶನಾನಂದದಿ ತೋರುತಿರೆ ಸುರ-
ವರರ್ನೆರೆದು ಅಪಾರ ತುತಿಸಿ ಪೂ-
ಧಾರೆ ವರುಷ ವಿಸ್ತಾರೆರೆಯೆ 8

ನೃಕೇಸರಿಯಾಗೆ ಭಕುತಗೆ ಬಂದ
ದುಃಖವ ಕಳೆದು ಸುಖವನೀವುತ್ತ
ಅಕಳಂಕದೇವ ಲಕುಮಿಪತಿ ತಾ-
ರಕ ಮಂತ್ರಾಧೀಶ ಸುಕುಮಾರ
ಅಖಿಳ ಲೋಕಪಾಲಕ ಪ್ರಹ್ಲಾದಗೆ
ಸಖನಾಗಿ ಇಪ್ಪ ಸಕಲ ಕಾಲದಿ
ಭಂಜನ ವಿಜಯವಿಠ್ಠಲ
ಮುಕುತಿ ಈವ ಭಜಕರಿಗೆ9
*********

No comments:

Post a Comment