Thursday 17 October 2019

ಶೋಕವಾಗುವುದು ಯಾತಕೆ ಎಲಾ ಕಾಕುಲಾತೀ ಸಲ್ಲ ankita vijaya vittala

ವಿಜಯದಾಸ
ಶೋಕವಾಗುವುದು ಯಾತಕೆ ಎಲಾ |
ಕಾಕುಲಾತೀ ಸಲ್ಲ ಕರಣಶುದ್ಧನಾಗು ಪ

ಜೀವಕ್ಕೆ ಎಂಬೆನೆ ಆನಂತಕಲ್ಪಕ್ಕೆ
ಜೀವನಿತ್ಯ ಸುಖೀ ಎಲ್ಲಿದ್ದರೂ
ಸಾವೆ ಹುಟ್ಟೀಯಲ್ಲಿ ಸತತದಲಿ ಚರಿಸಿದರು
ಕ್ಲೇಶ 1

ಶರೀರಕೆಂಬೆನೆ ಚೇತನ ತಪ್ಪಿದರೆ
ಇರುವುದು ಜಡವಾಗಿ ಬಿದ್ದುಕೊಂಡು
ಹಿರಿದಾಗಿ ತಿಳಿವುದು ಜಡಕೆ ಲೇಪನವುಂಟೆ
ಚರಾಚರದಲಿ ಇದೆ ಸಿದ್ಧವಾಗಿಪ್ಪಯಾ 2

ಪರಿ ಜ್ಞಾನದಲಿದು
ಸಾರ ಕಾಣಿಸದು ಸಂಸಾರದೊಳಗೆ
ಮಾರಜನಕ ನಮ್ಮ ವಿಜಯವಿಠ್ಠಲ ಹರಿಯ
ಸಾರದಲೆ ಅಭಿಮಾನ ಬಿಡದವಗೆ ಇದೆ ಉಂಟು 3
**********

No comments:

Post a Comment