Wednesday 16 October 2019

ಪಾಲಿಸೋ ಪತಿತಪಾವನ್ನಾ ನಿನ್ನ ಪಾಲಿಗೆ ಬಂದೆ ankita vijaya vittala

ವಿಜಯದಾಸ
ಪಾಲಿಸೊ ಪತಿತಪಾವನ್ನಾ ನಿನ್ನ
ಪಾಲಿಗೆ ಬಂದೆ ಮೋಹನ್ನಾ -ಆಹಾ
ಪಾಲಾಬ್ಧಿಶಾಯಿ ಗೋಪಾಲರೊಡೆಯಾ ಲೋಕ
ಪಾಲಕ ವಿನುತಾ ಗೋಪಾಲ ಫಾಲಾಕ್ಷನೆ ಪ

ಬಂದೆನೊ ನಿನ್ನ ಹಂಬಲಿಸಿ ನಾನು
ನೊಂದು ಸಂಸ್ಕøತಿಯಲ್ಲಿ ಸೂಸಿ ಈಸಿ
ಮುಂದಣ ನೆಲೆಗಾಣೆ ಗುಣಿಸಿ ಏನೇ
ನೆಂದು ಪೇಳಲೊ ವಿಸ್ತರಿಸಿ -ಆಹಾ
ಮಂದರಧರ ನಿನ್ನ ಮಂದಿರದ ದಾಸಿ
ಕಂದನು ನಾನೆಲೊ ಕಣ್ತೆರೆದು ನೋಡೊ 1

ಪೊಂದಿದೆ ಭಾರವವೊಹಿಸು ಪ್ರತಿ
ಬಂಧಕವ ಪರಿಹರಿಸು ನಿನ
ಗೊಂದಿಸುವೆ ಕೊಡು ಲೇಸು ಅತ್ಯಾ
ನಂದದಲ್ಲಿ ಚಿತ್ತವಿಡಿಸು -ಆಹಾ
ಇಂದಿರಾ ಮಂದಿರಾ ಸುಂದರ ಯೋಜನ
ಗಂಧಿಯ ಬಸುರಿಲಿ ಬಂದ ಭವದೂರಾ 2

ನಿಂದ್ಯ ಕರ್ಮವು ಮಾಡಿದವನ ದೂತ
ರಿಂದ ತರಿಸಿದೆ ತ್ರಿಭುವನಾ ಜಯ
ವೆಂದು ಕೊಂಡಾಡಲು ಜವನಾ ಭೀತಿ
ಯಿಂದ ಮಾಡಿದ ನಿನ್ನ ಸ್ತವನಾ -ಆಹ
ಒಂದಾನಂತವಾಗಿ ದ್ವಂದ್ವಪಾಪಗಳಿಗೆ
ನಿಂದಿರಬಲ್ಲವೆ ಸಂದರುಶನವಾಗೆ 3

ಕಂದುಕ ಪುಟಿ ಸೂತ ಬಳುಕಿ ದೈತ್ಯ
ವೃಂದ ಮೋಹಕವಾಗಿ ಸಿಲುಕಿ ಸುರ
ಸಂದೋಹಕೆ ನೀನೆ ಘಳಿಕಿ ನಿಜ
ವೆಂದು ಮಾನವರಿಗೆ ಬಳಿಕಿ -ಆಹಾ
ಎಂದೆಂದಿಗೆ ಸಿದ್ಧ್ದಾಗಂಧಮಾತುರ ಕಳೆ
ಗುಂದದೆ ಮತಿ ಕೊಡು ನಂದಕಾನಂದ ಹಸ್ತನೆ 4

ಹಂದಿ ನಾಯಿ ನರಿ ರಾಸಾ ಜನ್ಮ
ಬಂದರೆ ಎನಗದು ಹರುಷಾ ಬಹು
ಮುಂದುಂಟು ರಹಸ್ಯಾ ಮನಸಾಪೇಕ್ಷಾ
ಸಂದೇಹ ಮಾಡಿಸೊ ಶ್ರೀಶಾ -ಆಹಾ
ಯೋನಿ ಸಂದೀದ ಕಾಲಕ್ಕು
ಒಂದು ವಿಂಶತಿ ಮತ ಹೊಂದಿಸದಿರು ಹರಿ5

ಅಂಧಃಕಾರದೊಳೆನ್ನ ತಂದೆ ಇದ
ರಿಂದ ನಿನಗೇನೊ ಮುಂದೆ ಲಾಭ
ಬಂದಾದರೂ ಇಲ್ಲಾ ಇಂದೆ ಸುಖ
ಸಾಂದ್ರ ಕಡಿಮೆನೊ ಮುಂದೆ -ಆಹಾ 6

ಇಂದಿರಾವರ ರಾಮ ಶಾಮಾ ರಾಮ
ಚಂದ್ರ ಚತುರ ಸಾರ್ವಭೌಮಾ ದಿವ್ಯ
ಸಿರಿ ಉರಪ್ರೇಮಾ ಮುಚ
ಕುಂದ ಪಾಲಕ ನಿಸ್ಸೀಮಾ -ಆಹಾ
ಇಂದ್ರಿಯಂಗಳು ತನು ಸಂಬಂಧದೆಡೆಗೆ ಪೋಪಾ
ತೊಂದರೆ ಬಿಡಿಸೊ ಗೋವಿಂದ ಗೋವಳರಾಯಾ 7

ದುಂದುಭಿ ಭೇರಿಯ ರಭಸಾ ಮಹಾ
ಬಂಧುರಾ ನೆರೆದ ವಿಶೇಷಾ
ಮಂತ್ರಿ ಮಂದಿ ಪರಿವಾರ ಭೂಷಾ -ಆಹಾ
ಬಿಂದು ಮಾತುರ ಇವು ಮುಂದಿನೈಶ್ವರ್ಯ ಸಿದ್ಧಾ
ಕುಂದಗೊಡದೆ ಬೊಮ್ಮನಂದದಿ ಪಥತೋರಿ8

ಹಿಂದಣ ಬಲವನ್ನು ಕಾಣೆ ನಾನು
ಅಂದು ನುಡಿದದ್ದು ಮಾಣೆ ಅನು
ಬಂಧಗಳಿಗೆ ಕಾಮಧೇನೆ ಸತ್ಯ
ಪತಿ ನೀನೆ -ಆಹಾ
ನಂದನ ಮನೋಹಂಸಾ 9

ಸಂದಣೆ ತೊಲಗದೆಂಬಿಯಾ ಆಹಾ
ಬಂದರೆ ಬರಲಿ ಎಂಬಿಯಾ ಇದೇ
ಸಂದಲಿ ಅನುಗಾಲ ನ್ಯಾಯಾ ಅನು
ಸಂಧಾನ ನಿನ್ನಲಿ ಪ್ರೀಯಾ -ಆಹಾ
ಇಂಧನದೊಳು ವಾಯು ವ್ಯಾಪಿಸಿದದ
ರಂದದಿ ಸರ್ವಾಂಗಾ ನಿಂದಿಹ ನಿರ್ದೋಷಾ 10

ಕಂದರ್ಪ ಕೋಟಿ ಲಾವಣ್ಯ ಅರ
ವಿಂದ ನಯನ ಗುಣ ಗಣ್ಯ ದೀನ
ಮಂದಾರ ಸತತ ತಾರುಣ್ಯ ಸರಿ
ಬಂದಂತೆ ಮಾಡೊ ಕಾರುಣ್ಯ -ಆಹಾ
ವಂದೆದೈವವು ನಾನೆಂದ ಮುರಾರಿಯ
ಕೊಂದು ಬಿಸುಟಾಧೀರ ನಂದಕುಮಾರಕ11

ಇಂದ್ರಿಯಂಗಳ ಗಾತ್ರಾ ಪ್ರಾಣಾ ಸರ್ವ
ಕುಂದಣ ಪುಟದಂತೆ ವರಣಾ ಕಂಬು
ಕಂಧರ ಪೊಳಿಯಲಿ ವಚನಾ -ಆಹಾ
ಸಂದರ್ಭವಾಗಿ ಏನೆಂದದೆ ಸಚ್ಛಾಸ್ತ್ರ
ವೊಂದಿಬರಲಿ ಮುಕುಂದಾ ಮುದ್ದುರಂಗಾ12

ಅಂದಿಗೆ ಪೊಂಗೆಜ್ಜೆ ಮೆರೆಯೆ ತಂದೆ
ಯೆಂದು ಕುಣಿಯೊ ಎನ್ನ ಧೊರಿಯೆ
ವಾದ್ಯಾ ಧಿಂ ಧಿಂ ಧಿಮಿಕೆಂದು ಮೊರೆಯೆ ಮೇಲೆ
ವೃಂದಾರಕ ಪುಷ್ಪಗರಿಯೆ -ಆಹಾ
ಇಂದಿನ ಉತ್ಸಾಹ ಇಂದ್ರಾದ್ಯರು ಪೂತು
ರೆಂದು ಪೊಗಳೆ ನಗೆಯಿಂದ ನೋಡುವದೆ 13

ಮಧ್ವರಮಣ ಪಾಪಿ ಭಕ್ತಿ jnaನ
ಸದ್ಧರ್ಮ ವೈರಾಗ್ಯಯುಕ್ತಿ ಕೊಡು
ಭುಕ್ತಿ ಇತ್ತು
ಮುದ್ರಧಾರನಾ ಮಾಡಿ ಮುಕ್ತಿ -ಆಹಾ
ನಿರ್ಧಾರಮಾರ್ಗವ ಬದ್ಧದಿ ತೋರಯ್ಯಾ
ಪತಿ 14

ಬಂಧೂರ ಕೀರ್ತಿ ಸಂಪನ್ನಾ ಕರಿ
ಬಂಧ ವಿಮೋಚನ್ನ ನಾ
ರಂದ ವರದ ಸುಪ್ರಸನ್ನಾ ಶತಾ
ನಂದ ಕಾನನವಾಸಾ ಘನ್ನಾ -ಆಹಾ
ಸಿಂಧುಜನಕನೆ ಪರಂಧಾಮತ್ರಯ ಸತ್ಯ
ಸಂಧ ವಿಜಯವಿಠ್ಠಲೆಂದು ವದನ ಎನ್ನಾ15
*********

No comments:

Post a Comment