ಕಾಡ ಬೆಳದಿಂಗಳು
ಈ ಸಂಸಾರ ಕತ್ತಲೆ ಬೆಳದಿಂಗಳು ||ಪಲ್ಲವಿ||
ಉಂಟಾದ ಕಾಲಕ್ಕೆ ನೆಂಟರು ಇಷ್ಟರು
ಬಂಟರಾಗಿ ಬಂದು ಬಾಗಿಲ ಕಾಯ್ವರು
ಉಂಟಾದತನ ತಪ್ಪಿ ಬಡತನ ಬಂದರೆ
ಒಂಟೆಯಂತೆ ಕತ್ತ ಮೇಲಕೆ ಎತ್ತುವರು ||೧||
ಏರುವ ದಂಡಿಗೆ ನೂರಾಳು ಮಂದಿಯು
ಮೂರು ದಿನದ ಭಾಗ್ಯ ಝಣಝಣವು
ಮೂರಾರು ಸಾವಿರ ದಂಡವ ತೆತ್ತರೆ
ರಂಗವಿಠಲನನ್ನೆ ಸರಿ ಎಂಬರಯ್ಯ ||೨||
***
*ಶ್ರೀಪಾದರಾಜರ ಕೃತಿ ಕಾಡ ಬೆಳದಿಂಗಳು | ಈ ಸಂಸಾರ |
ಕತ್ತಲೆ ಬೆಳದಿಂಗಳು*
*ಪೂರ್ಣಪಾಠದ ಜೊತೆಗೆ ಅರ್ಥಾನುಸಂಧಾನದ ಸಾರಾಂಶ:*
*ಪಲ್ಲವಿ*
ಕಾಡ ಬೆಳದಿಂಗಳು | ಈ ಸಂಸಾರ |
ಕತ್ತಲೆ ಬೆಳದಿಂಗಳು ||ಪ||
ಅರ್ಥ: ಈ ಸಂಸಾರ ಅಥವ ಜೀವನವು ಕಾಳಬೆಳದಿಂಗಳಿದ್ದಂತೆ. ಇಲ್ಲಿ ಸುಖ(ಬೆಳದಿಂಗಳು ಶಾಂತವಾಗಿ ಹಿತವಾಗಿ ಕಾಣುವಂತೆ) ಮತ್ತು ಕಷ್ಟ (ಕತ್ತಲೆಯಲ್ಲಿ ಏನೂ ತೋಚದೆ ಪರದಾಡುವಂತೆ) ಎಂಬುದು ಶಾಶ್ವತವಲ್ಲ. ಬೆಳಕಾದ ಮೇಲೆ ಕತ್ತಲು, ಕತ್ತಲಾದ ಮೇಲೆ ಬೆಳಕು ನಿರಂತರ ಆಗುವಂತೆ ಸುಖ ಮತ್ತು ಕಷ್ಟದ ಚಕ್ರದ ಸುಳಿಗಳು ಬರುತ್ತವೆಂದು ತಿಳಿದು ಬಾಳಬೇಕು. ಇವೆರಡೂ ಒಂದೇ ನಾಣ್ಯದ(ಜೀವನದ) ಎರಡು ಮುಖವಿದ್ದಂತೆ. ಜೀವನವು ಒಂದು ಕ್ಷಣ ಪ್ರಕಾಶಮಾನವಾಗಿ ಕಂಡರೆ, ಇನ್ನೊಂದು ಕ್ಷಣ ಅನಿಶ್ಚಿತತೆಯ ಕತ್ತಲೆಯಿಂದ ಕೂಡಿರುತ್ತದೆ.
*1ನೇ ನುಡಿ*
ಸತ್ಯಕ್ಕೆ ಧರ್ಮನು ಲೆತ್ತವನಾಡಲು
ಅರ್ಧ ಭಾಂಡಾರವೆಲ್ಲವ ಸೋತು
ಮತ್ತೆ ವಿರಾಟರಾಯನ ಮನೆಯಲ್ಲಿ
ತೊತ್ತಾದಳು ದ್ರೌಪದಿ ಒಂದು ವರುಷ ||
ಧರ್ಮಕ್ಕೆ ಸತ್ಯಕ್ಕಾಗಿ ಜೂಜಾಡಿ ಧರ್ಮರಾಯ ಅರ್ಧ ರಾಜ್ಯ ಸೋತ. ಕೊನೆಗೆ ದ್ರೌಪದಿ ವಿರಾಟನ ಮನೆಯಲ್ಲಿ 1 ವರ್ಷ ದಾಸಿಯಾದಳು. ಧರ್ಮದ ಹಾದಿಯೂ ಕಷ್ಟ ತರುತ್ತದೆ - ಸಂಸಾರ ಹೀಗೇ.
*2ನೇ ನುಡಿ*
ಪುಂಡರೀಕಾಕ್ಷ ಪುರುಷೋತ್ತಮ ಹರಿಯಂ
ಬಂಡಿ ಬೋವನಾದ ಪಾರ್ಥನಿಗೆ ಭೂ
ವಂಂಡಲನಾಳುವ ಹರಿಶ್ಚಂದ್ರರಾಯನು
ಕೊಂಡವ ಕಾಯಿಂದನಂ ಹೊಲೆಯನಾಳಾಗಿ ||
ಪುಂಡರೀಕಾಕ್ಷನಾದ ಹರಿಯೇ ಅರ್ಜುನಿಗೆ ಸಾರಥಿಯಾದ. ಭೂಮಂಡಲ ಆಳಿದ ಹರಿಶ್ಚಂದ್ರ ರಾಜನೇ ಹೊಲೆಯನ ಮನೆಗೆ ದಾಸನಾದ. ದೊಡ್ಡವರಿಗೂ ಗತಿ ತಪ್ಪುವುದಿಲ್ಲ.
*3ನೇ ನುಡಿ*
ಉಂಟಾದ ಕಾಲಕ್ಕೆ ನೆಂಟರು ಇಷ್ಟರು
ಬಂಟರಾಗಿ ಬಂದು ಬಾಗಿಲ ಕಾಯ್ದರು
ಉಂಟಾದತನ ತಪ್ಪಿ ಬಡತನ ಬಂದರೆ
ಒಂಟೆಯಂತೆ ಗೋಣ ಮೇಲೆತ್ತುವರು ||
ಹಣ ಇದ್ದಾಗ ಸಂಬಂಧಿಕರು, ಗೆಳೆಯರು ಸೇವಕರಂತೆ ಬಾಗಿಲು ಕಾಯುತ್ತಾರೆ. ಹಣ ಹೋದರೆ ಒಂಟೆಯಂತೆ ಕತ್ತೆತ್ತಿ ನೋಡುವುದಿಲ್ಲ. ಸ್ವಾರ್ಥ ಸಂಬಂಧಗಳ ಸತ್ಯ.
*4ನೇ ನುಡಿ*
ಉಂಬಾಗ ಉಡುವಾಗ ಕೊಂಬಾಗ ಕೊಡಂವಾಗ
ಬೆಂಬಲದಲಿ ನಲಿನಲಿವುತಿಹರು
ಬೆಂಬಲತನ ತಪ್ಪಿ ಬಡತನ ಬಂದರೆ
ಇಂಬಂ ನಿನಗಿಲ್ಲ ನಡೆಯೆಂಂಬರಂ ||
ತಿನ್ನುವಾಗ, ಉಡುವಾಗ, ಏನಾದರೂ ಕೊಡುವಾಗ, ತೆಗೆದುಕೊಳ್ಳುವಾಗ ಎಲ್ಲರೂ ಬೆಂಬಲಕ್ಕೆ ನಿಂತು ಸಂತೋಷಪಡುತ್ತಾರೆ. ಬೆಂಬಲ ಹೋದರೆ "ನಿನಗೆ ನನ್ನಿಂದ ಆಗಲ್ಲ, ಹೋಗು" ಎನ್ನುತ್ತಾರೆ.
*5ನೇ ನುಡಿ*
ಏರುವ ದಂಡಿಗೆ ನೂರಾಳು ಮಂದಿಯಂ
ಮೂರು ದಿನದ ಭಾಗ್ಯ ಝಣಝಣವು
ನೂರಾರಂ ಸಾವಿರ ದಂಡವ ತೆತ್ತರೆ
ರಂಗವಿಠ್ಠಲನೇ ಸರಿಯೆಂಬೊರಯ್ಯ ||
ಅಧಿಕಾರಕ್ಕೆ ಏರಿದಾಗ ನೂರು ಜನ ಜೊತೆ ಇರುತ್ತಾರೆ. ಅದು 3 ದಿನದ ಝಣಝಣ ಭಾಗ್ಯ ಅಷ್ಟೆ. ಕಷ್ಟ ಬಂದರೆ ಲಕ್ಷಾಂತರ ದಂಡ ತೆತ್ತರೂ ಕೊನೆಗೆ *ರಂಗವಿಠ್ಠಲನೇ* ಗತಿ.
*ಸಾರಾಂಶದ ತಿರುಳು*
84 ಲಕ್ಷ ಯೋನಿಗಳಲ್ಲಿ ತಿರುಗಿ ಬಂದ ಈ ಜನ್ಮ ಬಹಳ ಶ್ರೇಷ್ಠವಾದದ್ದು. ಕ್ಷಣಭಂಗುರವಾದ ಈ ಸಂಸಾರದಲ್ಲಿ ಎಲ್ಲವೂ ನಶ್ವರ. ಕಾಲ ಚಕ್ರದಲ್ಲಿ ಸಿಲುಕಿ ನಾವು ಮಾಡಿದ ಕರ್ಮ ಅನುಭವಿಸಲೇ ಬೇಕಾಗುತ್ತದೆ. ಸಂಪತ್ತು, ಅಧಿಕಾರ, ಸಂಬಂಧ ಎಲ್ಲವೂ ಅನಿತ್ಯ. ಅವು ಇದ್ದಾಗ ಮಾತ್ರ ಜನ ಜೊತೆ ಇರುತ್ತಾರೆ. ಕಷ್ಟ ಬಂದರೆ ಒಬ್ಬನೇ ಉಳಿಯುತ್ತೇನೆ. ಹಾಗಾಗಿ ಭಗವಂತನ ಶರಣು ಬಿಟ್ಟು ಬೇರೆ ಆಧಾರವಿಲ್ಲ ಎನ್ನುವುದು ಶ್ರೀಪಾದರಾಜರ ಸಂದೇಶ.
(whatsapp)
***
KaaLa beladingalu | ee samsaara kattale beladingalu || pa ||
Satyakke dharmanu lettavanaadalu | artha bhaandaaravellava sotu |
matte viraatana maneyalli | tottaadalu droupadi omdu varusha || 1 ||
Pundarikaaksha purushottama hariyu | bandi bovanaada paarthanige bhoo- |
mandalanaaluva harishchamdra raayanu | kondava kaaydanu holeyanaalaagi || 2 ||
Untaada kaalakke nentaru ishtaru | bantaraagi maneya baagila kaayvaru |
untaada tana tappi badatana bandare | onteyante gona melakettuvaru || 3 ||
Umbaaga uduvaaga kombaaga koduvaaga | bembaladali nalinalivutiharu |
bembalatana tappi badatana bandare | imbu ninagilla nadeyembaru || 4 ||
Eruva dandige nooraaru mandiyu | mooru dinada bhaagya jhana jhanavu |
nooraaru saavira dandava tettare | rangaviththalane sariyemborayyaa || 5 ||
***
No comments:
Post a Comment