Tuesday 15 October 2019

ಅಂಧಂ ತಮಸು ಇನ್ನಾರಿಗೆ ಗೋವಿಂದನ ನಿಂದಿಸುವರಿಗೆ ankita neleyadikeshava

ಅಂಧಂತಮಸು ಇನ್ನಾರಿಗೆ
ಗೋವಿಂದನ ನಿಂದಿಸುವರಿಗೆ II ಪII

ಸಂದೇಹವಿಲ್ಲವು ಸಾರಿಸಾರಿಗೆ ವಾಯು-
ನಂದನನ ವಂದಿಸದವರಿಗೆ IIಅ ಪII


ಮಾತು ಮಾತಿಗೆ ಹರಿಯ ನಿಂದಿಸಿ-ಸ-
ರ್ವೋತ್ತಮ ಶಿವನೆಂದು ವಾದಿಸಿ
ಧಾತುಗ್ರಂಥಗಳೆಲ್ಲ ತೋರಿಸಿ-ವೇ-
ದಾಂತ ಪ್ರಮಾಣಗಳ ಹಾರಿಸಿ
ಸೋತು ಸಂಕಟಪಟ್ಟು ಘಾತಕ ಒಡಲೊಳಗಿಟ್ಟು
ನೀತಿ ಹೇಳುವ ಕೆಟ್ಟ ಜಾತಿಗಳಿಗಲ್ಲದೆ II೧II

ಮೂಲಕವತಾರಕ್ಕೆ ಭೇದವು-ಮುಖ್ಯ
ಶೀಲಪಂಡಿತರಿಳಗೆ ಅತಿ ವಾದವು
ಲೀಲಾಸಾದೃಶ್ಯವ ತೋರುತ-ಲಿಂಗ-
ಭಂಗವಿಲ್ಲದ ದೇಹ ಹಾರುತ
ಮೂಲಗುರುವು ಕುಂತೀಬಾಲನೆನ್ನದೆ ವೃಥಾ
ಶೀಲಗೆಟ್ಟಂಥ ಖಳರಿಗಲ್ಲದೆ ಮತ್ತೆ II೨II

ವ್ಯಾಸರ ಮಾತುಗಳಾಡುತ-ವಿ-
ಶ್ವಾಸಘಾತಕತನ ಮಾಡುತ
ದೋಷವೆಂದರೆ ನುಡಿ ಕೇಳದೆ-ಸಂ-
ತೋಷವೆಂದರೆ ನೋಡಿ ಬಾಳದೆ
ಶೇಷಶಯನ ಆದಿಕೇಶವರಾಯನ
ದಾಸರೊಡೆಯ ಮಧ್ವ ದ್ವೇಷಿಗಳಿಗಲ್ಲದೆ II೩II'
*****

ರಾಗ : ಭೈರವಿ  ತಾಳ : ಛಾಪು 


ಅಂಧಂ ತಮಸ್ಸು ಇನ್ಯಾರಿಗೆ । ಗೋ ।

ವಿಂದನ ನಿಂದಿಸುವರಿಗೆ ।। ಪಲ್ಲವಿ ।।


ಸಂದೇಹವಿಲ್ಲಾ ಯೆಂದೆಂದಿಗೆ । ವಾಯು ।

ನಂದನನ ನಿಂದಿಸುವರಿಗೆ ।। ಅ ಪ ।।


ಮಾತು ಮಾತಿಗೆ ಹರಿಯ ನಿಂದಿಸಿ । ಸ ।

ರ್ವೋತ್ತಮ ಶಿವನೆಂದು ವಂದಿಸಿ ।

ಧಾತು ಗ್ರಂಥಗಳೆಲ್ಲ ವೋಡಿಸಿ । ವೇ ।

ದಾಂತ ಪ್ರಮಾಣಗಳ್ಹಾರಿಸಿ ।।

ಸೋತು ಸಂಕಟ ಪಟ್ಟು ।

ಘಾತ ಕೊರಳೋಳಿಟ್ಟು ।

ನೀತಿ ಹೇಳುವ ಕೆಟ್ಟ ।

ಜ್ಯಾತಿಗಳಿಗಲ್ಲದೆ ।। ಚರಣ ।।


ಮೂಲಾವತಾರಕ್ಕೆ ಭೇದವ -

ಮುಖ್ಯ ಪಂಡಿತ ।

ರೊಳಗೆ ವಿವಾದವ ।

ಲೀಲಾವದೃಶ್ಯವ -

ತೋರುವ ಮ್ಯಾಲೆ ।।

ಲೀಲ ಭಂಗರಿಗೆದೆ ಹಾರುವ ।

ಮೂಲ ಮೂರುತಿ । ಕುಂತಿ ।

ಬಾಲನ್ನ ನೆನೆಯಾದ ।

ಶೀಲಗೆಟ್ಟು । ದುಃ ।

ಶೀಲರಿಗಲ್ಲದೆ ।। ಚರಣ ।।


ವ್ಯಾಸರ ಮಾತುಗಳಾಡುತ್ತಾ । ವಿ ।

ಶ್ವಾಸ ಘಾತಕತನ ಮಾಡುತ್ತಾ ।

ದೋಷವೆಂದರೆ ನೋಡಿಕೊಳ್ಳದೆ । ಸಂ ।।

ತೋಷವೆಂದು ತಾ ಬಾಳದೆ ।

ಶೇಷಶಯನ ಆದಿಕೇಶವರಾಯನ ।

ದಾಸರಾಗದೆ 

ಮಧ್ವ ದ್ವೇಷಿಗಳಿಗಲ್ಲದೆ ।। ಚರಣ ।।

****

No comments:

Post a Comment