Friday 24 December 2021

ರಾಷ್ಟ್ರದೇವಗೆ ಪ್ರಾಣದೀವಿಗೆ others RASHTRADEVAGE PRANADEEVIGE rss

 


RSS song

ರಾಷ್ಟ್ರದೇವಗೆ ಪ್ರಾಣದೀವಿಗೆ ಸೇವೆಯಾಗಲಿ ನಾಡಿಗೆ

ಮೃತ್ಯು ಭೃತ್ಯನು ಹಿಂದುಭೂಮಿಗೆ ಮರಣ ಕಾದಿದೆ ಸಾವಿಗೆ ||ಪ||


ಕೋಟಿಕೋಟಿಯ ತರುಣ ಧಮನಿಯು ರಾಷ್ಟ್ರಪ್ರೇಮದ ಸ್ರೋತದಿ

ನಾಳದಾಳದ ನೆತ್ತರೊರೆಯುವ ದೇಶ ಧರ್ಮದ ಗಾನದಿ

ಹೃದಯಹೃದಯವು ದುರ್ಗವಾಗಿದೆ ಅರಿಯನಳಿಸಲು ನಿಂತಿದೆ

ಹಿಂದಿನಂತೆಯೆ ಹಿಂದು ಚೇತನವಿಂದು ಜಾಗೃತವಗಿದೆ ||೧||


ಕಾಲಕಾಲಕೆ ಕ್ರಾಂತಿಶೂರರ ಕಣಕೆ ಕಳಹುತ ಬೆದರದೆ

ಹಿಂದುದೇಶದ ಯುವಜನಾಂಗದ ಧ್ಯೇಯಬಾವುಟವೇರಿದೆ

ಹಗೆಯ ತುಳಿಯುತ ಗಗನದೆತ್ತರ ಬೆಳೆದು ನಿಲ್ಲುವ ಪೌರಷ

ಪ್ರಕಟವಾಗಿದೆ ರಾಷ್ಟ್ರಗೌರವ ಉಳಿಸಿ ಬೆಳೆಸುವ ಸಾಹಸ ||೨||


ಹೂಣಗ್ರೀಕರ ಆಂಗ್ಲ ಮೊಗಲರ ದಹಿಸಿ ಹುಡಿಧೂಳೆಬ್ಬಿಸಿ

ಗೆದ್ದ ನೆಲದಲಿ ಧರ್ಮವೈರಿಗೆ ಚಿರ ಸಮಾಧಿಯ ನಿರ್ಮಿಸಿ

ಪ್ರಲಯ ರುದ್ರನ ಡಮರುವಾದನ ಶೂಲದಲಗಿನ ದರ್ಶನ

ನಡೆಯಲಿಂದೀ ದೇವಧರೆಯಲಿ ಕಾಲಭೈರವನರ್ತನ ||೩||


ಯಾವ ಮಂದೆಗು ಬಾಗೆವೆಂದಿಗು ಸ್ವಾಭಿಮಾನದ ಬಲವಿದೆ

ಬರಲಿ ವೈರಿಯು ಗೋರಿ ಕಾದಿದೆ ಗೆದ್ದು ಬದುಕುವ ಛಲವಿದೆ

ಬಾಳಬಲ್ಲೆವು ಆಳಬಲ್ಲೆವು ಸೋಲನೊಲ್ಲೆವು ಒಲ್ಲೆವು

ವಿಶ್ವವೆಲ್ಲವು ಮುನಿದು ನಿಂತರು ನಾಡನುಳಿಸಲು ಬಲ್ಲೆವು ||೪||

***

rAShTradEvage prANadIvige sEveyAgali nADige

mRutyu BRutyanu hiMduBUmige maraNa kAdide sAvige ||pa||


kOTikOTiya taruNa dhamaniyu rAShTraprEmada srOtadi

nALadALada nettaroreyuva dESa dharmada gAnadi

hRudayahRudayavu durgavAgide ariyanaLisalu niMtide

hiMdinaMteye hiMdu cEtanaviMdu jAgRutavagide ||1||


kAlakAlake krAMtiSUrara kaNake kaLahuta bedarade

hiMdudESada yuvajanAMgada dhyEyabAvuTavEride

hageya tuLiyuta gaganadettara beLedu nilluva pouraSha

prakaTavAgide rAShTragourava uLisi beLesuva sAhasa ||2||


hUNagrIkara AMgla mogalara dahisi huDidhULebbisi

gedda neladali dharmavairige cira samAdhiya nirmisi

pralaya rudrana DamaruvAdana SUladalagina darSana

naDeyaliMdI dEvadhareyali kAlaBairavanartana ||3||


yAva maMdegu bAgeveMdigu svABimAnada balavide

barali vairiyu gOri kAdide geddu badukuva Calavide

bALaballevu ALaballevu sOlanollevu ollevu

viSvavellavu munidu niMtaru nADanuLisalu ballevu ||4||

***


ರಾಷ್ಟ್ರದೇವಗೆ ಪ್ರಾಣದೀವಿಗೆ ಸೇವೆಯಾಗಲಿ ನಾಡಿಗೆ

ಮೃತ್ಯು ಭೃತ್ಯನು ಹಿಂದುಭೂಮಿಗೆ ಮರಣ ಕಾದಿದೆ ಸಾವಿಗೆ || ಪ ||


ಕೋಟಿಕೋಟಿಯ ತರುಣ ಧಮನಿಯು ರಾಷ್ಟ್ರಪ್ರೇಮದ ಸ್ರೋತದಿ

ನಾಳದಾಳದ ನೆತ್ತರೊರೆಯುವ ದೇಶ ಧರ್ಮದ ಗಾನದಿ

ಹೃದಯಹೃದಯವು ದುರ್ಗವಾಗಿದೆ ಅರಿಯನಳಿಸಲು ನಿಂತಿದೆ

ಹಿಂದಿನಂತೆಯೆ ಹಿಂದು ಚೇತನವಿಂದು ಜಾಗೃತವಾಗಿದೆ || 1 ||


ಕಾಲಕಾಲಕೆ ಕ್ರಾಂತಿಶೂರರ ಕಣಕೆ ಕಳುಹುತ ಬೆದರದೆ

ಹಿಂದುದೇಶದ ಯುವಜನಾಂಗದ ಧ್ಯೇಯಬಾವುಟವೇರಿದೆ

ಹಗೆಯ ತುಳಿಯುತ ಗಗನದೆತ್ತರ ಬೆಳೆದು ನಿಲ್ಲುವ ಪೌರುಷ

ಪ್ರಕಟವಾಗಿದೆ ರಾಷ್ಟ್ರಗೌರವ ಉಳಿಸಿ ಬೆಳೆಸುವ ಸಾಹಸ || 2 ||


ಹೂಣಗ್ರೀಕರ ಆಂಗ್ಲ ಮೊಗಲರ ದಹಿಸಿ ಹುಡಿಧೂಳೆಬ್ಬಿಸಿ

ಗೆದ್ದ ನೆಲದಲಿ ಧರ್ಮವೈರಿಗೆ ಚಿರ ಸಮಾಧಿಯ ನಿರ್ಮಿಸಿ

ಪ್ರಲಯ ರುದ್ರನ ಡಮರುವಾದನ ಶೂಲದಲಗಿನ ದರ್ಶನ

ನಡೆಯಲಿಂದೀ ದೇವಧರೆಯಲಿ ಕಾಲಭೈರವನರ್ತನ || 3 ||


ಯಾವ ಮಂದೆಗು ಬಾಗೆವೆಂದಿಗು ಸ್ವಾಭಿಮಾನದ ಬಲವಿದೆ

ಬರಲಿ ವೈರಿಯು ಗೋರಿ ಕಾದಿದೆ ಗೆದ್ದು ಬದುಕುವ ಛಲವಿದೆ

ಬಾಳಬಲ್ಲೆವು ಆಳಬಲ್ಲೆವು ಸೋಲನೊಲ್ಲೆವು ಒಲ್ಲೆವು

ವಿಶ್ವವೆಲ್ಲವು ಮುನಿದು ನಿಂತರು ನಾಡನುಳಿಸಲು ಬಲ್ಲೆವು || 4 ||

***


No comments:

Post a Comment