Wednesday 22 September 2021

ವಾಸುಕಿ ರೂಪನೆ ವೈಯ್ಯಾರದಿಂದ ಸುವಾಸಿನಿ traditional ನಾಗರ ಪಂಚಮಿ ಹಾಡು naga panchami song

 ನಾಗರಪಂಚಮಿಹಾಡು


ವಾಸುಕಿ ರೂಪನೆ ವೈಯ್ಯಾರದಿಂದ ಸುವಾಸಿನಿಯರು ಅರಿತು | ಪೂಜೆಯ ಮಾಡುವಾ |

ಆ ಶುಭಾ ಚರಿತೆಯ ಕಥೆಯ ನಾ ಪೇಳುವೆ |ಈಶ ಕುಮಾರನೆ ಪಾಲಿಪುದು ಮತಿಯ||


ಬಡ ಬ್ರಾಹ್ಮಣನ ಮಗಳು ಅಕೆಮುಂಚಿ ಎಂಬೋಳು ಗರುಡಪಂಚಮಿ ವೃತವು ತನಗೆನುತಲಿ |

ತರಿಸಿಕೊಡಬೇಕಾದ ಫಲಪುಷ್ಪ ಹ್ಯಾಂಗೆನುತ | ಒಡಹುಟ್ಟಿದಣ್ಣಗೆ ಅರುಹಿದಾ‌ಎಲ್ಳು || 


ಅಂದ ಮಾತನು ಕೇಳಿ ಚಂದ್ರಶೇಖರ ತಾನು ಚೆಂದುಳ್ಳ ಕುಸುಮಗಳ ಕೊಯ್ಯುತಿರಲು |

ಒಂದು ಕ್ಯಾದಿಗೆ ಒಳಗೆ ಹೊಂದಿದ್ದ ಶೇಷ ತಾ ಬಂದು ಸೋಕಿದನವನ ಉದರ ಸ್ಥಳವನು || 


ವಿಷವು ತಲೆಗೇರಿ ಪರವಶನಾಗಿ ಬಿದ್ದಿರಲು |ಕುಸುಮಲೋಚನೆಗೆ ಬಂದರುಹಿದರು ಬೇಗ |

ಶಿಶುವತಿ ವಲ್ಲಭ ವಿಷವ ಕೋ ನಾಗರಾ ಭೋಗಿಸು ಎಂದರ್ತಿಯಲಿ ತೆರಳಿದಾಳು || 


ನೆನೆ ಅಕ್ಕಿ, ನೆನೆಗಡಲೆ ಗೊನೆಯ ಬಾಳೆಯ ಹಣ್ಣು, ಚಿಗುಳಿ, ತಂಬಿಟ್ಟು, ತೆಂಗಿನಕಾಯಿಯು |

ಅರಳು, ಹುರಿಕಡಲೆ,ಹುಣಸಿಯಕಾಯಿ | ಮೊದಲಾದ ಫಲಗಳನೆ ತೆಕ್ಕೊಂಡು ತೆರಳಿದಾಳು || 


ರಂಭೆಯರೊಡಗೂಡಿ ಬಂದು ನಿಂತಳೆ ಅನುಜೆ ಚೆಂದದಿ ಅರ್ಘ್ಯಪಾದ್ಯವನೆ ಮಾಡಿ |

ಭಕ್ತಿಯಿಂದಲಿ ಛತ್ರ ಚಾಮರವೆತ್ತಿ ನಿಂತು ಪೂಜಿಸಿದಳು ಕಾಳಿಂಗನ || 


ಹಳದಿಯಾ ವಸ್ತ್ರಗಳು, ಬಿಳಿಯ ಜನಿವಾರಗಳು | ಥಳ ಥಳನೆ ಹೊಳೆಯುವಾ ಮುತ್ತಿನಾ ತೊಡುಗೆ|

ನಳ ನಳಿಸುವಾ ಪುಷ್ಪ ಫಲಗಳನೆ ತಕ್ಕೊಂಡು |ಬೆಳಗಿದರು ಧೂಪ ದೀಪಾರತಿಯನು||


ಹುತ್ತದಾ ಮೃತ್ತಿಕೆಯ ಅಕ್ಷತೆಯ ತಕ್ಕೊಂಡು ಅಣ್ಣನಾ ಬೆನ್ನು ತೊಳೆದಳಾಗ |

ಎಷ್ಟೊತ್ತ್ ಮಲಗಿದೆನೆಂದು | ಎಚ್ಚರದಿ ಮೈಮುರಿದು | ಎಚ್ಚರದಿ ಕಣ್ತೆರೆದು ಕುಳಿತನಾಗ|| 


ಹರಿಗೆ ಹಾಸಿಗೆಯಾದೆ | ಹರಿಗೆ ಕುಂಡಲವಾದೆ | ಹರಿಯೆ ದ್ರೌಪತಿಯ ಮಾನ ಕಾಯ್ದೆ |

ಒಡಹುಟ್ಟಿದವರ ತಂದೆ ತಾಯಿಯರ | ವಾಲಿಯಾ ಭಾಗ್ಯವಾ ಕಾಳಿಂಗರಾಯ ಕರುಣಿಸು ಎಂದಳು || 


ಈ ಕಥೆಯ ಹೇಳ್ದವರಿಗೆ ಈ ಕಥೆಯ ಕೇಳ್ದವರಿಗೆ | ಒಡ ಹುಟ್ಟಿದವರಾ ವಾಲೆಯಾ ಭಾಗ್ಯವಾ |

ಮತಿಯನೆಂದೆಂದಿಗೂ | ಕಾಳಿಂಗರಾಯನು ಕರುಣಿಸುವನು | ಜಯಮಂಗಳ ಶುಭಮಂಗಳ ||

***


No comments:

Post a Comment