..
ರಾಗ - : ತಾಳ -
ಅರಿತು ಭಜಿಪರ್ಯಾರೊ ರಂಗಯ್ಯ ನಿನ್ನ ll ಪ ll
ಸಿರಿದೇವಿಯು ಕಿರು ಬೆರಳಲಿರುವ
ಪರಿಪರಿ ಸೊಬಗನು ಅರಿಯಲಾರಳೊ ದೇವ ll ಅ ಪ ll
ಇಂದಿರಾರಮಣಿ ಅರಿಯಲಾರಳೊ ದೇವ
ವೃಂದಾರಕರೆಲ್ಲ ನಿಂದು ಧ್ಯಾನಿಪರೊ ಆ
ನಂದತೀರ್ಥರ ಮತಕೆ ಬಂದವರೆಲ್ಲ
ಎಂದಿಗಾದರು ನಿತ್ಯಾನಂದ ಪೊಂದುವರು ll 1 ll
ಮಾನವರಲಿ ಹೀನವರ್ಗ ತುಂಬಿಹುದೊ
ಜ್ಞಾನಿಗಳು ನಿಂದು ನಿನ್ನ ಧ್ಯಾನಿಪರೊ
ನೀನೆ ದಯಮಾಡಿ ಸಲಹಬೇಕಯ್ಯ ಕೃಷ್ಣ
ಕಾನನದೊಳು ಕಣ್ಣುಮುಚ್ಚಿ ಕೈಬಿಟ್ಟಿಹರೊ ll 2 ll
ಜಲದೊಳಗಿನ ಕಪ್ಪೆ ಜಲದ ಸವಿಯರಿಯದೊ
ಜಲಜಸುಗಂಧವ ಜಲವರಿಯದೊ
ನೆಲೆಯ ಕಂಡವರ್ಯಾರೊ ನೆಲೆಯಾದಿಕೇಶವನ
ಸುಲಲಿತವಾದ ತತ್ವ ಸುಲಭವೆಂಬುವರೊ ll 3 ll
***
ಅರಿತು ಭಜಿಪರ್ಯಾರಯ್ಯ ರಂಗಯ್ಯ ನಿನ್ನ ಪ
ಸಿರಿದೇವಿಯು ಕಿರುಬೆರಳಲ್ಲಿರುವ ಸೊಬಗನ್ನುಅರಿಯಲಾರಳೊ ದೇವಅ
ಇಂದಿರಾದೇವಿಯು ಅರಿಯಲಾರಳು ದೇವಬೃಂದಾರಕರೆಲ್ಲ ನಿಂದು ಯೋಚಿಪರುನಂದತೀರ್ಥರ ಮತದೊಳಗೆ ಬಂದವರೆಲ್ಲಎಂದಿಗಾದರು ಪರಮಾನಂದ ಪೊಂದುವರು1
ಮಾನವರು ಹೀನಮಾರ್ಗದೊಳು ಮುಳುಗಿಹರುಜ್ಞಾನಿಗಳು ನಿಂದು ಧ್ಯಾನಿಪರು ನಿನ್ನನೀನೆ ದಯಮಾಡಿ ಸಲಹೊ ಎನ್ನನು ಕೃಷ್ಣಕಾನನದೊಳು ಕಣ್ಣುಮುಚ್ಚಿ ಬಿಟ್ಟಿಹರೊ 2
ಜಲದೊಳಗಿನ ಕಪ್ಪೆ ಜಲದ ಸವಿಯರಿಯದುಜಲದ ಸುಗಂಧವ ಜಲವರಿಯದುನೆಲೆಯ ಕಂಡವರ್ಯಾರು ನೆಲೆಯಾದಿಕೇಶವನೆಸುಲಲಿತ ತತ್ತ್ವವನು ಸುಲಭ ಮಾರ್ಗದಿ ತೋರೊ 3
***
No comments:
Post a Comment