Wednesday, 1 September 2021

ಅರಿತು ಭಜಿಪರ್ಯಾರಯ್ಯ ರಂಗಯ್ಯ ನಿನ್ನ ankita neleyadikeshava

 ..

ರಾಗ - : ತಾಳ -


ಅರಿತು ಭಜಿಪರ್ಯಾರೊ ರಂಗಯ್ಯ ನಿನ್ನ ll ಪ ll


ಸಿರಿದೇವಿಯು ಕಿರು ಬೆರಳಲಿರುವ

ಪರಿಪರಿ ಸೊಬಗನು ಅರಿಯಲಾರಳೊ ದೇವ ll ಅ ಪ ll


ಇಂದಿರಾರಮಣಿ ಅರಿಯಲಾರಳೊ ದೇವ

ವೃಂದಾರಕರೆಲ್ಲ ನಿಂದು ಧ್ಯಾನಿಪರೊ ಆ

ನಂದತೀರ್ಥರ ಮತಕೆ ಬಂದವರೆಲ್ಲ 

ಎಂದಿಗಾದರು ನಿತ್ಯಾನಂದ ಪೊಂದುವರು ll 1 ll


ಮಾನವರಲಿ ಹೀನವರ್ಗ ತುಂಬಿಹುದೊ

ಜ್ಞಾನಿಗಳು ನಿಂದು ನಿನ್ನ ಧ್ಯಾನಿಪರೊ

ನೀನೆ ದಯಮಾಡಿ ಸಲಹಬೇಕಯ್ಯ ಕೃಷ್ಣ

ಕಾನನದೊಳು ಕಣ್ಣುಮುಚ್ಚಿ ಕೈಬಿಟ್ಟಿಹರೊ ll 2 ll


ಜಲದೊಳಗಿನ ಕಪ್ಪೆ ಜಲದ ಸವಿಯರಿಯದೊ

ಜಲಜಸುಗಂಧವ ಜಲವರಿಯದೊ

ನೆಲೆಯ ಕಂಡವರ್ಯಾರೊ ನೆಲೆಯಾದಿಕೇಶವನ

ಸುಲಲಿತವಾದ ತತ್ವ ಸುಲಭವೆಂಬುವರೊ ll 3 ll

***

ಅರಿತು ಭಜಿಪರ್ಯಾರಯ್ಯ ರಂಗಯ್ಯ ನಿನ್ನ ಪ


ಸಿರಿದೇವಿಯು ಕಿರುಬೆರಳಲ್ಲಿರುವ ಸೊಬಗನ್ನುಅರಿಯಲಾರಳೊ ದೇವಅ


ಇಂದಿರಾದೇವಿಯು ಅರಿಯಲಾರಳು ದೇವಬೃಂದಾರಕರೆಲ್ಲ ನಿಂದು ಯೋಚಿಪರುನಂದತೀರ್ಥರ ಮತದೊಳಗೆ ಬಂದವರೆಲ್ಲಎಂದಿಗಾದರು ಪರಮಾನಂದ ಪೊಂದುವರು1


ಮಾನವರು ಹೀನಮಾರ್ಗದೊಳು ಮುಳುಗಿಹರುಜ್ಞಾನಿಗಳು ನಿಂದು ಧ್ಯಾನಿಪರು ನಿನ್ನನೀನೆ ದಯಮಾಡಿ ಸಲಹೊ ಎನ್ನನು ಕೃಷ್ಣಕಾನನದೊಳು ಕಣ್ಣುಮುಚ್ಚಿ ಬಿಟ್ಟಿಹರೊ 2


ಜಲದೊಳಗಿನ ಕಪ್ಪೆ ಜಲದ ಸವಿಯರಿಯದುಜಲದ ಸುಗಂಧವ ಜಲವರಿಯದುನೆಲೆಯ ಕಂಡವರ್ಯಾರು ನೆಲೆಯಾದಿಕೇಶವನೆಸುಲಲಿತ ತತ್ತ್ವವನು ಸುಲಭ ಮಾರ್ಗದಿ ತೋರೊ 3

***


No comments:

Post a Comment