Tuesday, 28 September 2021

ಗುರು ಮುಖ್ಯ ಪ್ರಾಣನ ಮಾನವರೆಲ್ಲ ಭಜಿಸಿರೋ ankita neleyadikeshava

 ಗುರು ಮುಖ್ಯ ಪ್ರಾಣನ ಮಾನವರೆಲ್ಲ ಭಜಿಸಿರೋ ll ಪ ll


ಪರಮ ಪದವೀಯುವ ಗುರು ಮುಖ್ಯ ಪ್ರಾಣನ

ಧರೆಯೊಳಗುಳ್ಳ ಮಾನವರೆಲ್ಲ ಭಜಿಸಿರೋ ll ಅ ಪ ll


ಅಂದು ತ್ರೇತೆಯಲಿ ಹನುಮನಾಗಿ ಅವತರಿಸಿ

ಬಂದು ದಾಶರಥಿಯ ಪಾದಕೆರಗಿ

ಸಿಂಧುವನೆ ದಾಟಿ ಮುದ್ರಿಕೆಯಿತ್ತು ದಾನವರ

ವೃಂದ ಪಾರ ದಹಿಸಿ ಚೂಡಾಮಣಿಯ ತಂದವನ ll 1 ll


ದ್ವಾಪರಯುಗದಿ ಭೀಮಸೇನನೆನಿಸಿ

ಶ್ರೀಪತಿಯ ಪಾದ ಕಡು ಭಜಕನಾಗಿ

ಕೋಪಾವೇಶದಿ ದುಃಶಾಸನನು ಸೀಳಿ

ಭೂಪರ ಬಲದೊಳಗೆ ಜರೆಜರೆದು ಕರೆದವನ ll 2 ll


ಕಲಿಯುಗದಲಿ ತುರೀಯಾಶ್ರಮವನೆ ಧರಿಸಿ

ಕಲುಷದ ಮಾಯಿಗಳನು ಸೋಲಿಸಿ

ಖಿಲವಾದ ಮಧ್ವಮತವನೆ ನಿಲಿಸಿ ಕಾಗಿ-

ನೆಲೆಯಾದಿಕೇಶವ ಪರದೈವನೆಂದೆನಿಸುವನ ll - ಶ್ರೀಕನಕದಾಸರು

***


No comments:

Post a Comment