Saturday 4 December 2021

ಎನಗೆ ನೀ ಬಂಧು ಎಂದೆಂದು ದಯಾ ಸಿಂಧು ತಮನ ankita hayavadana ENAGE NEE BANDHU ENDENDU DAYAA SINDHU TAMANA

 


ಎನಗೆ ನೀ ಬಂಧು ಎಂದೆಂದು ದಯಾಸಿಂಧು ||ಪ||


ತಮನ ಕೊಂದೆ ಶ್ರುತಿತತಿಯ ನೀ ತಂದೆ 

ಕೂರುಮನಾಗಿ ಗಿರಿಯನು ಎತ್ತಿದೆ

ಕ್ಷಮೆಯ ಪೊತ್ತೆ ಹಿರಣ್ಯಕನ ಕಿತ್ತೆ 

ತ್ರಿವಿಕ್ರಮನಾಗಿ ಬೆಳೆದೆ ತ್ರೈಲೋಕ್ಯವನಳೆದೆ ||೧||


ರಾಯರಾಯರ ಗೆಲಿದೆ ರಾವಣನ ಬಲವನು ಮುರಿದೆ 

ಉಪಾಯದಿ ಗೋವಳನಾದೆ

ಸ್ತ್ರೀಯರ ಕೆಡಿಸಿದೆ ಕಲಿಯಾಗಿ ಕೊಲಿಸಿದೆ

ಕಾಯಜನ ತಾತ ಕಾಮಿತ ಫಲದಾತ ||೨||


ಸುರರ ಶಿರೋರನ್ನ ಕರುಣಾಸಂಪನ್ನ 

ಮಾನ ವರಮಾನ್ಯ ಸಿರಿ ಹಯವದನ 

ಪಾವನ್ನ ಪರಿಪೂರ್ಣ ಶಶಿವರ್ಣ

ನಿರುತ ನಿನ್ನವನ್ನ ಕಾಯಬೇಕೆನ್ನ ||೩||

***


Enage ni bandhu endendu dayasindhu ||pa||


Tamana konde shrutitatiya ni tande 

kurumanagi giriyanu ettide

kshameya potte hiranyakana kitte 

trivikramanagi belede trailokyavanalede ||1||


Rayarayara gelide ravanana balavanu muride 

upayadi govalanade

striyara kediside kaliyagi koliside

kayajana tata kamitaphaladata ||2||


Surara shiroranna karunasampanna 

mana varamanya siri hayavadana 

pavanna paripurna shashivarna

niruta ninnavanna kayabekenna ||3||

***


ಎನಗೆ ನೀ ಬಂಧು ಎಂದೆಂದು ದಯಾಸಿಂಧು ಪ.


ತಮನ ಕೊಂದೆ ಶ್ರುತಿತತಿಯ ನೀ ತಂದೆ ಕೂ-ರುಮನಾಗಿ ಗಿರಿಯನೆತ್ತಿದೆಕ್ಷಮೆಯ ಪೊತ್ತೆ ಹಿರಣ್ಯಕನ ಕಿತ್ತೆ ತ್ರಿವಿ-ಕ್ರಮನಾಗಿ ಬೆಳೆದೆ ತ್ರೈಲೋಕ್ಯವನಳೆದೆ 1


ರಾಯರಾಯರ ಗೆಲಿದೆ ರಾವಣಬಲವನು ಮುರಿದೆ ಉ-ಪಾಯದಿ ಗೋವಳನಾದೆಸ್ತ್ರೀಯರ ಕೆಡಿಸಿದೆ ಕಲಿಯಾಗಿ ಕೊಲಿಸಿದೆಕಾಯಜನ ತಾತ ಕಾಮಿತಫಲದಾತ 2


ಸುರರ ಶಿರೋರನ್ನ ಕರುಣಾಸಂಪನ್ನ ಮಾನ-ವರ ಮಾನ್ಯ ಸಿರಿ ಹಯವದನ ಪಾವನ್ನಪರಿಪೂರ್ಣ ಶಶಿವರ್ಣನಿರುತ ನಿನ್ನವನ್ನ ಕಾಯಬೇಕೆನ್ನ 3

****


No comments:

Post a Comment