Wednesday 1 September 2021

ನರಸಖ ನಾರಾಯಣಕೆರೆಪುರ ವಾಸ ಕರದಿ ಪಿಡಿದು ಎನ್ನ ಕರಿ ಕಮಲೇಶ ankita bheemesha krishna

 ..

ನರಸಖ ನಾರಾಯಣಕೆರೆಪುರ ವಾಸ

ಕರದಿ ಪಿಡಿದು ಎನ್ನ ಕರಿ ಕಮಲೇಶ ಪ


ಗರುಡಾರೂಢನು ಗಜವರದ ವೈಕುಂಠ

ಕೊಡುವ ಪಾಲಿಸಿ ಪಾಂಡವರ ಮನೆ ಭಂಟ1


ಪಕ್ಷಿವಾಹನ ರಾಕ್ಷಸಾರಿ ರಾವಣನ

ಶಿಕ್ಷಿಸಿ ವಿಭೀಷಣನ ರಕ್ಷಿಸಿದ ರಾಮ 2


ವಿನತೆಸುತನ ಏರಿ ಘನತರುತ್ಸವದಿ

ಸವರಿದಿ ಸುರವಂದ್ಯ ಸುಜನಕ್ಕಾನಂದ 3


ಹಕ್ಕಿಯ ಪಕ್ಕದಲ್ಲ್ಯರ್ಕಕೋಟಿತೇಜ ಜಾ-

ನಕ್ಕಿ ಸಹಿತಯೋಧ್ಯನಾಳುವ ರಾಮ 4


ನಗಧರ ಖಗನ್ಹೆಗಲೇರಿ ಉಲ್ಲಾಸ

ನಗುವ ಭೀಮೇಶ ಕೃಷ್ಣÀ ಬರುವ ಜಗದೀಶ5

***


No comments:

Post a Comment