Wednesday 1 September 2021

ಬೊಮ್ಮ ಗಟ್ಟಿಯಲಿದ್ದ ನಮ್ಮ ಪ್ರಾಣೇಶನು ಹನುಮನೆಂಬುವ ಹರಿಭಜಕನೀತ ankita bheemesha krishna

 .


ಬೊಮ್ಮ ಗಟ್ಟಿಯಲಿದ್ದ ನಮ್ಮ ಪ್ರಾಣೇಶನು ಹ-

ನುಮನೆಂಬುವ ಹರಿಭಜಕನೀತ 1

ರಮ್ಮೆರಮಣನಾದ ರಾಮಸೇವಕನಂಘ್ರಿ

ಒಮ್ಮೆ ನೋಡಲು ದೋಷದೂರವಾಗ 2

ನೋಡಿ ಎರಡು ಕರ ಜೋಡಿಸಿ ಮುಗಿದು ಕೊಂ-

ಡಾಡುತೀತ ನಗುವ ಮಹಿಮೆಯನು 3

ಆಡಿದ್ವಚನ ಸತ್ಯಮಾಡುವ ಭಕುತರು

ಬೇಡಿದ್ವರಗಳ ಚೆಲ್ಲಾಡುವನು 4

ಹರುಷದಿಂದಲಿ ತಾ ಕಿಂಪುರುಷಖಂಡದಿ ತಪಾ-

ಚರಿಸುತಿದ್ದನು ಮಹಾಪುರುಷನೀತ 5

ಅರಸರಂತಕನಾದ ಪರಶುರಾಮನ ಗೆದ್ದ

ಅರಸನಂಘ್ರಿಗಳನು ಸ್ಮರಿಸಿಕೊಂಡು 6

ಸುಗ್ರೀವನಲ್ಲಿ ಪರಮನುಗ್ರ(ಹ) ಮಾಡುತಲಿ ದ-

ಶಗ್ರೀವನಲ್ಲಿ ಬಂದನಾಗ್ರ(ಹ)ದಿಂದ 7

ಶರಧಿ ಹಾರುತ ನಖ ಶಿರದಿಂದುದ್ದವ ಮಾಡಿ

ಉರಿವೀಲಂಕೆಗೆ ತಾನಂಕುರವನಿಟ್ಟ(?) 8

ಮರನಕಿತ್ತಕ್ಷಕುಮಾರನ ಮುರಿದು ತಾರ

ಮರನ ಕರೆದು(?) ತಂದಮರನಾದನು 9

ವರದಿ ಬೆಳದ ಕುಂಭಕರಣನ ಕೊಂದು ಕಟ್ಟಿ

ಸ್ಥಿರಪಟ್ಟವನು ವಿಭೀಷಣರಿಗಿಟ್ಟ 10

ಮಾತೆಕೊಟ್ಟಂಥ ರತ್ನರಾಕಟೆಯನ್ನು ತಂದು

ಭೂತಳದೊಡೆಯಗಿಟ್ಟ ಪ್ರೀತಿಯಿಂದ 11

ಜೊತೆಮುತ್ತಿನ ಹಾರ ಕೊಡಲು ಜಾನಕಿ ರಘು-

ನಾಥಗ್ವೊಲಿದು ಅಜಪದವಿನಿಟ್ಟ 12

ಕೋತಿ ಸೈನ್ಯವ ಕೂಡಿ ಸೇತುಬಂಧನ ಮಾಡಿ

ಸೀತಾಚೋರನ ಪ್ರಾಣಘಾತಕನು 13

ಅಂಜನಾತ್ಮಜ ದೊಡ್ಡ ಸಂಜೀವನವ ತಂದು

ಕೊಂದಕಪಿಗಳ ಪ್ರಾಣ ಪಡೆದನೀತ 14

ಕಂಜಾಕ್ಷಿಯಳ ಕರೆತಂದು ಕೂಡಿಸಿ ರಾಮ-

ಗಂಜದೆ ಎಡೆಯ ಕದ್ದೊಯ್ದೆಂಜಲುಂಡ 15

ರೋಮ ರೋಮಕೆ ಕೋಟಿ ಲಿಂಗ ಧರಿಸಿದ ಸು-

ಜ್ಞಾನಿಗಳೊಡೆಯ ಮುಖ್ಯಪ್ರಾಣದೇವ 16

ರಾಮ ಲಕ್ಷ್ಮಣ ಸೀತಾದೇವೇರಿಂದ್ವೊಡಗೂಡಿ

ಈ ಮಹಾಸ್ಥಳದಿ ನಿಂತ ಮಹಾತ್ಮನು 17

ಭೀತಿ ಇಲ್ಲದಲೆ ಭೀಮೇಶ ಕೃಷ್ಣ(ನ) ನಿಜ

ದೂತನೆನಿಸಿದ ಪ್ರಖ್ಯಾತನೀತ 18

***


No comments:

Post a Comment