Friday 6 August 2021

ಬೆದರದಿರು ಚಿನ್ನಾ ನೀ ಬೆದರದಿರು ಸದಯ ಸುಹೃದಯದಿ ಒದಗಿ ankita vijayaramachandra vittala

 ..

Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane 


ಬೆದರದಿರು ಚಿನ್ನಾ ನೀ ಬೆದರದಿರು ಪ


ಸದಯ ಸುಹೃದಯದಿ ಒದಗಿ ಸಂ -

ಮ್ಮುದವನಿತ್ತು ವಿಪದವ ಕಳೆವನು ಅ.ಪ


ಆದಿಯಲಿ ಬೆದರಿಸಿ ಮನದ ಹದುಳವ ನೋಡುವ

ಪದವಿ ಪೊಗಿಪÀ ಸಂಪದವೀಯನಿವನು 1


ಒಂದೆ ಮನದಿ ಗೋವಿಂದನ ಪದ ನಂಬು

ಹಿಂದಾಗುವುದು ಚಿಂತೆ ಮುಂದುಳಿಯದು 2


ಎಂದೆಂದು ಇಂದಿರೆ ಅರಸ ವಿಜಯ ರಾಮ-

ಚಂದ್ರವಿಠಲ ನಿನ್ನ ಬೆನ್ಹಿಂದೆ ಇರುವನು 3

***


No comments:

Post a Comment