Sunday 1 August 2021

ಗುರುವೆ ನೀನೊಲಿದು ಪಾಮರತರನಾದೆನ್ನ ankita varadesha vittala gurujagannatha dasa stutih

 ..

kruti by ವರದೇಶ ವಿಠಲರು varadesha vittala dasaru

ಗುರುಜಗನ್ನಾಥದಾಸರಾಯರ ಸ್ತೋತ್ರ


ಗುರುವೆ ನೀನೊಲಿದು ಪಾಮರತರನಾದೆನ್ನ

ಹರುಷದಿ ಕರಪಿಡಿದು

ಪರಮ ಕರುಣದಿಂದ ಹರಿದಾಸ್ಯವಿತ್ತು ಉ -

ದ್ಧರಿಸಿದ ಉಪಕಾರ ಮರೆಯಲಾರೆನು ಎಂದೂ ಪ


ವರದೇಂದ್ರಾರ್ಯರÀು ನಮ್ಮ ಶರಣನು ಇವನಿಗೆ

ಕರುಣಿಸೆಂದಾಜ್ಞಾಪಿಸೆ

ತರುಳನ ಶಿರದಲಿ ಕÀರವಿಟ್ಟು ಕೃಪೆಯಿಂದ

ಗುರುತು ತೋರಿದಕೆ ನಾ ಪರಮಧನ್ಯನೆಂಬೆ 1


ಮರುತಮತದತತ್ವ ಹರಿಕಥಾಮೃತಸಾರ

ವರರಹಸ್ಯಗಳೆಲ್ಲವ

ಸರಸವಾಗುತೆಂ ಅರಹುವೆವೆಂತೆಂಬ

ವರವಾಕ್ಯದಂತೆನ್ನ ಪರಿಪಾಲಿಪುದಯ್ಯ 2


ಹರಿಮುನಿದರು ಗುರುಕರುಣಿಪನೊಮ್ಮಿಗೆ

ಗುರು ಮುನಿಯೆ ಹರಿ ಪೊರೆಯ

ಹರಿಯ ಕೃಪೆಗೆ ಮುಖ್ಯ ಗುರುವೆ ಕಾರಣನೆಂದು

ನೆರೆನಂಬಿರಲು ನೀನರಿಯದಂತಿಪ್ಪುದೆ 3


ಮರುತ ಮತಾಬ್ಧಿಚಂದಿರ ಗುರುರಾಜರ

ವರಬಲದಿ ಮೆರೆವ

ಹರಿಭಕ್ತಾಗ್ರಣಿ ನಿಮ್ಮ ಚರಿತೆ ಬಣ್ಣಿಸುವೆನಾ

ಹರಿವಲಿಯುವÀ ತೆರ ಕರುಣಿಸೆನ್ನಯನಿಜ4


ಬರಿದೆ ಬಾಹ್ಯಾಚಾರ ವಿರಚಿಸದಲೆ ಮನದಿ

ಹರಿರೂಪ ಕಾಂಬತೆರದಿ

ವರದೇಶ ವಿಠಲನ ಸಿರದಾಸ್ಯತನವೆಂಬ

ಗುರುತುತೋರುವುದಯ್ಯ ಗುರುಜಗನ್ನಾಥಾರ್ಯ 5

***


No comments:

Post a Comment