Sunday 1 August 2021

ರಮೆಯ ವಕ್ಷೋಜ ಕುಂಕುಮ ಪಂಕಾಂಕಿತವಹ ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru

ಮೂರ್ತಿಧ್ಯಾನ


ರಮೆಯ ವಕ್ಷೋಜ ಕುಂಕುಮ ಪಂಕಾಂಕಿತವಹ

ಕಮಲಜ ಹೃತ್ಸರೋವರ ಕಂಜವೆಂಸಾ

ಮನುಮುನಿ ಮಾನಸಹಂಸ ತಾನಾಗಿಹ

ಮನುಜ ಹೃದ್ವ್ಯೋಮದಿ ಮಿಂಚಿನಂತೆಸೆವಾ

ಧ್ವಜವಜ್ರ ಪದುಮ ಪತಾಕಾಂಕುಶ ವಹ

ನಿಜಕಾಂತಿಯಲರುಣಾಬ್ಜದಂತೆಸೆವಾ

ಪದತಳದ ಮೇಲೆ ಥಳಥಳಿಸುತಲಿಹ

ಪದುಮಭವಾಂಡ ಭೇದನದಕ್ಷವೆನಿಸುವಾ

ಸುರವಾಹಿನಿಗೆ ತೌರುಮನೆ ತಾನಹ

ದುರುಳ ಶಕಟತನುಚೂರ್ಣೀಕೃತವಹ

ಪಾರ್ಥಶರೀರ ರಕ್ಷಣಕರ್ತೃತಾನಹ

ಗೌತಮಸತಿ ಪಾತಕ ಪರಿಹರವಹ

ಉಂಗುಟದಿಂ ಭುವನಗಳತಿಗಳ

ಹಿಂಗಿಪ ನಖಪಂಕ್ತಿಗಳ ಕಿರಣಗಳಾ

ವೀರಮುದ್ರಿಕೆಯ ಮಂಟಿಕೆಯಕಾಂತಿಗಳಾ

ವೋರಂತೆ ಪೆರ್ಚಿಹ ಪಾದಾಂಗುಲಿಗಳಾ

ತೊಳಪ ಕಡೆಯ ಪೆಂಡೆಯದ ತೊಡವು

ಗಳ ವೈಕುಂಠಗಿರಿ ವೇಂಕಟೇಶ ನಿನ್ನಾ |

ಚರಣಸೇವೆಯನೇ ಕರುಣಿಸಯ್ಯಾ

***


No comments:

Post a Comment