Monday 2 August 2021

ಧೇನಿಸೊ ಶ್ರೀಹರಿಯ ಮಹಿಮೆಯ ಧೇನಿಸು ಲಯ ಪ್ರಕರಣ ankita uragadrivasa vittala


click  DHENISO SRI HARIYA


ಲಯ ಪ್ರಕರಣ

ಶ್ರೀ ಉರಗಾದ್ರಿವಾಸವಿಠಲ ದಾಸರ  ರಚನೆ , ರಾಗ ಶಂಕರಾಭರಣ


ಧೇನಿಸೂ ಶ್ರೀಹರಿಯ ಮಹಿಮೆ ನೀ ಧೇನಿಸೊ ಪ


ಧೇನಿಸು ಶ್ರೀಹರಿಯ ಲೀಲಾ ಸೃಷ್ಟಿ

ಮಾನಸದಲಿ ನೆನೆಯೋ ಪರಿಯಾ ||ಆಹಾ||

ತಾನೆ ತನ್ನಯ ಲೀಲಾಜಾಲತನದಿ ತನ್ನ

ಆನಂದದೊಳಿಪ್ಪ ಶ್ರೀ ಮುಕುಂದ ನನ್ನ ಅ.ಪ


ಮೂಲ ನಾರಾಯಣ ದೇವ ತಾನು

ಆಲದೆಲೆಯೊಳು ಲೀಲಾ ತೋರಿ

ಬಾಲತನದಿ ತಾ ನಲಿವಾ ಅನೇಕ

ಕಾಲ ಪರ್ಯಂತರದಿ ಸರ್ವ ||ಆಹಾ||

ಎಲ್ಲ ಜಗವ ತನ್ನ ಒಡಲೊಳಡಗಿಸಿ

ಲೋಲನಾಗಿ ಬಾಲಕ್ರೀಡೆಯಾಡುವಪರಿಯಾ 1

ಇಂತು ಶಯನಗೈದ ಹರಿಯ ಅ-

ನಂತ ವೇದಗಳಿಂದ ತ್ವರಿಯಾ ದುರ್ಗ

ಸಂತಸದಿಂದ ಸಂಸ್ತುತಿಯ ಮಾಡೆ

ಕಂತುಪಿತÀನು ತಾನೆಚ್ಚರಿಯ ||ಆಹಾ||

ಅಂತೆ ತÉೂೀರ್ದ ವಾಸುದೇವಾದಿ ಚತುರಾ-

ನಂತವತಾರ ಸಿರಿ ರೂಪಗಳ ಸಹಿತ 2

ಸಕಲ ರೂಪಗಳ ತನ್ನೊಳೈಕ್ಯಾ ಮಾಡಿ

ಸಕಲ ಲಕುಮಿ ರೂಪಗಳಲಿ ಐಕ್ಯಾ ಇಟ್ಟು

ಸಕಲ ಮರುತರ್ಗೆ ತನುಮುಖ್ಯಾ ಇತ್ತು

ಸಕಲ ಕ್ರೀಡೆಯೊಳು ಸೌಖ್ಯಾ ||ಆಹಾ||

ಲಕುಮಿಯ ಸ್ತುತಿಗೆ ಒಲಿದು ತಾನೇತ-

ನ್ನ ಕಡೆಗಣ್ಣಿಂದ ಪಂಚಜೀವರ ನೋಡಿದಾ 3

ಶುದ್ಧಸೃಷ್ಟಿಯೆಂಬುದೊಂದು ಪರಾ-

ಧೀನ ವಿಶೇಷವು ಎಂದು ಮತ್ತೆ

ಒಂದು ಮಿಶ್ರ ಸೃಷ್ಟಿಯೆಂದು-ಒಂದು

ಕೇವಲ ಸೃಷ್ಟಿಯೆಂದೂ ||ಆಹಾ||

ಮೋದದಿಂದೆಸಗೆ ದುರ್ಗಾರೂಪವಾದ

ತಮಾಂಧಕಾರವ ಪ್ರಾಶಿಸಿದ ವಿವರಾ 4

ತನ್ನೊಳೈಕ್ಯವಾಗಿದ್ದ ಮಹ

ಘನ್ನ ಚತುರ ಮೂರುತಿ ತೋರ್ದ ಇನ್ನು

ತಾನೆ ಪ್ರಕಟನಾಗಿ ನಿಂದ ಆಗ

ಉನ್ನಂತ ಚತುರ ನಾಮದಿಂದ ||ಆಹಾ||

ಜನುಮ ಸ್ಥಿತಿ ಮೃತಿ ಮೋಕ್ಷದನಾಗಿರ್ಪ

ಅನಿರುದ್ಧಾದಿ ಚತುರಮೂರ್ತಿಗಳ ವ್ಯಾಪಾರ5

ಪುರುಷನಾಮಕ ಪರಮಾತ್ಮ ತಾ

ಹರುಷದಿ ಪ್ರಕೃತಿಯು ಸೂಕ್ಷ್ಮವೆಲ್ಲವ

ತರವರಿತು ಘನಮಾಡ್ದ ಮಹಿಮಾ ಸೃಷ್ಟಿ

ತರತರ ಮಾಡ್ದ ಮಾಹಾತ್ಮ ||ಆಹಾ||

ಪ್ರಾಕೃತ ವೈಕೃತ ದೇವತೆ ಸುಮಾನ ಈ

ಮೂರುವಿಧ ಸೃಷ್ಟಿಯಾನೆಸಗಿದ ಪರಿಯ ನೀ 6

ಮಹದಹಂಕಾರ ತತ್ವ ಪಂಚ

ಮಹಭೂತಗಳು ಮನಸ್ತತ್ವ ಇನ್ನು

ಮಹದಶೇಂದ್ರಯಗಳ ತತ್ವ ಮತ್ತೆ

ಮಹತಾಮಿಶ್ರಾಂಧ ತಾಮಸ ತತ್ವ ||ಆಹಾ||

ಇಹುದು ಈ ಪರಿಯಲ್ಲಿ ಪ್ರಾಕೃತ ಸೃಷ್ಟಿಯು

ಮುಹುರ್ಮುಹು ಇದನೆ ಆಲಿಸಿ ನಿನ್ನೊಳು 7

ವೈಕೃತದೋಳು ಸಕಲ ವೃಕ್ಷಾ ತಿರ್ಯಕ್

ಸಕಲ ಪ್ರಾಣಿಗಳ್ ಮನುಜ ಕಕ್ಷಾ ಎಲ್ಲ

ವಿಕೃತ ಸೃಷ್ಟಿಯ ಮಾಡ್ದ ಅಧ್ಯಕ್ಷಾ ಇನ್ನು

ಸುರಸಮಾನ ಸೃಷ್ಟಿಯ ಅಪೇಕ್ಷಾ ||ಆಹಾ||

ಸಕಲ ಸುರಾಸುರಪ್ಸರ ಗಂಧರ್ವರು

ಪಿತೃಗಳು ಯಕ್ಷರಾಕ್ಷಸರ ಪರಿಯವರಾ 8

ಪುನ್ನಾಮ ವಿರಂಚಿ ಬ್ರಹ್ಮಾನು ಅಂದು

ಘನ್ನವಾಸುದೇವ ತಾನು ಸೃಷ್ಟಿ

ಯನ್ನ ಪ್ರಕಟಮಾಡಿದನು ಮುಂದೆ

ಅನಿಲದೇವನು ಸಂಕರುಷಣನ ||ಆಹಾ||

ಅನಿಲನೆ ಸೂತ್ರನಾಮಕವಾಯುವಾಗಿಹ

ಭಾವೀ ಬ್ರಹ್ಮನೀತನೆ ನಿತ್ಯಗುರುವೆಂದು 9

ಪ್ರದ್ಯುಮ್ನನಿಂದ ಸರಸ್ವತಿ ಇನ್ನು

ಶ್ರಧ್ದಾನಾಮಕಳು ಭಾರತಿ ಸೃಷ್ಟಿ-

ಯಾದ ವಿವರ ತಿಳಿಯೊ ಪೂರ್ತೀ ಇದೇ

ಪ್ರದ್ಯುಮ್ನನ ಸೃಷ್ಟಿಯ ಕೀರ್ತಿ ||ಆಹಾ||

ಶ್ರದ್ಧಾದೇವಿಯೊಳು ಸೂತ್ರನ ವೀರ್ಯದಿಂ-

ದುದ್ಭವಿಸಿದ ಜೀವ ಕಾಲನಾಮಕನು 10

ವಿರಂಚಿ ಬ್ರಹ್ಮಗಾಯತ್ರೀರಿಂದ

ಈರ ಬ್ರಹ್ಮರಸೃಷ್ಟಿ ಚರಿತ್ರೆ ಚಿತ್ರ

ವರ ಮಹತ್ತತ್ವದ ಗಾತ್ರ ಇವರ

ತರವೆಲ್ಲ ವಿಚಿತ್ರ ||ಆಹಾ||

ವಿರಂಚಿ ಬ್ರಹ್ಮ ಸರಸ್ವತಿಯಿಂದ ವೈ-

ಕಾರಿಕ ರುದ್ರ ಶೇಷಗರುಡರ ನೀ 11

ಸೂತ್ರ ಶ್ರದ್ಧಾ ದೇವೇರಿಂದ ಪವಿ

ತ್ರತೈಜಸ ರುದ್ರ ಬಂದಾ ಪ-

ವಿತ್ರ ಶೇಷ ಗರುಡರೆಂದೂ ವರ

ಪುತ್ರರಾಗಿಹರತಿ ಚೆಂದಾ ||ಆಹಾ||

ಪುತ್ರನಾದ ಶೇಷ ಸಾವಿತ್ರಿ ಬ್ರಹ್ಮರಿಗೆ

ಪುತ್ರನಾದ ತಾಮಸ ರುದ್ರ ಶೇಷಗೆ12

ಪ್ರದ್ಯುಮ್ನ ಸೂಕ್ಷಶರೀರ ಕೊಟ್ಟು

ಉದ್ಧಾರ ಮಾಡಿದ ಜೀವರ ಅನಿ

ರುದ್ಧನ ಕೈಲಿ ಕೂಡಲವರಾ ಅನಿ

ರುಧ್ದನು ಮಾಡ್ದ ವಿಸ್ತಾರಾ ||ಆಹಾ||

ತದಪೇಕ್ಷ ಮೂಲಪ್ರಕೃತಿಯಿಂದ ಗುಣತ್ರಿ-

ವಿಧ ಕೊಂಡು ಮಹತ್ತತ್ವ ನಿರ್ಮಿಸಿದಾ 13

ಮಹತ್ತತ್ವದಿಂದಹಂಕಾರ ತತÀ್ತ ್ವ

ಮಹದಹಂಕಾರವು ಮೂರುತರ ಇದ-

ರೊಳು ಬ್ರಹ್ಮವೈಕಾರಿಕ ಶರೀರವಾಗಿ

ಹುದು ಈ ಪರಿ ಈ ರೂಪ ವಿವರಾ ||ಆಹಾ||

ಅಹುದು ತೈಜಸದಿಂದ ಶೇಷನ ದೇಹವು

ತಾಮಸದಿಂದಲಿ ರುದ್ರ ತಾನಾದನು 14

ಎರಡನೆಯ ಸಾರಿ ಪ್ರದ್ಯುಮ್ನ ಅರ್ಧ

ನಾರೀ ರೂಪನಾಗಿ ಇನ್ನು ಎಡದಿ

ಸ್ರೀರೂಪ ಜೀವರುಗಳನ್ನು ಬಲದಿ

ಪುರುಷ ಜೀವರೆಲ್ಲರನ್ನು ||ಆಹಾ||

ಧರಿಸಿ ಅವರ ದೇಹಗಳನಿತ್ತು ಅ

ನಿರುದ್ಧನ ಕೈಯೊಳಿತ್ತ ಪರಿಯನ್ನು 15

ಅದರಂತೆ ಅನಿರುಧ್ದದೇವ ತಾ

ನದಕಿಂತ ಸ್ಥೂಲದೇಹವ ಮೂಲ

ಪ್ರಕೃತಿಯಿಂದ ಗುಣವಾ ಕೊಂಡು

ಅದುಭುತ ಮಹತ್ತತ್ವತೋರ್ವ ||ಆಹಾ||

ಅದುಭುತ ಮಹತ್ತತ್ವದಿಂದಹಂಕಾರ

ಉದಿಸಿದ ಪರಿಯನು ಮುದದಿಂದಲಿ ಅರಿತು 16

ಪರಮ ಕರುಣೆಯಲೀ ರುದ್ರನು ಅರ್ಧ

ನಾರೀರೂಪ ತಾಳಿ ಇನ್ನೂ ಎಡದಿ

ಸುರರಸ್ತ್ರೀಗಳನ್ನು ಬಲದೀ

ಸುರಪುರಷರನ್ನೂ ||ಆಹಾ||

ಭರದಿ ಪುಟ್ಟಿಸಿ ಪ್ರದ್ಯುಮ್ನನ ಕೈಲಿತ್ತ

ಪರಿಪರಿ ಸೃಷ್ಟಿಯ ಕ್ರಮವರಿತು ನೀನೀಗ 17

ಅನಿರುಧ್ದ ದೇವನು ಜೀವರ ಸ್ಥೂಲ

ತನುವ ಕೊಟ್ಟು ಪಾಲಿಪ ತದಭಿ-

ಮಾನಿ ಶ್ರೀ ಭೂ ದುರ್ಗಾ ಮಾಡಿ

ತಾನೆಲ್ಲರ ಸತತ ಪೊರೆವಾ ||ಆಹಾ||

ಅನವರತ ವಾಯು ಬ್ರಹ್ಮಸತಿಯರ

ಮಹತ್ತತ್ತಾ ್ವಭಿಮಾನಿಗಳೆನಿಸಿದ ದೇವನ18

ಅಹಂಕಾರ ತತ್ತಾ ್ವಭಿಮಾನಿ ಅದಕೆ

ಅಹಿಗರುಡರು ಅಭಿಮಾನಿ ಇನ್ನು

ಅನಿರುದ್ಧಾದಿ ರೂಪತ್ರಯವು ಇದಕೆ

ಇನ್ನು ನಿಯಾಮಕನು ಎನ್ನು ||ಆಹಾ||

ಮಹತ್ತತ್ವಾ ನಿಯಾಮಕ ವಾಸುದೇವನಿಂದ-

ನವರತ ಈ ಸೂಕ್ಷ್ಮಪ್ರಮೇಯ ಗ್ರಹಿಸಿ ನೀನು 19

ಮನಸ್ತತ್ವಾಭಿಮಾನಿ ಸುರರಾ ಸೃಷ್ಟಿ

ಯನ್ನೆ ವೈಕಾರಿಕದಿಂದಲವರಾ ಮಾಡಿ

ಘನ್ನ ತೈಜಸದಿಂದಲಿಂದ್ರಿಯ ತತ್ಪವೆ-

ಲ್ಲನೆಸಗಿದಂಥ ವಿವರಾ ||ಆಹಾ||

ಉನ್ನಂತ ತನ್ಮಾತ್ರ ಭೂತಪಂಚಕಗಳ

ತಾಮಸದಿಂದಲಿ ಉದಿಸಿದ ಪರಿಯನು 20

ತತ್ವದೇವತೆಗಳಿನ್ನು ತಮಗೆ

ಯುಕ್ತಸ್ಥಾನಾದಿಗಳನ್ನು ಕೊಡೆ

ಉತ್ತಮೋತ್ತಮನನ್ನು ತಾವು

ಸುತ್ತಿ ಸ್ತುತಿಸಲು ಇನ್ನೂ ||ಆಹಾ||

ತತ್ವದೇವತೆಗಳ ಭಕ್ತಿಗೆ ಒಲಿದು

ತತ್ವರೆಲ್ಲರ ತೋರೆ ರೂಪದಿ ಧರಿಸಿಟ್ಟನು21

ರಜಸುವರ್ಣಾತ್ಮಕವಾದ ಘನ

ನಿಜ ಐವತ್ತು ಕೋಟಿ ಗಾವುದ ಉಳ್ಳ

ಅಜಾಂಡವನ್ನು ತಾ ತೋರ್ದ ತನ್ನ

ನಿಜಪತ್ನಿ ಉದರದಿ ಮಾಡ್ದ ||ಆಹಾ||

ಸೃಜಿಸಿ ಬ್ರಹ್ಮಾಂಡದಿ ತತ್ವಗಳೊಡಗೂಡಿ

ನಿಜವಾಗಿ ತಾನೊಳ ಪೊಕ್ಕ ವಿರಾಟನ್ನ 22

ಪಾತಾಳಾದಿ ಸಪ್ತಲೋಕ ಕಡೆ

ಸತ್ಯಲೋಕ ಪರಿಯಂತ ರೂಪ

ತಾ ತಾಳಿದ ಆದ್ಯಂತ ಇಂತು

ನಿರತನು ಸಚ್ಚಿದಾನಂದ ||ಆಹಾ||

ಇಂತು ವಿರಾಟ ತನ್ನಂತರದೊಳು

ತತ್ವರೆಲ್ಲರ ತತ್‍ಸ್ಥಳದೊಳಿಟ್ಟು ಪೊರೆದನ್ನ23

ಲಕುಮಿಯಾತ್ಮಕ ವಾಯುವಿನಿಂದ-ಆಗ

ಸಕಲ ಉದಕ ಶುಷ್ಕದಿಂದ ಇರಲು

ತಕ್ಕ ಮುಕ್ತಾಮುಕ್ತರ ಭೇದದಿಂದ

ತಕ್ಕ ಸ್ಥಾನವೆ ಕಲ್ಪಿಸಿದ ಚೆಂದಾ ||ಆಹಾ||

ಅಕಳಂಕ ಪುನ್ನಾಮಕನು ಧಾಮತ್ರಯ

ಮೊದಲಾದ ನರಕ ಪಂಚಕಗಳ ಮಾಡಿದ 24

ಉದಕ ಶೋಷಣೆಯನ್ನು ಮಾಡಿ ಇನ್ನುಮ-

ಹದಹಂಕಾರವ ಕೂಡಿ ಭೂತ

ಪಂಚಕವ ಮಿಳನ ಮಾಡಿ ಆಗ

ಹದಿನಾಲ್ಕೂದಳಾತ್ಮಕ ಪದ್ಮತೋರಿ ||ಆಹಾ||

ಅದುಭುತ ಪದುಮದಿ ಉದಿಸಿದ ಬ್ರಹ್ಮನು

ಚತುರ ನಾಲ್ಕುದಿಕ್ಕು ಮುದದಿಂದ ನೋಡಿದ 25

ಪದುಮದಲಿ ಚತುರಾಸ್ಯನಾಗಿ ಅದು

ಭುತÀ ಮಹಿಮೆ ನೋಡುತ ತಾನೆ

ಮುದದಿಂದ ಮೊಗತಿರುಗಿಸುತಾ ಅದ

ಅದುಭುತ ಶಬ್ದಕೇಳುತ್ತಾ ||ಆಹಾ||

ತದಪೇಕ್ಷ ತಪವನಾಚರಿಸಿ ನಾಳದಿ ಬಂದು

ಪದುಮನಾಭನು ತಾನು ಮುದದಿಂದ ನೋಡಿದ 26

ಪರಮಪುರುಷ ಉಕ್ತಿ ಲಾಲಿಸಿ ಮೆಚ್ಚಿ

ವರವ ಕೊಟ್ಟು ಪಾಲಿಸಿ ಸೃಷ್ಟಿ

ನಿರುತ ಮಾಡಲು ತಾ ಬೆಸಸೀ ತಾನು

ಅವನಂತರದೊಳು ನೆಲೆಸೀ ||ಆಹಾ||

ಹೊರಗೂ ಒಳಗೂ ನಿಂತು ಸೃಷ್ಟಿಲೀಲೆಯ

ತೋರ್ವ ಉರಗಾದ್ರಿವಾಸವಿಠಲ ವೇಂಕಟೇಶನ್ನ 27

****



No comments:

Post a Comment