Tuesday 5 October 2021

ಧೇನಿಸೊ ಶ್ರೀಹರಿಯ ಮಹಿಮೆ ನೀ ಧೇನಿಸೊ ankita uragadrivasa vittala DHENISO SRI HARIYA MAHIME NEE DHENISO

Audio by Mrs. Nandini Sripad


ಧೇನಿಸೊ ಶ್ರೀಹರಿಯ ಮಹಿಮೆಯ ಪ


ಧೇನಿಸು ಲಯದ ವಿಸ್ತಾರ ಚತುರಾ

ನಾನಕಲ್ಪದ ವಿವರಾ ||ಆಹಾ||

ಧೇನಿಸು ಶತಾನಂದಗೆ ಶತ-

ಮಾನಕಾಲದಲ್ಲಿ ಇದ್ದು ನಡೆಸುವ ಹರಿಕಾರ್ಯ ಅ.ಪ


ಮೊದಲರ್ಧ ಶತಮಾನ ಸೂಕ್ಷ್ಮ ಸೃಷ್ಟಿ

ಪದುಮನ ತೋರಿದ ಮಹಾಮಹಿಮ ಆಗ

ಅದೆ ಪ್ರಥಮ ಪರಾರ್ಧವು ನೇಮ ಮೇಲೆ

ದ್ವಿತೀಯ ಭಾಗಕ್ಕೆಲ್ಲ ಬ್ರಹ್ಮ ||ಆಹಾ||

ಅದರೊಳು ತ್ರಿದಶ ಏಳರ್ಧ ವರ್ಷವು

ಪದುಮಜನಿಂದ ರಾಜ್ಯವನಾಳಿಸಿದ ಪರಿಯನು 1

ದ್ವಾದಶಾರ್ಧವರುಷ ತಾ ಉಳಿಯೆ ಆಗ

ತೋರ್ದ ಅದುಭೂತವಾದ ಮಹಾಪ್ರಳಯ ಸೂಚ-

ನಾದಿ ಕಾರ್ಯವು ತಾ ಮೆರೆಯೆ ಶತ

ಅಬ್ದ ಅನಾವೃಷ್ಟಿ ತೋರಿರೆ ಆಹಾ||

ಪದುಮಜಾಂಡದೊಳಿಹ ಪ್ರಜೆಗಳ ಸಂಹಾರ

ಉದಧಿ ಶೋಷಣೆಯಿಂದ ಸರ್ವಸಂಹಾರವು 2

ಮೇರುಪರ್ವತ ಸ್ಥಳದಲ್ಲಿ ಇದ್ದ ವಿ-

ಧಿರುದ್ರಾದಿಗಳೆಲ್ಲರಲ್ಲಿ ಮಹ

ನರಸಿಂಹ ಆನಂದದಿಂದಲಿ ಆನಂದ

ತೋರುತ್ತ ಕುಣಿದಾಡುತ್ತಲಿ ||ಆಹಾ||

ಹರುಷೋದ್ರೇಕದಿಂದ ಸಂಗಡ ಕುಣಿಯುವ

ಸುರರವಯವಗಳ ತಾನಲಂಕರಿಸಿದನ 3

ನರಹರಿ ನರ್ತನ ಮಾಡಿ ತನ್ನ

ಕರದಿ ತ್ರಿಶೂಲವನ್ನು ನೀಡಿ ದಿ-

ಕ್ಕರಿಗಳ ಪೋಣಿಸಿ ಆಡಿ ಸರ್ವರಉ-

ದರದೋಳಿಟ್ಟು ಕೂಡಿ ||ಆಹಾ||

ಪರಿಪರಿ ನಟಿಸುವ ನಿಟಿಲದೇವನ ಗ್ರಾಸ

ತ್ವರಿತದಿ ತಾ ಮಾಡಿ ಕ್ರೀಡಿಸುತಿರ್ಪನ್ನ 4

ವಾಯುದೇವರ ಗದಾಪ್ರಹಾರದಿಂದ

ಭಯ ಹುಂಕಾರದಿಂದ ಜೀವರ ಲಿಂಗ

ಕಾಯ ಭಂಗಗೈದವರಾ ಅವರ

ಆಯತ ಸ್ಥಳದಲ್ಲಿಟ್ಟವರಾ ||ಆಹಾ||

ಲಯಕಾಲದಿ ಸಂಕರುಷಣ ಮುಖದಿಂದ

ಲಯವಾಗಲು ಅಗ್ನಿ ಪೊರಟು ದಹಿಪುದಾ 5

ಕರಿಯ ಸೊಂಡಿಲಿನಂತೆ ಮಳೆಯ ಧಾರೆ

ನಿರುತ ಶತವರ್ಷಗರೆಯೆ ನೋಡೆ

ಸರ್ವತ್ರ ಜಲಮಯವಾಗೆ ಆಗ

ನೀರಜಾಂಡವೆಲ್ಲ ಕರಗೆ ||ಆಹಾ||

ಗರುಡ ಶೇಷ ಮಾರ್ಗವರಿತು ಬರುತಿರ್ಪ

ಸರ್ವಜೀವರ ತನ್ನ ಉದರದೊಳಿಟ್ಟನ್ನಾ 6

ಅರಿಯೋ ನೀ ಶೇಷಮಾರ್ಗವನ್ನೂ ಇಲ್ಲಿ

ಸುರರು ಕುಬೇರನೊಳಿನ್ನು ಆತ

ವರುಣನಲ್ಲಿ ಲಯವನ್ನೂ ಚಂದ್ರ

ಹರಿಪಾರ್ಷಧರನಿರುದ್ಧನನ್ನು ಆಹಾ

ಅನಿರುದ್ಧ ಸನತ್ಕುಮಾರನ್ನ ತಾವು ಪೊಂದಿ

ಮಾರ ವಾರುಣಿಯು ಹರಿಮಡದಿಯರಲ್ಲಿ ಲಯವಾ 7

ಖಗಪನೊಳವಶಿಷ್ಟ ಸುರರು ಮೊದಲು

ಅಗ್ನಿಯೊಳ್ ಲಯವನ್ನೈದುವರು ಆ

ಅಗ್ನಿ ತಾ ಸೂರ್ಯನ್ನ ಸೇರುವನು ಸೂರ್ಯ

ತಾ ಗುರುವನ್ನ ಸೇರುವನು ||ಆಹಾ||

ಆಗಲೇ ಸರ್ವಮನುಜರು ಪಿತೃಗಳು

ನಿರುಋತಿಯೊಳು ಪೊಕ್ಕು ತಾ ಯಮನಲ್ಲಿ ಸೇರುವಾ 8

ಯಮ ಪ್ರಿಯವ್ರತರಾಯರೆಲ್ಲ ಲಯ

ತಮ್ಮ ಸ್ವಾಯಂಭು ಮನುವಿನಲ್ಲಿ ಮತ್ತೆ ಮ-

ಹಿಮ ಭೃಗುವು ದಕ್ಷನಲ್ಲಿ ಲಯವು

ಆ ಮಹಾದಕ್ಷ ಸ್ವಾಯಂಭು ಇಂದ್ರನಲ್ಲೀ-ಆಹಾ

ಅಮರಪತಿಯು ತಾ ಸೌಪರಣಿಯನು ಪೊಂದಿ

ಈ ಮಾರ್ಗದಿ ತಾನು ಗರುಡನ್ನ ಸೇರುವುದು 9

ಶೇಷಗರುಡರೊಡಗೂಡಿ ಆಗ

ಸರಸ್ವತಿಯನ್ನೆ ಪೊಂದುವರು ಮತ್ತೆ

ಆಸುವಿರಂಚಿ ವಾಯುಗಳು ತಾವು

ಸರಸ್ವತಿಯನ್ನೆ ಪೊಂದುವರು ಆಹಾ

ಈ ಸರಸ್ವತಿ ಕಾಲಬ್ರಹ್ಮನ್ನ ಸೇರುವ

ಈ ಸೂಕ್ಷ್ಮಲಯವನ್ನೆ ಕ್ರಮವರಿತು ನೀನೀಗ 10

ಸೂತ್ರನಾಮಕ ವಾಯುದೇವ ರುದ್ರ

ಉಮೆಪ್ರದ್ಯುಮ್ನದ್ವಾರ ತ್ರಾತ

ಸಂಕುರುಷಣನಾ ದಯದಿ ಜಗ-

ನ್ಮಾತೆ ಲಕ್ಷ್ಮಿಯೊಳು ಸೇರುವರು ||ಆಹಾ||

ಚತುರಾಸ್ಯ ಜೀವರ ತನ್ನುದರದೊಳಿಟ್ಟು

ಅತಿಮೋದದಿಂದ ವಿರಾಟನ್ನೈದುವುದು11

ವಿರಾಟ್ ಬ್ರಹ್ಮನು ತಾನೆಲ್ಲಾ ತನ್ನ ಆ

ವರಣದಲ್ಲಿ ಇಪ್ಪಂಥ ತನ್ನ

ಧರೆಯಲ್ಲಿ ಲೀನವಾಗುವ ಆಗ

ಪರಿಪರಿಯಿಂದ ತನ್ಮಾತÀ್ರ ಆಹಾ

ಅರಿತು ಶಬ್ದಸ್ಪರ್ಶರೂಪರಸಗಂಧ

ಪರಿಪರಿಯಿಂದಲಿ ಲಯವನ್ನೈದುವುದಾ12

ಗಂಧದ್ವಾರ ಲಯತನ್ನ ಬಿಲದಿ ಜಾತ

ವೇದದಲ್ಲಿ ರಸ ಲಯವು ರೂಪ

ದದ್ವಾರ ಲಯ ವಾಯುವಿನೊಳು ಸ್ಪರ್ಶದ

ದ್ವಾರ ಲಯ ಆಕಾಶದೊಳು-ಆಹಾ-

ಶಬ್ದದ್ವಾರ ಲಯತಮ ಅಹಂಕಾರಾದಿ

ತದಾಂತರ್ಗತÀ ಭಗವದ್ರೂಪದಲ್ಲ್ಯೆಕ್ಯವಾ 13

ಅಹಂಕಾರತ್ರಯದಲಿ ಬಂದಾ ತತ್ತ ್ವ

ದೇಹಸೂರರೆಲ್ಲರ ಲಯವು ಇಹ

ತತ್ವಾಂತರ್ಗತ ಭಗವದ್ರೂಪಕೆ ||ಆಗ||

ಅಲ್ಲಲ್ಲಿ ತನ್ನೊಳೈಕ್ಯವೂ-ಆಹಾ

ಅಹಂಕಾರತ್ರಯ ಮಹತ್ತತ್ವದಲ್ಲಿ ಲಯ

ಮಹತ್ತತ್ತ ್ವವು ಮೂಲಪ್ರಕೃತಿಯಲ್ಲಿ ಲಯವು 14

ವಾಸುದೇವಾದಿ ಚತುರ ರೂಪ ಮತ್ಸ್ಯ

ಕೇಶವ ವಿಶ್ವಾದಿ ರೂಪ ಅಜಿತ

ಶ್ರೀಶನನಂತಾದಿರೂಪ ಮತ್ತು

ಶ್ರೀಶನಷ್ಟೋತ್ತರ ರೂಪ ||ಆಹಾ||

ತಾ ಸಕಲರೂಪಗಳು ಮೂಲರೂಪದೊಳೈಕ್ಯ

ಶಾಶ್ವತನಾದ ಶ್ರೀ ಸಚ್ಚಿದಾನಂದನ್ನಾ 15

ಗುಣಮಾನಿ ಶ್ರೀ ಭೂ ದುರ್ಗಾ ಅಂ-

ಭ್ರಣಿ ರೂಪವನ್ನೆ ತಾ ಧರಿಸೀ ಸಂ-

ಪೂರ್ಣನ್ನ ಸಾಮೀಪ್ಯ ಸೇರಿ ಪೂರ್ಣ

ಕಾಮನ್ನ ಎಡಬಿಡದೆ ನೋಡೀ ||ಆಹಾ||

ಕ್ಷಣ ಬಿಡದೊಡೆಯನ ಅಗಣಿತಗುಣಗಳ

ಕಡೆಗಾಣದೆ ನೋಳ್ಪ ನಿತ್ಯಮುಕ್ತಳ ಸಹಿತಾ16


ಏಕೋ ನಾರಾಯಣ ಆಸೀತ ಅ-

ನೇಕ ಜನರ ಸಲಹಲಿನ್ನು ತಾನೆ

ಸಾಕಾರದಲಿ ನಿಂದಿಹನು ಇಂತು

ವೇಂಕಟಾಚಲದಿ ಇನ್ನು ಮುನ್ನು ||ಆಹಾ||

ಏಕಮನಸಿನಿಂದ ಭಜಿಪ ಭಕ್ತರನ ತಾ ನಿ-

ರಾಕರಿಸದೆ ಕಾಯ್ವ ಶ್ರೀ ವೇಂಕಟೇಶಾ ನಿತ್ಯ 17

****




No comments:

Post a Comment