Monday 2 August 2021

ಏನೇನು ಭಯವಿಲ್ಲ ನಮಗೆ ಪವಮಾನ ಸೇವಕ ಗುರು ankita sirigovinda vittala

ಏನೇನು ಭಯವಿಲ್ಲ ನಮಗೆ

ಪವಮಾನ ಸೇವಕ ಗುರು ರಘುಪತಿಯ ದಯವಿರೆ ಪ


ಜೋಡು ಕರ್ಮದಿ ಬಿದ್ದುಕೇಡು ಲಾಭಕೆ ಸಿಲ್ಕಿ

ಮಾಡಿದ್ದೆ ಮಾಡುತ ಮೂಢನಾಗಿ

ರೂಢಿವಳಗೆ ತಿರಿಗ್ಯಾಡುವ ಅe್ಞÁನಿ

ಕೋಡಗನ್ನ ಸಿಂಹ ಮಾಡಿದ ಗುರುವಿರೆ 1


ಆವಾನು ದಯಮಾಡೆ ದೇವನು ವಲಿವನು

ಆವನ ನಂಬಲು ದೇವಗಣಾ

ಕಾವಲಿಗಳಾಗಿ ಕಾವದು ಅಂತ

ಕೋವಿದಾಗ್ರಣಿ ಗುರು ರಘುಪತಿ ದಯವಿರೆ 2


ಕರವೆಂಬೊ ಲೇಖನದ್ವಾರದಿಂದ ನಮ್ಮ ಶಿರಿಗೋವಿಂದ ವಿಠಲ

ರಾಯನಾ ಕರಸಿ ಸುಹೃತ್ಸುಖ ಬೆರಸಿ ಪರಸ್ಪರ ಕರವಿಡಿದು

ತಿರುಗುವ ಗುರುಕೃಪೆ ನೆರಳಿರೆ 3

****


No comments:

Post a Comment