Wednesday 1 September 2021

ವರ್ಣಿಸಲು ಸಾಧ್ಯವೇ ಧರೆಯೊಳಿನ್ನ ವರದೇಂದ್ರಗುರು ankita shyamasundara varadendra teertha stutih

 ..

ವರ್ಣಿಸಲು ಸಾಧ್ಯವೇ ಧರೆಯೊಳಿನ್ನ

ವರದೇಂದ್ರಗುರು ನಿನ್ನವರ ಮಹಿಮೆಯ ಪ


ದಶಪ್ರಮತಿ ಸುಮತಾಖ್ಯ | ಬಿಸಜನಿಧಿಗೆ ಉಡುನಾಥ

ವಸುಧಿ ಸುಮನಸವ್ರಾತ | ನಮಿತ ಖಾತ |

ವಸುಧೀಂದ್ರ ಕರಜಾತ | ಸುಶರಣರ ಸುಖದಾತ |

ವಸುಧೀಶ ಪಸರಿಸಿದ | ಅಸಮ ತವ ಚರಿತೆಯನು 1


ಸಾರ ಕನ್ನಡದಲಿ ನೀರಚಿಸುತಲಿ ತಂತ್ರ |

ಸಾರ ಮಂತ್ರವ ಪರಮ ಕಾರುಣ್ಯದಿ ||

ಶ್ರೀರಂಗನೋಲಿಸಿದ ಧಾರುಣಿಪ ದಾಸರಿಗೆ

ಸಾರಿ ಪೇಳಿದ ಪರಮೋಧಾರ ಜಿತಮಾರ 2


ಪುಣೆ ಎಂಬೊ ಪಟ್ಟದಿ ತನುಬಿಟ್ಟು ಮುದದಿಂದ

ಗುಣನಿಧಿ ಪ್ರಾಣೇಶದಾಸಾರ್ಯರ

ಮನೆಯ ಹಿತ್ತಲದೊಳಗೆ ಬಣವಿ ಬುಡದಲಿ ಬಂದು

ಘನ ತುಲಸಿ ರೂಪದಲಿ ಜನಕೆ ತೋರಿಸಿ ಚಿತ್ರ 3


ವಾದದಲಿ ರಾಮಾಖ್ಯ ವಾದಿಯಪ ಜಯ ಪೊಂದಿ

ಸಾದರದಿ ಗಜ ಭೂಷಣಾದಿಗಳನು ||

ಪಾದಕರ್ಪಿಸಲಾಗ ಭೂದೇವ ಜನಕಿತ್ತ

ಮೋದ ಬಡಿಸಿ ನಿನ್ನ ಔದಾರ್ಯ ಗುಣವ 4


ಶಾಮಸುಂದರ ಮೂಲ ರಾಮಚಂದ್ರನ ಚರಣ

ತಾಮರಸ ಷಡ್ಜಪರಮ ಸುಗಣ

ಧೀಮಂತ ಶ್ರೀಮಂತ್ರಧಾಮ ನಿಲಯರ ಪೂರ್ಣ

ಪ್ರೆಮ ಸತ್ವಾತ್ರ ಮಮ ಸ್ವಾಮಿ ಸುಚರಿತ್ರ 5

***


No comments:

Post a Comment