Wednesday 4 August 2021

ಬಾ ವೆಂಕಟರಮಣ ಭಾಗ್ಯದ ನಿಧಿಯೆ ಸುರರಿಗೆ ನಿತ್ಯ ಸುಧೆಯೆ ankita ramesha

 ..

ಬಾ ವೆಂಕಟರಮಣ ಭಾಗ್ಯದ ನಿಧಿಯೆ ಸುರರಿಗೆ ನಿತ್ಯ ಸುಧೆಯೆ ಪ.

ಕೇಶವ ನಾರಾಯಣ ಲೇಸು ಕೊಡು ಮಾಧವಎಲ್ಲ ಕಂಟಕವ ಪರಿಹರಿಸೊಎಲ್ಲ ಕಂಟಕವ ಪರಿಹರಿಸೊ ಗೋವಿಂದ ಈ ಸಮಯದಿ ಗೆಲಿಸೆಂದು 1

ವಿಷ್ಣು ಮದುಸೂದನ ಶ್ರೇಷ್ಠತ್ರಿವಿಕ್ರಮತುಷ್ಟವಾಮನ ಗೆಲಿಸೆಂದುತುಷ್ಟವಾಮನ ಗೆಲಿಸೆಂದು ಕಾಲಕಾಲಕೆಎಲ್ಲರೂ ಕರವ ಮುಗಿವೆವು2

ಶ್ರೀಧರ ಹೃಷಿಕೇಶ ಸಾಧು ಪದ್ಮನಾಭಮುದದಿ ಎನಗೆ ವರಗಳಮುದದಿ ಎನಗೆ ವರಗಳ ಕೊಡುವಂಥದಾಮೋದರಗೆ ಕರವ ಮುಗಿವೆವು 3

ಸಂಕರ್ಷಣ ವಾಸುದೇವ ಪಂಕಜಾಕ್ಷ ಪ್ರದ್ಯುಮ್ನಶಂಕಿಸದೆ ನಮಗೆ ವರಗಳ ಶಂಕಿಸದೆ ನಮಗೆ ವರಗಳ ಕೊಡುವಂಥಕುಂಕುಮಾಂಕಿತ ಘನ ಮಹಿಮನೆ 4

ಅನಿರುದ್ಧ ಪುರುಷೋತ್ತಮ ಹರುಷಾಗೊ ನಾರಸಿಂಹಪರುಷಸೂಕ್ತದಿ ಪ್ರತಿಪಾದ್ಯಪರುಷಸೂಕ್ತದಿ ಪ್ರತಿಪಾದ್ಯ ಅಚ್ಯುತಹರುಷದಿ ನಮ್ಮ ಗೆಲಿಸೆಂದು5

ಜನಾರ್ದನ ಉಪೇಂದ್ರ ಜಾಹ್ನವಿ ಜನಕನೆಜನನ ರಹಿತನೆ ಹರೇಕೃಷ್ಣಜನನ ರಹಿತನೆ ಹರೇಕೃಷ್ಣ ವೇದವ್ಯಾಸ ವನಜನಾಭನ ಮೊದಲ ಬಲಗೊಂಬೆ 6

ಮಚ್ಛ ಕೂರ್ಮ ವರಾಹ ಸ್ವಚ್ಛಾಗೊ ನಾರಸಿಂಹ ಅಚ್ಚ ಸುಶೀಲ ಬಲಿರಾಯ ಅಚ್ಚ ಸುಶೀಲ ಬಲಿಗೊಲಿದಂಥಮಚ್ಚನೇತ್ರಿಯರ ಬಲಗೊಂಬೆ 7

ಭಾರ್ಗವಿ ರಘುವೀರ ಶೀಘ್ರದಿಗೆಲಿಸೆಂದುರುಕ್ಮಿಣÉ ಪತಿಗೆನಮೋಯೆಂಬೆ ರುಕ್ಮಿಣÉ ಪತಿಗೆನಮೋಯೆಂಬೆ ಬೌದ್ಧಕಲ್ಕಿಕುಗ್ಗದೆ ನಮಗೆ ವರಗಳ 8

ಸೃಷ್ಟಿ ಸ್ಥಿತಿಲಯ ಲವಕೆ ಕಾರಣವಾದ ಜಗತ್ಪತಿ ಜಾಹ್ನವಿ ಜನಕನೆಜಗತ್ಪತಿ ಜಾಹ್ನವಿ ಜನಕನೆ ರಾಮೇಶನ ನಗಧರನ ಮೊದಲ ಬಲಗೊಂಬೆ9

****


No comments:

Post a Comment