Sunday 1 August 2021

ಭಾರತೀ ರಮಣ ಪಾಲಿಸು ಕರುಣ ಶ್ರೀರಾಮನ ಪದ ನಿಜ ಶರಣ ankita lakshmikanta

 ..

kruti by ಲಕ್ಷ್ಮೀನಾರಯಣರಾಯರು Lakshminarayanaru 


ಭಾರತಿ ರಮಣ ಪಾಲಿಸು ಕರುಣ

ಶ್ರೀರಾಮನ ಪದ ನಿಜ ಶರಣ ಪ


ಕೌರವಧಾರಣ ಭವ ಸಂಹಾರಣ

ಪರಾಶರ ಮತ ವಿಸ್ತರಣ ಅ.ಪ.


ತ್ರೇತೆಯೊಳಂಜನೆ ಉದರದಿ ಜನಿಸಿ

ಸೀತಾನಾಥನ ಪಾದಕೆ ನಮಿಸಿ

ದೌತ್ಯವ ವಹಿಸಿ ಕೀರ್ತಿಯ ಗಳಿಸಿ

ಭಕ್ತಾಗ್ರಣಿಯೆನಿಸಿದ ಗುರುವೆ 1


ದ್ವಾಪರದಲಿ ನೃಪ ಕುಲದಲಿ ಬಂದು

ಪಾಪಿ ಮಾರ್ಗದ ಪ್ರಮುಖರ ಕೊಂದು

ದ್ರೌಪದಿ ಬೇಡಿದ ಸುಮವನು ತಂದು

ಶ್ರೀ ಪತಿಗರ್ಥಿಯ ಸಲಿಸಿದ ಗುರುವೆ 2


ಕಲಿಯೊಳು ಕುಜನರ ಮತಗಳ ಜರಿದು

ಸುಲಲಿತ ಭಕ್ತಿಯ ಮತವನು ಒರೆದು

ನೆಲೆಸಲು ಲಕ್ಷ್ಮೀಕಾಂತನ ಮಹಿಮೆಯ

ತುಳುವ ವಿಪ್ರನಲಿ ಉದಿಸಿದೆ ಗುರುವೆ 3

***


No comments:

Post a Comment