Sunday 1 August 2021

ಯಾತಕೆ ಚಿಂತಿಪೆ ಬಿಡು ನೀ ಪರ ಮಾತುಮ ಪೊರೆವನು ankita lakshmikanta

..

kruti by ಲಕ್ಷ್ಮೀನಾರಯಣರಾಯರು Lakshminarayanaru 


ಯಾತಕೆ ಚಿಂತಿಪೆ ಬಿಡು ನೀ | ಪರ

ಮಾತುಮ ಪೊರೆವನು ಶರಣರ ಬಿಡದೆ

ಸಂಶಯ ಬಿಡದೆ

ನಂಬು ನೀ ದೃಢದೆ ಪ


ಧರ್ಮವು ಹೊಸಗಿ ಅಧರ್ಮವು ಮುಸುಗಿರೆ

ಧರ್ಮಸ್ಥಾಪಕ ತಾನು ಒಮ್ಮೆಲೆ ಬಹನೆ

ದೀಕ್ಷೆಯಿಂದಿಹನೆ

ಕೀರ್ತಿಯತಹನೆ 1


ದುಷ್ಟರ ಶಿಕ್ಷಿಸೆ ಶಿಷ್ಟರ ರಕ್ಷಿಸೆ

ಸೃಷ್ಟಿಗೆ ಬಹೆನೆಂದು ಕೊಟ್ಟಿಹನಭಯ

ಎಂದಿಗು ಮರೆಯ

ನಮ್ಮನು ತೊರೆಯ 2


ಅನ್ಯ ಚಿಂತೆಯ ಬಿಟ್ಟು ತನ್ನಲೆ ಮನವಿಟ್ಟು

ಸನ್ನುತಿಪರ ಭಾರ ತನ್ನದೆಂದಾತ

ಘನ್ನ ಶ್ರೀಕಾಂತ

ಮುಕ್ತಿಪ್ರಧಾತ3

***

 

No comments:

Post a Comment