Monday 2 August 2021

ಸತ್ಯಧ್ಯಾನರ ನಿತ್ಯ ಸ್ಮರಿಸಿ ಕೃತಕೃತ್ಯನು ನೀನಾಗೊ ankita karpara narahari satyadhyana teertha stutih

ಸತ್ಯಧ್ಯಾನರ ನಿತ್ಯ ಸ್ಮರಿಸಿ ಕೃತಕೃತ್ಯನು ನೀನಾಗೊ ಪ


ಮತ್ರ್ಯನೆ ಶ್ರೀ ಗುರು ಸತ್ಯe್ಞÁನ ಸುತೀರ್ಥರ ಕರ ಕಂ-

ಜೋತ್ಥರಾದ ಗುರು ಅ.ಪ


ಸುತ್ತಲು ಬಿಡದೆ ಧರಿತ್ರಿಯೊಳಗೆ ಸುಕ್ಷೇತ್ರಗಳಲಿ ಚರಿಸಿ

ಮತ್ತ ಮಾಯಿ ಜನ ಹಸ್ತಿ ಗಣಕೆ ಪಂಚ ವಕ್ತ್ರರೆಂದು ಕರಿಸಿ

ಛಾತ್ರ ವರ್ಗ ಸಂಯುಕ್ತರಾಗಿ ಸುಖತೀರ್ಥರ ಸುಮತಕೆ

ಸಂಸ್ಥಾಪಕ ಗುರು 1


ಏನು ಕರುಣವೊ e್ಞÁನಿಗಳನು ಧನದಾನದಿ ದಣಿಸುತಲಿ

ಕ್ಷೋಣಿ ವಿಬುಧರಿಗೆ ನ್ಯಾಯ ಸುಧಾರಸ ಪಾನ ಮಾಡಿಸುತಲಿ

ದೀನ ಜನಕೆ ಸುರಧೇನು ಎನಿಸಿದ ಮಹಾನುಭಾವರೆಂದು

ಸಾನುರಾಗದಲಿ 2


ಹೇಮ ವಜ್ರಮಯ ಮಂಟಪದಲಿ

ಶ್ರೀರಾಮನ ಪದಪದುಮ

ನೇಮದಿ ಪೂಜಿಸುವಾ ಮಹ ವೈಭವ

ನೋಳ್ಪಜನರ ಜನುಮ

ಈ ಮಹಿಯೊಳು ಸಾರ್ಥಕವೆನಿಸಿತು ಬಹು

ಧೀಮಜ್ಜನರಿಗೆ ಕಾಮಿತ ಗರಿಯುವ3


ಹರಿಪದ ಪೊಂದಲು ಮರುತ ಶಾಸ್ತ್ರವೆಂಬೊ

ತರಣಿಯೋಳ್ಪಗಲಿರುಳು

ಹರುಷದಿ ಕುಳಿತಿಹ ಧರೆಸುರರನು

ಭವಶರಧಿಯ ದಾಟಿಸಲು

ಕರದೊಳು ದಂಡÀವ ಧರಿಸಿ ನಿಂದಿರುವರರುಣ

ವಸನದಲಿ ಪರಿಶೋಭಿತ ತನು 4


ಶರಣು ಜನರ ಬಹು ದುರಿತ ತಮಕೆ ದಿನಕರ ಸಮರೆನಿಸುತಲಿ

ಸಿರಿ ಕಾರ್ಪರ ನರಹರಿಯ ಚರಣಯುಗ್ಮ ಸ್ಮರಿಸುತ ಹರುಷದಲಿ

ಧರೆಯೊಳು ಪಂಢರ ಪುರ ಸುಕ್ಷೇತ್ರದಿವರತನುವಿರಿಸಿದ

ಪರಮ ಮಹಿಮ ಗುರು 5

***


ಸತ್ಯಧ್ಯಾನರ ನಿತ್ಯ ಸ್ಮರಿಸಿ

ಕೃತಕೃತ್ಯನು ನೀನಾಗೋ | ಪ |


ಮರ್ತ್ಯನೆ ಶ್ರೀಗುರು ಸತ್ಯಜ್ಞಾನ |

ಸುತೀರ್ಥರಕರಕಂಜೋತ್ಥರಾದ ಗುರು | ಅ.ಪ |


ಸುತ್ತಲ್ ಬಿಡದೆ ಧರಿತ್ರಿಯೊಳಗೆ ಸುಕ್ಷೇತ್ರಗಳ ಚರಿಸಿ

ಮತ್ತಮಾಜಿಯಜ ಹಸ್ತಿಗಣಕೆ ಪಂಚವಕ್ತ್ರರೆಂದು ಕರೆಸಿ

ಛಾತ್ರವರ್ಗ ಸಂಯುಕ್ತರಾಗಿ ಸುಖ

ತೀರ್ಥರ ಸುಮತಕೆ ಸಂಸ್ಥಾಪಕ ಗುರು | ೧ |


ಏನು ಕರುಣವೋ ಜ್ಞನಿಗಳನು ಧನದಾನದಿ ದಣಿಸುತಲಿ

ಕ್ಷೋಣಿವಿಬುಧರಿಗೆ ನ್ಯಾಯ ಸುಧಾರಸಪಾನ ಮಾಡಿಸುತಲಿ

ದೀನ ಜನಗೆ ಸುರಧೇನು ಎನಿಸಿದ ಮ-

ಹಾನುಭಾವರೆಂದು ಸಾನುರಾಗದಲಿ | ೨ |


ಹೇಮವಜ್ರಮಯ ಮಂಟಪದಲಿ ಶ್ರೀರಾಮನ ಪದಪದುಮ

ನೇಮದಿ ಪೂಜಿಸುವಾ ಮಹವೈಭವ ನೋಳ್ಪಜನರ ಜನುಮ

ಈ ಮಹಿಯೊಳು ಸಾರ್ಥಕವೆನಿಸಿತು ಬಹು

ಧೀಮಜ್ಜನರಿಗೆ ಕಾಮಿತ ಗರೆಯುವ | ೩ |


ಹರಿಪದಪೊಂದಲು ಮರುತಶಾಸ್ತ್ರವೆಂಬೋ ತರಣಿಯೋಳ್ಪಗಲಿರಳು

ಹರುಷದಿ ಕುಳಿತಿಹ ಧರೆಸುರರನು ಭವಶರಧಿ ದಾಟಿಸಲು

ಕರದೊಳು ದಂಡವ ಧರಿಸಿ ನಿಂದಿರುವರ

ರುಣವಸನದಲಿ ಪರಿಶೋಭಿತತನು | ೪ |


ಶರಣ ಜನರ ಬಹುದುರಿತ ತಮಕೆ ದಿನಕರ

ಸಮರೆನಿಸುತಲಿ ಸಿರಿ ಕಾರ್ಪರ ನರಹರಿಯ ಚರಣಯುಗ್ಮ

ಸ್ಮರಿಸುತ ಹರುಷದಲಿ ಧರೆಯೊಳು ಪಂಡರಪುರ ಸುಕ್ಷೇತ್ರದಿ

ವರತನುವಿರಿಸಿದ ಪರಮ ಮಹಿಮ ಗುರು | ೫ |

****


No comments:

Post a Comment