Monday 2 August 2021

ಮುಂಚೆ ನೋಡಣು ಬನ್ನಿ ಜನಗಳೆ ankita karpara narahari

ಮುಂಚೆ ನೋಡಣು ಬನ್ನಿ ಜನಗಳೆ

ಹಂಚಿನಾಳಿನವ ಹನುಮನ

ವಾಂಛಿತಾರ್ಥಗಳೀವ ಭಾವಿ

ವಿರಂಚಿದೇವ ಪದಾರ್ಹನಾ ಪ


ಅಂದು ಕಪಿಕುಲದಿಂದ ದುಸ್ತರ

ಸಿಂಧು ದಾಟಿದ ಧೀರನ

ವಂದಿಸುತ ಭೂನಂದನೆಯು

ಕ್ಷೇಮೆಂದು ರಾಮಗೆ ಪೇಳ್ದನ 1


ಧಾರುಣಿಯೊಳವತರಿಸಿ ಕುಂತಿ

ಕುಮಾರನೆನಿಸಿದ ಧೀರನ

ಕೌರವಾಂತಕನೆನಿಸಿ ಕೃಷ್ಣನ

ಭೂರಿ ಕರುಣವ ಪಡೆದನ 2


ವಾದಿಗಳ ನಿರ್ವಾದ ಗೈಸಿದ

ಬಾದರಾಯಣನ ಶಿಷ್ಯನ

ಭೇದಮತವನು ಸ್ಥಾಪಿಸಿದ ಗುರು

ಮೋದ ತೀರ್ಥ ಯತೀಂದ್ರನಾ 3


ಪಾಲಕಿಯ ಉತ್ಸವದಿ ಮೆರೆಯುತ

ವಾಲಗವ ಕೈಕೊಳುವನ

ಕಾಲಕಾಲಗಳಲ್ಲಿ ಭಜಕರ

ಮ್ಯಾಳವನು ಪಾಲಿಸುವನಾ 4


ಶೇಷಭೂಷಣ ವಾಸವಾದಿಸು

ರೇಶ ಭಕುತರ ಪೋಷನ

ಶ್ರೀಶ ಕಾರ್ಪರವಾಸ ಸಿರಿನರ

ಕೇಸರಿಗೆ ಪ್ರಿಯ ದಾಸನ5

****


No comments:

Post a Comment