Wednesday 1 September 2021

ಹಗಳಿರಲು ಭಜಿಸಿರೋ ರಘುಪ್ರೇಮತೀರ್ಥರನು ankita gurujagannatha vittala raghuprema teertha stutih

 " ಶ್ರೀ ಸ್ವಾಮಿರಾಯಾಚಾರ್ಯ ಮುತ್ತಗಿ (1837-1918)".... (gurujagannatha vittala ankita)


ಹಗಳಿರಲು ಭಜಿಸಿರೋ 

ರಘುಪ್ರೇಮತೀರ್ಥರನು ।

ಬಗೆ ಬಗೆಯ ಸುಖಗಳನು 

ಕೊಡುವರಿವರು ।। ಪಲ್ಲವಿ ।।

ದಾನ ಧರ್ಮಗಳಲ್ಲಿ ।

ಭಾನುಜಗನು ನೆನಿಸಿ ।

ಮಾನಸ ಪೂಜೆಯಲಿ ನಿರುತರಾಗಿ ।।

ಏನು ಹೇಳಲಿ ಇವರ 

ಮಹಿಮೆಯ ಅಲ್ಪರಿಗೆ ।

ಏನೇನು ತೋರದೋ 

ಜ್ಞಾನಿಗಲ್ಲದಲೆ ।। ಚರಣ ।।

ಯಾದವಗಿರಿಯಲ್ಲಿ 

ಬಂದ ಹರಿ ಭಕ್ತರಿಗೆ ।

ಆದರೂಪಚಾರವನು 

ಮಾಡುತ ಅವರುಗಳ ।

ಬಾಧೆಗಳ ಪರಿಹರಿಸಿ ।।

ಮೋದವನು 

ಕೊಡುವಂಥ ಸಾಧು ।

ಯತಿಗಳಿವರು 

ಸಂದೇಹವಿಲ್ಲ ।। ಚರಣ ।।

ಸೃಷ್ಟಿ ಲಯ ಚಿಂತನೆಯ 

ಗುಟ್ಟಾಗಿ ಮಾಡುತ ।

ದಿಟ್ಟ ಮನಸ್ಸಿನಿಂದ 

ಕುಳಿತುಕೊಂಡು ।

ಸೃಷ್ಟಿ ಒಡೆಯಾ ಶ್ರೀ -

ತಿರುಮಲಾಪುರ ವಾಸನಲ್ಲಿ ।

ಮನಸಿಟ್ಟು ಹರಿ ಪದವನ್ನೇ -

ಸೇರಿದವರಿವರು ।। ಚರಣ ।।

***


No comments:

Post a Comment