Wednesday 1 September 2021

ನಿನಗೇನೊ ಭಕುತರ ಚಿಂತೀ ಘನಮಹಿಮ ಮಹÀದಾದಿ ಸುರವಂದ್ಯ ತಿಮ್ಮಾ ankita gurujagannatha vittala

 ..

ನಿನಗೇನೊ ಭಕುತರ ಚಿಂತೀ

ಘನಮಹಿಮ ಮಹÀದಾದಿ ಸುರವಂದ್ಯ ತಿಮ್ಮಾ ಪ


ಶಿರಿದೇವಿ ನಿನರಾಣಿ ಪರಮೇಷ್ಟಿ ನಿನಪುತ್ರ

ಕಿರಿಯ ಮಗನು ಜಗತ್ಪ್ರಾಣದೇವಾ

ಹಿರಿಯ ಸೊಸೆಯು ವಾಣಿ ಕಿರಿಯು ಭಾರತೀ ದೇವಿ

ಪುರಹರನು ಮೊಮ್ಮಗನು ಸುರರು ಪರಿವಾರ 1


ಸಕಲಲೋಕಕೆ ಅರಸು ಲಕುಮಿಕಾಂತನು ಎಂದು

ನಿಖಿಳವೇದ ಸ್ಮøತಿಯು ಸಾರುತಿಹದೋ

ಅಖಿಳವ್ಯಾಪಕನಾಗಿ ಸಕಲಸುರನರರಿಂದ

ಭಕುತಿಪೂರ್ವಕÀ ಓಲಗವಕೈಕೊಂಬ ಸಮಯದಲಿ 2


ಸುರನಾಥ ನೀನಲ್ಲದಿತರ ದೇವತೆಯುಂಟೆ

ಸರವೋತ್ತಮಾನೆಂಬನಾವನವನೋ

ಸರಸಗುಣನಿಧಿಯೆ ಶ್ರೀ ಗುರುಜಗನ್ನಾಥವಿಠಲ

ವರಭಾಗ್ಯ ಮಬ್ಬಿನಲಿ ಇರುವೊ ಸಮಯದಲಿ 3

***


No comments:

Post a Comment