Monday 2 August 2021

ಪರಮ ಕಾರುಣ್ಯ ಗುರು ಕರುಣಿಸೆನಗ್ಹರಿ ಪದವ ankita gopalakrishna vittala tandemuddumohana vittala dasa stutih

ಪರಮ ಕಾರುಣ್ಯ ಗುರು ಕರುಣಿಸೆನಗ್ಹರಿ ಪದವ

ಶರಣೆಂದು ನಮಿಪೆ ನಿಮಗೆ ಪ.


ಹರಿಯ ದಾಸತ್ವದಲಿ ವರದೀಕ್ಷೆಯನೆ ಕೊಟ್ಟು

ಕರುಣಿಸಿ ಕೃಪೆಗೈದಿರಿ ಗುರುವೆ ಅ.ಪ.


ಅಂಕಿತವ ಮೊದಲಿತ್ತು ಹೃದಯಾಂಕದಲಿ ನಿಲಸಿ

ಮಂಕುಬುದ್ಧಿಯ ತೊಲಗಿಸಿ

ಶಂಖ ಚಕ್ರಾಂಕಿತನ ಪದಕಮಲವನು ಮನ

ಪಂಕಜದೊಳಗೆ ತೋರಿ

ಶಂಕರಾರ್ಚಿತನ ಕೃಪೆ ಎನ್ನೊಳಾಗಲಿ ಎಂದು

ಶಂಕಿಸದೆ ವರವಿತ್ತಿರಿ ಗುರುವೆ 1

ಶ್ರೀನಿವಾಸನು ನಿಮ್ಮೊಳ್ ಸಾನುರಾಗದಿ ನೆಲಸಿ

ತಾನಿತ್ತ ದಾಸತ್ವವ

ಏನೆಂಬೆ ಈಗಭಿಮಾನವ ತೊರೆ ಎನುತ

ತಾ ನುಡಿಸುತಿಹನು ನಿಮ್ಮೊಳ್

ಮಾನಾಭಿಮಾನ ಹರಿ ಗುರುವಶವಾಗಿರಲು

ನಾನಳುಕಲಿದಕೇತಕೆ ಗುರುವೆ 2

ಸ್ವಪ್ನದಲಿ ದಾಸತ್ವ ಸಿದ್ಧಿಸಲಿ ಎಂದೆನುವ

ಅಪ್ರತಿಮ ನುಡಿ ಕೇಳಿದೆ

ಕ್ಷಿಪ್ರದಿಂದಲಿ ಕರುಣಿಸಿದಿರೆನಗಾಗಿದನಿನ್ನು

ತಪ್ತವಾಯಿತು ಭವದ ದುರಿತ

ಆಪ್ತಗುರು ನಿಮ್ಮಂಥ ಮಹಿಮರನು ನಾ ಕಾಣೆ

ಗುಪ್ತದಲಿ ಜಗದಿ ಮೆರೆವ ಗುರುವೆ 3

ಇತ್ತಿರೆನಗೊಂದೊಂದೆ ದಾಸತ್ವ ಸಾಮಗ್ರಿ

ಅತ್ಯಧಿಕ ಕರುಣೆಯಿಂದ

ನಿತ್ಯವಾಗಿರಲಿ ಹರಿದಾಸತ್ವ ಇಹ ಪರದಿ

ಸತ್ಯವಂತರ ಕೃಪೆಯಲಿ

ನಿತ್ಯದಲಿ ನೀತ ಗುರು ನಿಮ್ಮಿಂದ ನಿಜ ರೂಪ

ವ್ಯಕ್ತವಾಗಲಿ ಜ್ಞಾನದೀ ಗುರುವೆ 4

ಸಿರಿ ತಂದೆ ಮುದ್ದುಮೋಹನದಾಸರಾಯ

ಗುರುವೆ ನಿಮ್ಮ ಕರುಣದಿ

ಹರಿದುಹೋಯಿತು ಎನ್ನ ಪರಿ ಪರಿ ಭವಪಾಶ

ದುರಿತಗಳು ದೂರಾದವು

ಪರಮ ಸಾತ್ವಿಕರೆ ಸಿರಿವರನ ಪದ ಭಜಿಪಂಥ

ವರದೇವತಾಂಶರೆನಿಪ ಗುರುವೆ 5

ಮಂದರಿಗೆ ಬಹು ಮಲಿನರಂದದಲಿ ತೋರುತ

ಕಂದರ್ಪಪಿತನ ಸ್ಮರಿಪ

ಒಂದೊಂದು ವ್ಯಾಪಾರ ಅರಿಯಲಳವಲ್ಲಿನ್ನು

ಮಂದಮತಿಯಾದ ಎನಗೆ

ಬಂದು ಭೂಲೋಕದಲಿ ಸಜ್ಜನರನುದ್ಧರಿಪ

ತಂದೆ ನಿಮ್ಮರಿವರ್ಯಾರೊ ಗುರುವೆ 6

ಅರಿಯೆ ಅನ್ಯರನಿನ್ನು ಶ್ರೀ ಗುರುವೆ ಕರುಣಿಸಿರಿ

ವರe್ಞÁನ ಸುಧೆಯನಿತ್ತು

ವರಶೇಷಶಯನನ ನಿರುತ ಸೇವಿಸುವಂಥ

ಪರಮಭಾಗ್ಯವ ಕರುಣಿಸಿ

ಸಿರಿವರ ಗೋಪಾಲಕೃಷ್ಣವಿಠ್ಠಲನ ರೂಪ

ತ್ವರಿತದಿಂ ತೋರಿ ಪೊರೆಯೊ ಗುರುವೆ 7

****


No comments:

Post a Comment