..
ರಾಗ - : ತಾಳ -
ಗೋಪಾಲವಿಟ್ಠಲ ನೀ ಕಾಪಾಡೊ ಎನ್ನನು
ಅಪಾರ ಜನುಮದಿ ಪೊಂದಿ ಇಪ್ಪೆ ನಿನ್ನ ll ಪ ll
ಉದಿತ ತರಣಿನಿಭ ಪದ ಪದ್ಮ ನಿನ್ನಯ
ಹೃದಯದೊಳಗಿರಿಸಿ ಮುದದಿಂದ ಧ್ಯಾನಿಪ
ಸದಯರುಗಳ ಪಾದ ಪದುಮ ಸೇವೆಯನು
ಒದಗಿ ಪಾಲಿಸೊ ಶಶಿವದನ ಸುಸದನನೆ ll ೧ ll
ವಾಸುದೇವನೆ ಎನ್ನ ದೋಷಿಯೆಂತೆಂದರೆ
ಆಸರಿನ್ಯಾರು ನಿನ್ನ ದಾಸರದಾಸಗೆ
ದಾಸವಿನುತ ಹೀಗುದಾಸೀನ ಮಾಡಲು
ದಾಸಜನರು ನಿನ್ನ ಲೇಶವು ಮೆಚ್ಚರು ll ೨ ll
ಪಿರಿಯರೆಲ್ಲರು ನಿನ್ನ ಚರಣವ ಪೂಜಿಸಿ
ಪರಮಾನುಗ್ರಹ ಮಾಡಿ ಪರಿಪಾಲಿಸಿಪ್ಪರೆನ್ನ
ನಿರುತದಿಬೇಡುವೆ ಗೋಪಾಲವಿಟ್ಠಲ ಶ್ರೀಲೋಲನೆ
ದೊರೆಯೆ ನಿನ್ನ ಮೂರುತಿ ಬರಲೆನ್ನ ಮನಸಿಗೆ ll ೩ ll
***
ಗೋಪಾಲವಿಠಲ ನೀ ಕಾಪಾಡೊ ಎನ್ನನುಅಪಾರ ಜನುಮದಿ ಪೊಂದಿ ಇಪ್ಪೆ ನಿನ್ನ ಪ.
ಉದಿತ ತರಣೀನಿಭ ಪದಪದ್ಮ ನಿನ್ನಯಹೃದಯದೊಳಗಿರಿಸಿ ಮುದದಿಂದ ಧ್ಯಾನಿಪಸದಯುಗಳ ಪಾದಪದುಮಸೇವೆಯನುಒದಗಿ ಪಾಲಿಸೊ ಶಶಿವದನ ಸಂ(ಕಂ)ಸದನನೆ 1
ವಾಸುದೇವನೆ ಎನ್ನ ದೋಷಿಯೆಂತೆಂದರೆಆಸರಿನ್ನ್ಯಾರು ನಿನ್ನ ದಾಸರದಾಸಗೆದಾಸವಿನುತ ಹೀಗುದಾಸೀನ ಮಾಡಲುದಾಸಜನರು ನಿನ್ನ ಲೇಶವು ಮೆಚ್ಚರು 2
ಪಿರಿಯರೆಲ್ಲರು ನಿನ್ನ ಚರಣವ ಪೂಜಿಸಿಪರಮಾನುಗ್ರಹ ಪರಿಪಾಲಿಸಿಪ್ಪರೆನ್ನನಿರುತದಿಬೇಡುವೆ ಗೋಪಾಲವಿಠಲ ಶ್ರೀಲೋಲನೆದೊರೆಯೆ ನಿನ್ನ ಮೂರುತಿ ಬರವೆನ್ನ ಮನಸಿಗೆ 3
***
No comments:
Post a Comment