Wednesday 1 September 2021

ಮಂಗಳಾರತಿ ಮಾಡಿರೆ ಮುದ್ದು ಅಂಗನೆಯರು ಪಾಡಿರೆ ankita bheemesha krishna

 ..

ಮಂಗಳಾರತಿ ಮಾಡಿರೆ ಮುದ್ದು ಅಂಗನೆಯರು ಪಾಡಿರೆ

ಮಂಗಳಾರತಿ ಮಾಡಿ ಅಂಗನೆಯರು ಪಾಡಿ

ರಂಗರುಕ್ಮಿಣಿ ಸತ್ಯಭಾಮೆಗೆ ಬಂಗಾರದ ಪ


ಮಂಟಪದೊಳು ಸತಿಯರೆಂಟುಮಂದಿಯು ಕೂಡಿ

ಒಂಟಿಮುತ್ತೊ ್ಹಳೆವೊ ವೈಕುಂಠಪತಿಗೆ ಬ್ಯಾಗ 1


ವಾರಿಜಾಕ್ಷಿಯರ್ಹದಿನಾರುಸಾವಿರ ಮಂದಿ

ಮಾರನಯ್ಯನ ಮುದ್ದು ಮಕ್ಕಳ ಸಹಿತಾಗಿ 2


ಎಡಬಲ ತೊಡೆಯಲ್ಲಿ ಮಡದಿ ರುಕ್ಮಿಣಿ ಭಾಮೆ

ನಡುವೆ ಭೀಮೇಶಕೃಷ್ಣ ನಗುತ ಕುಳಿತನಾಗ 3

***


No comments:

Post a Comment