Thursday 1 July 2021

ಶ್ರೀಕಾಂತ ವಿಠ್ಠಲ ತವ ಸೇವಕನಾ ದಿವನ ನೀ ಕಾಪಾಡಿ ಸಲಹೋ ankita uragadri vittala srikanta vittala stutih

ಶ್ರೀ ಶ್ರೀಕಾಂತ ವಿಠ್ಠಲ - ಹೆಚ್ ಎಸ್ ಶ್ರೀನಿವಾಸ ಮೂರ್ತಿ
ಉಪದೇಶ ಗುರುಗಳು : ಶ್ರೀ ಉರಗಾದ್ರಿವಾಸ ವಿಠ್ಠಲರು
" ಪೂಜ್ಯ ಶ್ರೀ ಹೆಚ್ ಎಸ್ ಶ್ರೀನಿವಾಸ ಮೂರ್ತಿಗಳಿಗೆ ಶ್ರೀ ಉರಗಾದ್ರಿವಾಸವಿಠ್ಠಲರು ಕೊಟ್ಟ ಅಂಕಿತ ಪದ "

 ಶ್ರೀಕಾಂತ ವಿಠ್ಠಲ  ತವ -

ಸೇವಕನಾ ದಿವನ ।
ನೀ ಕಾಪಾಡಿ ಸಲಹೋ -
ಸನ್ಮತಿಯನಿತ್ತು ।। ಪಲ್ಲವಿ ।।

ವಾಕು ಲಾಲಿಸು ಈ ಬಾಲ -
ನಿನ್ನವನೆಂದು । ನಿ ।
ರಾಕರಿಸದೆ ನಿನ್ನ -
ಭಕುತಿ ಭಾಗ್ಯವನ್ನಿತ್ತು ।। ಅ ಪ ।।

ಆಯುರಾರೋಗ್ಯ -
ಸದ್ವಿದ್ಯ । ವಾ ।
ಕ್ಕಾಯ ಮನದ -
ಧ್ಯಾನ ವೃದ್ಧಿಗೈಸಿ ।
ವಾಯುಮತಾಗಮ -
ತತ್ತ್ವದಾಯವ ತಿಳಿಸು ।
ಜೀಯ ನಿನ್ನ ಸೇವೆಯನಿತ್ತು -
ಕಾಯೋ ।। ಚರಣ ।।

 ಮಾತಾ ಪಿತೃ ಭ್ರಾತೃ -
ಬಂಧು ಭಗಿನಿಯರಲ್ಲಿ । ಶ್ರೀ ।
ಪತಿ ವಿಭೂತಿಗಳ ನೆನೆದು ।
ಜಿತ ಮನದಿ ಪ್ರೀತಿ ವಿಶ್ವಾಸದಲಿ ।
ಸತತ ಶ್ರೀ ಹರಿ ನಿನ್ನ ಬಿಂಬ -
ಕ್ರಿಯಗಳನೆ ಅರುಹೋ ।। ಚರಣ ।।
***

No comments:

Post a Comment